ಡಾ.ವಿಷ್ಣುವರ್ಧನ್ ಹಾಗೂ ಅಂಬರೀಶ್ (Dr.Vishnuvardhan & Ambareesh) ಕರ್ನಾಟಕ ಕಂಡ ಆತ್ಮೀಯ ಸ್ನೇಹಿತರು. ಸಿನಿಮಾ ರಂಗಕ್ಕೆ ಬಂದ ಮೇಲೆ ಪರಿಚಿತರಾದರು ಬಾಲ್ಯ ಸ್ನೇಹಿತರಂತೆ ಕೊನೆಯವರೆಗೂ ಅನ್ಯೋನ್ಯವಾಗಿದ್ದರು ಈ ಕುಚುಕುಗಳು. ನಾಗರಹಾವು ಸಿನಿಮಾದಿಂದ ಇಬ್ಬರು ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು ಇವರ ಸ್ನೇಹಕ್ಕೆ ಅಕ್ಷರಶಃ ಪ್ರತಿಬಿಂಬದಂತೆ ಇದ್ದಿದ್ದು ದಿಗ್ಗಜರು ಸಿನಿಮಾ.
ತೆರೆ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲಿ ಇದೇ ರೀತಿ ಬದುಕಿಬಿಟ್ಟರು ಈ ದೋಸ್ತ್ ಗಳು. ಒಬ್ಬರಿಗೊಬ್ಬರು ಏನನ್ನಾದರೂ ಮಾಡಲು ಸದಾ ಸಿದ್ಧ. ಒಬ್ಬರಿಗೊಬ್ಬರು ತಮ್ಮನ್ನೇ ಅರ್ಪಿಸಿಕೊಳ್ಳುವಷ್ಟು ನಂಬಿಕೆ, ಪ್ರೀತಿ, ವಿಶ್ವಾಸ ಮತ್ತು ಅದಕ್ಕೆ ತಕ್ಕ ಗೌರವ ಇಬ್ಬರ ಕಡೆಯಿಂದಲೂ ಇತ್ತು. ಒಂದೇ ಕುಟುಂಬದಂತೆ ಬಹಳ ಆತ್ಮೀಯತೆಯಿಂದ ಇಬ್ಬರ ಮನೆಯವರು ಹೊಂದುಕೊಂಡಿದ್ದರು.
ರವಿಚಂದ್ರನ್ ನಟಿಸಿದ 20 ಚಿತ್ರಗಳಿಗೆ ಧ್ವನಿ ಕೊಟ್ಟೆ, ಆದ್ರೆ ಅವರಿಂದ ಆ ಗೌರವ ಮಾತ್ರ ಸಿಗಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಕಂಠದಾನ ಕಲಾವಿದ ಶ್ರೀನಿವಾಸ್ ಪ್ರಭು.!
ಇವರ ಸ್ನೇಹಕ್ಕೆ ಸಾಕ್ಷಿಯಾಗಿ ಅನೇಕ ವಿಷಯಗಳು ಇವೆ, ಅದರಲ್ಲಿ ಇಂದು ಈ ಅಂಕಣದಲ್ಲಿ ವಿಶೇಷವಾದ ಕೆಲಸ ಸಂಗತಿಯನ್ನು ತಿಳಿಸಲು ಇಚ್ಚಿಸುತ್ತೇವೆ. ಅದೇನೆಂದರೆ, ಎಲ್ಲರಿಗೂ ಗೊತ್ತಿರುವ ಹಾಗೆ ವಿಷ್ಣುವರ್ಧನ್ ಅವರು ಬಹಳ ಶಿಸ್ತಿನ ಮನುಷ್ಯ ಅವರಿಗೆ ಆಧ್ಯಾತ್ಮದ ಕಡೆ ಅಪಾರ ಒಲವಿತ್ತು, ಹಾಗಾಗಿ ಜೀವನದಲ್ಲಿ ಒಂದು ಹಂತ ದಾಟಿದ ಬಳಿಕ ಅವರು ತಮ್ಮ ಬದುಕುವ ಶೈಲಿಯನ್ನೇ ಬದಲಾಯಿಸಿ ಕೊಂಡಿದ್ದರು ಮತ್ತು ಯಾವುದೇ ರೀತಿಯ ದು’ಶ್ಚ’ಟಗಳು ಕೂಡ ಅವರಿಗೆ ಇರಲಿಲ್ಲ.
ಆದರೂ ಅವರ ಮನೆಯಲ್ಲಿ ಒಂದು ಬಾರ್ ಇತ್ತು ಯಾರಿಗಾಗಿ ಎಂದರೆ ಅದು ಅಂಬರೀಶ್ ಗಾಗಿ ಮಾತ್ರ ಮೀಸಲಾಗಿತ್ತು. ಇದುವರೆಗೂ ವಿಷ್ಣುವರ್ಧನ್ ಅವರ ಮನೆಯಲ್ಲಿರುವ ಆ ಬಾರ್ ಗೆ ಅಂಬರೀಶ್ ಬಿಟ್ಟು ಮತ್ತೆ ಯಾರಿಗೂ ಪ್ರವೇಶ ಸಿಕ್ಕಿಲ್ಲವಂತೆ ಅಂಬರೀಶ್ ಅವರಿಗೆ ಮಧ್ಯಪಾನ ಮತ್ತು ಮಾಂಸದ ಅಡುಗೆ ಎಂದರೆ ಬಹಳ ಇಷ್ಟ ಎಂದು ವಿಷ್ಣುವರ್ಧನ್ ರಿಗೂ ಗೊತ್ತಿತ್ತು.
ಆದರೆ ಅವರ ಮನೆಯಲ್ಲಿ ಇದು ಸಿಗುತ್ತಿರಲಿಲ್ಲ ಒಂದೊಮ್ಮೆ ತಮಾಷೆಗಾಗಿ ಅಂಬಿ ಎಷ್ಟು ದೊಡ್ಡ ಸ್ಟಾರ್ ನಿನ್ನ ಮನೆಗೆ ಬಂದರೆ ಗುಂಡು ತುಂಡು ಏನು ಇಲ್ಲವಲ್ಲ ಎಂದು ರೇಗಿಸಿದ್ದರಂತೆ. ಅಂದರಿಂದ ನೊಂ’ದು ಕೊಂಡ ವಿಷ್ಣು ನಿಜ ಅಲ್ಲವೇ ನನ್ನ ಮನೆಯಲ್ಲಿ ಅವನಿಗೆ ಇಷ್ಟವಾದದ್ದೇ ಇಲ್ಲವಲ್ಲ ಎಂದು ನನ್ನ ಸ್ನೇಹಿತನಿಗೆ ನನ್ನ ಮನೆಗೆ ಬಂದಾಗ ಕೊರತೆ ಆಗಬಾರದು ಎನ್ನುವ ಕಾರಣಕ್ಕಾಗಿ ಮನೆಯಲ್ಲಿ ಒಂದು ಬಾರ್ ಏರ್ಪಡಿಸಿದ್ದರಂತೆ.
ಅಮ್ಮ ಲೀಲಾವತಿ ನೆನಪಿಗಾಗಿ 55 ಲಕ್ಷ ಖರ್ಚು ಮಾಡಲು ಹೊರಟ ವಿನೋದ್ ರಾಜ್, ಎಲ್ಲರೂ ಮೆಚ್ಚಿದ ಆ ಕಾರ್ಯ ಯಾವುದು ಗೊತ್ತಾ.?.
ಎಷ್ಟೋ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಕಾರ್ಯಕ್ರಮಗಳಿದ್ದರೂ ವಿಷ್ಣು ಮನೆಯ ಕಾರ್ಯಕ್ರಮಕ್ಕೆ ಬಂದು ಹಾಜರಾಗುತ್ತಿದ್ದರಂತೆ ಅಂಬಿ. ಇದ್ದಕ್ಕಿದ್ದಂತೆ ವಿಷ್ಣುವರ್ಧನ್ ಮನೆಗೆ ಒಂದು ದಿನ ದೆಹಲಿಯಿಂದ ಮಧ್ಯರಾತ್ರಿ 1:00 ಗಂಟೆಗೆ ಫೋನ್ ಬರುತ್ತದೆ, ಫೋನ್ ಸ್ವೀಕರಿಸಿದವರು ಅಂಬರೀಶ್ ಧ್ವನಿ ಕೇಳುತ್ತಿದ್ದಂತೆ ವಿಷ್ಣುವರ್ಧನ್ ಅವರನ್ನು ಎಬ್ಬಿಸಿ ಫೋನ್ ಕೊಡುತ್ತಾರೆ.
ಗಾ’ಬ’ರಿಯಾದ ವಿಷ್ಣುವರ್ಧನ್ ಈ ಸಮಯದಲ್ಲಿ ಯಾಕಯ್ಯ ಏನಾಯ್ತು ಎಂದು ಕೇಳಿದರೆ ಉದಯ ಟಿವಿಯಲ್ಲಿ ನಿನ್ನ ಸಿನಿಮಾ ಹಾಡು ಬರುತ್ತಿದೆ ನೋಡು ಎಂದು ಹೇಳಿದ್ದರಂತೆ. ಈ ಮಟ್ಟಿಗೆ ಇವರಿಬ್ಬರ ನಡುವೆ ಸಲುಗೆ ಇತ್ತು ವಿಷ್ಣುವರ್ಧನ್ ಅಂಬರೀಶ್ ಅವರನ್ನು ಸದಾ ಹೋಗಳುತ್ತಿದ್ದರು.
ರಾಜಕೀಯವಾಗಿ ಅಂಬರೀಶ್ ಅವರ ಕೆಲವೊಂದು ನಿರ್ಧಾರಗಳು ನಡೆಗಳು ಸರಿ ಇಲ್ಲದಿದ್ದರೂ ಅದನ್ನು ರಾಜಕೀಯವಾಗಿ ಟೀಕಿಸಬಹುದೇ ಹೊರತು ಒಬ್ಬ ವ್ಯಕ್ತಿಯಾಗಿ ಅಂಬರೀಶ್ ಅವರು ಅತ್ಯುತ್ತಮ ಮನುಷ್ಯ ಅವನ ಮನಸ್ಸನಲ್ಲಿ ಯಾರ ಮೇಲೆಯೂ ಯಾವುದೇ ರೀತಿಯ ಕಲ್ಮಶ ಇಲ್ಲ ನನಗೆ ಅಂತ ಸ್ನೇಹಿತ ಸಿಕ್ಕಿರುವುದು ನನ್ನ ಪುಣ್ಯ.
ತಮ್ಮ ಹೀರೋ ಬಗ್ಗೆ ಕೆಟ್ಟ ಕಮೆಂಟ್ ಮಾಡಿದ್ದಕ್ಕೆ ಕೈಯಲ್ಲಿ ಕರ್ಪೂರ ಹಚ್ಚಿಸಿ ಶಿಕ್ಷೆ ಕೊಟ್ಟ ಅಭಿಮಾನಿಗಳು.?
ಎಷ್ಟೋ ಸಂದರ್ಭದಲ್ಲಿ ಆತ ನನ್ನ ಬಗ್ಗೆ ಎದುರಿನಲ್ಲಿ ಮಾತನಾಡಲಾಗದ ಸಂದರ್ಭ ಇದ್ದರೂ ಆತನ ಕಣ್ಣಿನಲ್ಲಿ ನನ್ನ ಬಗ್ಗೆ ಇರುವ ಕಾಳಜಿ ಅರ್ಥವಾಗುತ್ತದೆ. ಆತ ಜೀವನದಲ್ಲಿ ಸ್ವಲ್ಪ ಡಿಸಿಪ್ಲಿನ್ ಇಟ್ಟುಕೊಂಡಿದ್ದರು ಮುಖ್ಯಮಂತ್ರಿ ಆಗಿರುತ್ತಿದ್ದ ಎಂದು ಸರ್ಟಿಫಿಕೇಟ್ ಕೊಟ್ಟಿದ್ದರು ವಿಷ್ಣು.