Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ “ಯುವ ರಣಧೀರ ಕಂಠೀರವ” ಬಿಡುಗಡೆ ಆಗದಂತೆ ಪಿತೂರಿ ಮಾಡಿದ್ದು ಯಾರು ಗೊತ್ತ.?

Posted on February 6, 2023 By Admin No Comments on ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ “ಯುವ ರಣಧೀರ ಕಂಠೀರವ” ಬಿಡುಗಡೆ ಆಗದಂತೆ ಪಿತೂರಿ ಮಾಡಿದ್ದು ಯಾರು ಗೊತ್ತ.?

ದೊಡ್ಮನೆ ಈಗಾಗಲೇ ಕರ್ನಾಟಕದಲ್ಲಿ ಸಾಕಷ್ಟು ಮನೆಗಳಿಗೆ ಅನ್ನಕ್ಕೆ ದಾರಿ ಮಾಡಿಕೊಟ್ಟಿದೆ, ಕನ್ನಡ ಚಿತ್ರರಂಗದಲ್ಲಿ ಇಂದು ನೆಲೆ ಕೊಂಡಿರುವ ಸಾವಿರಾರು ಮಂದಿ ಕಲಾವಿದರಿಗೆ ಆ ದಾರಿ ತೋರಿಸಿದ್ದೆ ರಾಜವಂಶ ಎಂದರೆ ಆ ಮಾತು ಸುಳ್ಳಾಗುವುದಿಲ್ಲ. ಆದರೆ ರಾಜವಂಶದ ಕುಡಿಯ ಮೊದಲ ಸಿನಿಮಾಗೂ ಕೂಡ ವಿಘ್ನ ಬರುತ್ತದೆ ಎಂದರೆ ಅದನ್ನು ನಂಬಲು ಸ್ವಲ್ಪ ಅಸಾಧ್ಯವೇ, ಅದರೆ ಆ ಮಾತು ಸತ್ಯ. ಯಾಕೆಂದರೆ ಉತ್ತರ ಇಲ್ಲಿದೆ ನೋಡಿ. ಅಣ್ಣಾವ್ರ ಮೂವರು ಮಕ್ಕಳು ಕೂಡ ಅಣ್ಣಾವ್ರಂತೆ ಚಿತ್ರರಂಗವನ್ನೇ ತಮ್ಮ ಉದ್ಯಮವಾಗಿಸಿಕೊಂಡರು.

ಶಿವಣ್ಣ, ರಾಘಣ್ಣ ಮತ್ತು ಪುನೀತ್ ಅವರು ಹೀರೋಗಳಾಗಿ ಇಲ್ಲಿ ನೆಲ ನಿಂತರು. ಇನ್ನು ಮೊಮ್ಮಕ್ಕಳಾದ ವಿನಯ್ ರಾಜ್ ಕುಮಾರ್, ಧನ್ಯ ರಾಮ್ ಕುಮಾರ್ ನೀರನ್ನು ರಾಮ್ ಕುಮಾರ್ ಅವರೂ ಹೀರೋ ಹೀರೋಯಿನ್ ಗಳಾಗಿ ಮಿಂಚುತ್ತಿದ್ದರೆ ನಿವೇದಿತ ಅವರು ಸಹ ನಿರ್ಮಾಪಕಿ ಆಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಗೆಯೇ ರಾಘಣ್ಣನ ಎರಡನೇ ಮಗನಾದ ಯುವರಾಜ್ ಕುಮಾರ್ ಅವರ ಎಂಟ್ರಿ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು, ಭರ್ಜರಿಯಾಗಿ ಎಂಟ್ರಿ ಆಗಲು ಚಿತ್ರವೂ ತಯಾರಾಗುತ್ತಿತ್ತು.

ಆದರೆ ಅದನ್ನು ಬಿಡುಗಡೆ ಆಗದಂತೆ ತಡೆಹಿಡಿಯಲಾಗಿದೆಯಂತೆ. ಇದರ ಬಗ್ಗೆ ಚಿತ್ರತಂಡ ಕೇಳುವುದಾದರೆ ಚಿತ್ರದ ನಿರ್ದೇಶಕರಾಗಿ ಪುನೀತ್ ರುದ್ರನಾಗ ಅವರು ಹೇಳುತ್ತಿರುವುದು ಇಷ್ಟು. ಪುನೀತ್ ರುದ್ರನಾಗ ಮತ್ತು ಉಗ್ರಂ ಸಿನಿಮಾ ಖ್ಯಾತಿಯ ಪ್ರಶಾಂತ್ ನೀಲ್ ಇಬ್ಬರ ನಿರ್ದೇಶನದಲ್ಲಿ ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾ ಯುವ ರಣಧೀರ ಕಂಠೀರವ ಸಿನಿಮಾ ಸೆಟ್ಟೇರಿತ್ತು, ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಸಿನಿಮಾ ಐತಿಹಾಸಿಕ ಕಥೆ ಹಂದರ ಹೊಂದಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು ಆದರೆ ಆ ಸಿನಿಮಾ ಮುಂದೆ ಏನಾಯ್ತು ಎನ್ನುವ ಪ್ರಶ್ನೆಗೆ ಪುನೀತ್ ರುದ್ರನಾಗ್ ಅವರಿಂದ ಬರುತ್ತಿರುವ ಉತ್ತರ ಹೀಗಿದೆ.

ಆ ಸಿನಿಮಾ ಒಂದಕ್ಕೆ ಪಟ್ಟ ಕಷ್ಟದ ಕಥೆ ಹೇಳುವಷ್ಟರಲ್ಲಿ ನಾನು ಅದರಂತಹ ಇನ್ನಷ್ಟು ಸಿನಿಮಾಗಳನ್ನು ಮಾಡಬಹುದು, ಅಷ್ಟು ತೊಂದರೆಯಿಂದ ಅನುಭವಿಸಿದ್ದೇನೆ. ಅಷ್ಟು ಹಿಂಸೆಯನ್ನು ಕೂಡ ತೆಗೆದುಕೊಂಡಿದ್ದೇನೆ. ನಾವೆಲ್ಲ ತುಂಬಾ ಕಷ್ಟಪಟ್ಟಿದ್ದೇವೆ ಈ ಸಿನಿಮಾವನ್ನು ಮುಂದೆ ತೆಗೆದುಕೊಂಡು ಹೋಗುವುದಕ್ಕೆ, ಒಂದು ಸಮಯದಲ್ಲಿ ಪ್ರಶಾಂತ್ ನೀಲ್ ಅವರು ಉಗ್ರಂ ಸಿನಿಮಾ ಆದ ತಕ್ಷಣ ಇಂಡಸ್ಟ್ರಿಯನ್ನು ಬಿಟ್ಟು ಹೋಗಬೇಕು ಎನ್ನುವಷ್ಟು ಬೇಸರ ಕೂಡ ಮಾಡಿಕೊಂಡಿದ್ದರು.

ಆದರೆ ಆ ಸಮಯದಲ್ಲಿ ಇದಕ್ಕೆಲ್ಲಾ ನಮಗೆ ದೊಡ್ಡ ಶಕ್ತಿಯಾಗಿ ನಿಂತಿದ್ದು ಪುನೀತ್ ರಾಜಕುಮಾರ್ ಅವರು, ಆದರೆ ಇಂದು ನಾವು ಅವರನ್ನೇ ಕಳೆದುಕೊಂಡು ಬಿಟ್ಟಿದ್ದೇವೆ. ಹಾಗಾಗಿ ಸಿನಿಮಾ ಮುಂದೆ ಹೋಗುತ್ತದೆ ಎನ್ನುವ ಭರವಸೆಯೇ ಹೊರಟು ಹೋಗಿದೆ. ಆದರೆ ನಾನು ಈ ಸಿನಿಮಾವನ್ನು ಡ್ರಾಪ್ ಮಾಡುತ್ತಿದ್ದೇನಾ ಅಥವಾ ಪಾರ್ಕ್ ಮಾಡುತ್ತಿದ್ದೇನಾ ಗೊಂದಲದಲ್ಲಿ ನಾನೇ ಇದ್ದೇನೆ. ಸದ್ಯಕ್ಕೆ ಆ ಸಿನಿಮಾ ಬಗ್ಗೆ ನಾನು ಏನನ್ನು ಹೇಳಲಾರೆ.

ಜಗ್ಗೇಶ್ ಅವರು ಒಂದು ಮಾತು ಹೇಳುತ್ತಿದ್ದರು ನಮ್ಮ ಟ್ಯಾಲೆಂಟ್ ಅನ್ನು ತೋರಿಸಬಾರದು ಒಂದು ಕಲ್ಲು ಬೀಳುವ ಜಾಗಕ್ಕೆ 22 ಕಲ್ಲು ಬೀಳುತ್ತದೆ ಎಂದು ಅದು ಸತ್ಯವಾಗಿದೆ. ಆ ಸಿನಿಮಾಗಾಗಿ ನಾನು ಸಾಕಷ್ಟು ಜನರ ಹತ್ತಿರ ಹೋಗಿ ಹೇಳಿಕೊಂಡು ಕೇಳಿಕೊಂಡೇ ಸಾಕಾಗಿದೆ, ಈ ಸಿನಿಮಾ ಬಗ್ಗೆ ಹೇಳಿ ಹೇಳಿ ಸುಸ್ತಾಗಿ ಹೋಗಿದ್ದೇನೆ.ಮತ್ತೆ ಅದರ ಬಗ್ಗೆ ಮಾತಾಡುವ ಉತ್ಸಾಹವಿಲ್ಲ ಎಂದು ಬಿಟ್ಟಿದ್ದಾರೆ. ಹಾಗಾಗಿ ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾ ಅರ್ಧಕ್ಕೆ ನಿಂತು ಹೋಗುತ್ತದಾ ದೊಡ್ಮನೆ ಕುಡಿಯ ಗತಿಯೇ ಹೀಗಾದರೆ ಹೊಸಬರ ಕಥೆಯೇನು? ಎನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿ ಎದುರಾಗಿದೆ.

ಆದರೆ ಇದರ ನಡುವೆ ಸಂತಸದ ಸುದ್ದಿ ಏನೆಂದರೆ ಈ ವರ್ಷ ಸಂತೋಷ ಅನಂದ್ ರಾಮ್ ಅವರ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿ ಯುವರಾಜ್ ಕುಮಾರ್ ಅವರ ಹೊಸ ಸಿನಿಮಾ ಬರುತ್ತಿದೆ. ಇನ್ನೂ ಹೆಸರಿಡದ ಆ ಸಿನಿಮಾದ ಪೋಸ್ಟರ್ ನೋಡಿ ಪುನೀತ್ ರಾಜಕುಮಾರ್ ಅವರನ್ನು ಇವರಲ್ಲಿ ಕಾಣುತ್ತಿದ್ದೇವೆ ಇವರೇ ಜೂನಿಯರ್ ಪವರ್ ಸ್ಟಾರ್ ಎಂದು ದೊಡ್ಮನೆ ಅಭಿಮಾನಿಗಳು ಹೇಳುತ್ತಿದ್ದಾರೆ. ಪುನೀತ್ ಅಭಿಮಾನಿ ಒಬ್ಬರು ಈ ಪೋಸ್ಟರ್ ಅನ್ನು ಯುವ ರಾಜ್ ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಇಬ್ಬರನ್ನು ಸೇರಿಸಿ ಮಾಡಿದ್ದಾರೆ ಮತ್ತೆ ಕೆಲವು ಫೋಟೋಗಳಲ್ಲಿ ಯುವರಾಜ್ ಕುಮಾರ್ ಅವರು ಲೋಡೆಡ್ ಗನ್ ಹಿಡಿದು ಪೋಸ್ ಕೊಟ್ಟಿರುವ ಫೋಟೋಗಳು ಇವೆ ಹಾಗಾಗಿ ಯುವರಾಜ್ ರ ಈ ಸಿನಿಮಾ ಕೂಡ ಬಹಳ ನಿರೀಕ್ಷೆ ಹುಟ್ಟು ಹಾಕುತ್ತಾ ಇದೆ.

Viral News Tags:Appu, Yuva, Yuvarajkumar

Post navigation

Previous Post: ಪಠಾಣ್ ಚಿತ್ರ ಹೊಗಳಿ ಪೇಚಿಗೆ ಸಿಲುಕಿದ ರಮ್ಯ, ಸ್ಯಾಂಡಲ್ವುಡ್ ಪದ್ಮಾವತಿಗೆ ದರ್ಶನ್ ಅಭಿಮಾನಿಗಳಿಂದ ವಾರ್ನಿಂಗ್.
Next Post: ನಾನು ಇರಬೇಕಾ.? ಬೇಡ್ವ.? ಹೇಳಿ ಎಂದು ಟ್ರೋಲಿಗರನ್ನು ಪ್ರಶ್ನಿಸುತ್ತಿರುವ ರಶ್ಮಿಕ ಮಂದಣ್ಣ.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme