ಚಂದನವನದ ಚಂದನದ ಗೊಂಬೆ, ಕರ್ಪೂರದ ಗೊಂಬೆ ಹಿರಿಯ ನಟಿ ಲಕ್ಷ್ಮಿಯವರು ಜೂಲಿ ಹೆಸರಿನಿಂದ ಕೂಡ ಅಷ್ಟೇ ಫೇಮಸ್. ಹಿರಿಯ ನಟಿ ಲಕ್ಷ್ಮಿ ಅವರು ಬಹಳ ಚಿಕ್ಕ ವಯಸ್ಸಿಗೆ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮಲಯಾಳಂನಲ್ಲಿ ಕೂಡ ನಾಯಕ ನಟಿಯಾಗಿ ಗುರುತಿಸಿಕೊಂಡಿದ್ದರು.
ಇಷ್ಟರ ನಡುವೆ 80ರ ದಶಕದಲ್ಲಿ ಅವರಿಗೆ ಮದುವೆ ಕೂಡ ಆಗಿತ್ತು ಅವರು ತಮ್ಮ 19ನೇ ವಯಸ್ಸಿಗೆ ಮೊದಲನೇ ಮಗು ಅಂದರೆ ಐಶ್ವರ್ಯ ಅವರಿಗೆ ತಾಯಿ ಕೂಡ ಆಗಿದ್ದರು. ಆನಂತರ ತಮ್ಮ ಬದುಕಿನಲ್ಲಿ ಆತ ಬದಲಾವಣೆ ಬಗ್ಗೆ ಲಕ್ಷ್ಮಿಯವರು ಕನ್ನಡದ ಖಾಸಗಿ ಮಾಧ್ಯಮದ ಇಂಟರ್ವ್ಯೂ ಒಂದರಲ್ಲಿ ಮಾತನಾಡಿದ್ದಾರೆ.
ಆ ಸಮಯದಲ್ಲಿ ಇವರ ಗೆಳತಿಯರು ಇನ್ನು ಡಿಗ್ರಿ ಓದುತ್ತಿದ್ದರಂತೆ. ಅವರೆಲ್ಲ ಬಂದು ನನ್ನನ್ನು ಆಸ್ಪತ್ರೆಯಲ್ಲಿ ನೋಡಿಕೊಂಡು ಹೋಗಿದ್ದರು, ಇಷ್ಟು ಬೇಗ ಮಗು ಮಾಡಿಕೊಂಡಿದ್ದಾಳೆ ಎಂದು ಮಾತನಾಡುತ್ತಿದ್ದರು. ನಾನು ಅವರಿಗೆ ಹೇಳುತ್ತಿದ್ದೇನೆ ನೀವು ಡಿಗ್ರಿ ತೆಗೆದುಕೊಂಡರೆ ನಾನು ಸಿನಿಮಾದಲ್ಲಿ ಯೂನಿವರ್ಸಿಟಿಗೆ ಹೋಗುತ್ತೇನೆ ಎಂದು, ಅದೇ ರೀತಿ ಆಯಿತು.
ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟು ಸುದೀಪ್ ಸರ್ ಗೆ ಕ್ಷಮೆ ಕೇಳಿದ ರಕ್ಷಕ್ ಬುಲೆಟ್.! ಕಾರಣವೇನು ಗೊತ್ತ.?
ನನಗೆ ನನ್ನ ಮಗಳು ಐಶ್ವರ್ಯ ಹುಟ್ಟಿದ ಮೇಲೆ ಬಹಳ ಒಳ್ಳೆಯ ಸಿನಿಮಾಗಳ ಆಫರ್ ಬಂದವು ಸೂಪರ್ ಸ್ಟಾರ್ ಕೂಡ ಆದೇ ನನ್ನ ಮಗಳು ಹುಟ್ಟಿದ 80 ದಿನಕ್ಕೆ ನನಗೆ ಕಾವೇರಿ ತಾಯಿಯ ಪಾತ್ರ ಮಾಡುವ ಅವಕಾಶ ಸಿಕ್ಕಿತು. ಆಗ ನನ್ನ ಮನೆಯಲ್ಲಿ ನನ್ನ ಅಮ್ಮ ಚಿಕ್ಕಮ್ಮ ತಾತ ಎಲ್ಲರೂ 80 ದಿನ ಆಗಿದೆ ಈಗಲೇ ಹೋಗಬಾರದು ಹೇಗೆ ಹೋಗುತ್ತೀಯಾ ಎಂದೆಲ್ಲ ಹೇಳುತ್ತಿದ್ದರು.
ನಾನು ದೃಢ ನಿರ್ಧಾರ ಮಾಡಿದ್ದೆ ಮತ್ತು ಅವರೊಂದಿಗೆ ವಾದ ಕೂಡ ಮಾಡುತ್ತಿದ್ದೆ ಯಾಕೆ ಹೋಗಬಾರದು ಸಿನಿಮಾದಲ್ಲಿ ಮತ್ತೆ ಮತ್ತೆ ಬ್ರೇಕ್ ಇರುತ್ತದೆ ಆಗ ಮಗು ನೋಡಿಕೊಳ್ಳುತ್ತೇನೆ. ರಸ್ತೆಯಲ್ಲಿ ರಸ್ತೆ ಕೆಲಸ ಮಾಡುವವರು, ಬೇರೆ ಬೇರೆ ಕೆಲಸ ಮಾಡುವ ಹೆಣ್ಣು ಮಕ್ಕಳು ಒಂದು ತಿಂಗಳಿಗೆ ಕೆಲಸಕ್ಕೆ ಹೋಗುತ್ತಾರೆ ಕೆಲವರಿಗೆ ಐದೇ ದಿನಕ್ಕೆ ಕೆಲಸಕ್ಕೆ ಹೋಗಬೇಕಾದ ಕಷ್ಟ ಇರುತ್ತದೆ.
ನಮಗೆ ಇಂಡಸ್ಟ್ರಿಯಲ್ಲಿ ಅನುಕೂಲತೆಗಳು ಇವೆ ಯಾಕೆ ಹೋಗಬಾರದು ಎಂದು ನಾನು ನಿರ್ಧಾರ ಮಾಡಿದೆ. ಯಾಕೆಂದರೆ ನಾನು ನನ್ನ ಕೆರಿಯರಾನ್ನು ಅಷ್ಟು ಪ್ರೀತಿಸುತ್ತಿದ್ದೆ ಮತ್ತು ನನಗೆ ಅಷ್ಟೇ ಚೆನ್ನಾಗಿ ಎಲ್ಲರೂ ನೋಡಿಕೊಂಡರು. ಈಗಿನ ಕಾಲದ ರೀತಿ ಹೀರೋಯಿನ್ ಆದವರು ದಿನ ವ್ಯಾಯಾಮ ಮಾಡಬೇಕು ಕಡಿಮೆ ತಿನ್ನಬೇಕು ಎಂದು ಯಾರು ಹೇಳುತ್ತಿರಲಿಲ್ಲ.
ತಮ್ಮ ಮತ್ತು ಪತಿ ಅವಿನಾಶ್ ಅವರ ನಡುವಿನ ಒಪ್ಪಂದದ ಬಗ್ಗೆ ಮುಕ್ತವಾಗಿ ಹೇಳಿಕೊಂಡ ಮಾಳ್ವಿಕ ಅವಿನಾಶ್.!
ಮಗು ಆಗಿರುವುದಕ್ಕೆ ಗೌರವ ಕೊಡುತ್ತಿದ್ದರು ಚೆನ್ನಾಗಿ ತಿನ್ನಬೇಕು ಆರೋಗ್ಯ ನೋಡಿಕೊಳ್ಳಬೇಕು ಗಟ್ಟಿಯಾಗಿರಬೇಕು ಎಂದು ಹೇಳುತ್ತಿದ್ದರು. ಆ ಕಾಲಕ್ಕೆ ನಾವು ಪುಣ್ಯ ಮಾಡಿದ್ದೆವು ಇಂತಹ ಜನರ ನಡುವೆ ಕೆಲಸ ಮಾಡುತ್ತಿದ್ದೆವು ನಮಗೆ ಏನು ಕೂಡ ಕಷ್ಟ ಅನಿಸುತ್ತಿರಲಿಲ್ಲ.
ಯಾವುದಾದರೂ ಸಮಸ್ಯೆ ಅಥವಾ ಕಷ್ಟ ಎಂದು ತಲೆಗೆ ಬಂದರೆ ಅದು ಮುಂದೆ ಹೋಗಲು ಆಗುವುದಿಲ್ಲ, ಇಷ್ಟಪಟ್ಟು ಮಾಡಿದರೆ ಎಲ್ಲದಕ್ಕೂ ದಾರಿ ಇರುತ್ತದೆ. ಹಾಗೆಂದು ನೋಡಿದರೆ ಲೀಲಾವತಿಯವರು ಸಾವಿತ್ರಿಯವರು ಎಲ್ಲರೂ ಕೂಡ ಮಗುವಾದ ಮೇಲೆ ಇಂಟಸ್ಟ್ರೀಯಲ್ಲಿ ನಾಯಕ ನಟಿಯಾಗಿ ಇದ್ದವರು.
ನಮ್ಮ ಕಾಲಘಟ್ಟದಲ್ಲಿ ನಾನೇ ಮೊದಲಿಗಳು ಆ ರೀತಿ ಮಗುವಾದ ಮೇಲೆ ಸಿನಿಮಾಕ್ಕೆ ನಾಯಕಿ ಆಗಿದ್ದವಳು ಅದಾದ ಮೇಲೆ ನನ್ನ ಬದುಕಿನ ದಿಕ್ಕು ಬದಲಾಯಿತು. ಬಹಳ ದೊಡ್ಡ ಮಟ್ಟದ ಹೆಸರು ಕೂಡ ಬಂತು ಎಂದು ಸಂದರ್ಶನ ಒಂದರಲ್ಲಿ ತಮ್ಮ ಬದುಕಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ ಲಕ್ಷ್ಮಿ ಅಮ್ಮ.