ಮಾಳ್ವಿಕ ಅವಿನಾಶ್ (Malvika Avinash) ಚಿತ್ರರಂಗ, ಕಿರುತೆರೆ, ಧಾರಾವಾಹಿ ಮತ್ತು ರಿಯಾಲಿಟಿ ಶೋಗಳು, ರಾಜಕೀಯ ಹೀಗೆ ಎಲ್ಲದರಲ್ಲೂ ಸಕ್ರಿಯವಾಗಿರುವ ಪ್ರತಿಭಾವಂತ ವ್ಯಕ್ತಿತ್ವ ಎಂದೇ ಹೇಳಬಹುದು. ಬದುಕು ಜಟಕಾ ಬಂಡಿಯಂತಹ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ನೋಂದವರಿಗೆ ಸ್ಪಂದಿಸಿದ್ದು ಮಾತ್ರವಲ್ಲದೆ ಈಗಲೂ ಕೌನ್ಸಲಿಂಗ್ ನಡೆಸುತ್ತಾರೆ ಮತ್ತು ಅವರ ಸೋಶಿಯಲ್ ಮೀಡಿಯಾ ಖಾತೆ ನೋಡಿದರೆ ಕುಟುಂಬಕ್ಕೂ ಕೂಡ ಅಷ್ಟೇ ಮಹತ್ವ ಕೊಡುತ್ತಾರೆ,
ಸಣ್ಣ ಸಣ್ಣ ವಿಚಾರಗಳನ್ನು ಆಚರಿಸುವುದನ್ನು ಅವರು ಮರೆಯುವುದಿಲ್ಲ ಎನ್ನುವುದು ತಿಳಿಯುತ್ತದೆ, ಹಾಗೆ ಸಮಾಜದ ಆಗುಹೋಗುಗಳ ಬಗ್ಗೆಯೂ ಪ್ರತಿಕ್ರಿಯಿಸುತ್ತಾರೆ. ಇದೆಲ್ಲದರ ನಡುವೆ ಅವರಿಗೆ ಇರುವ ಅತಿ ದೊಡ್ಡ ಜವಾಬ್ದಾರಿ ಅವರ ಮಗ ಯಾಕೆಂದರೆ ಆ ಮಾಳ್ವಿಕಾ ಮತ್ತು ಅವಿನಾಶ್ ಅವರ ಪುತ್ರ ವಿಶೇಷ ಚೇತನರಾಗಿದ್ದಾರೆ.
ಉಳಿದ ಎಲ್ಲಾ ಪೋಷಕರಿಗಿಂತಲೂ ಈ ರೀತಿ ಮಕ್ಕಳನ್ನು ಪಡೆದ ಪೋಷಕರಿಗೆ ಪೇರೆಂಟಿಂಗ್ ಚಾಲೆಂಜ್ ಆಗಿರುತ್ತದೆ. ಇದಕ್ಕಾಗಿ ತಮ್ಮ ನಡುವೆ ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಮಾಧ್ಯಮದ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ ಮಾಳ್ವಿಕಾ.
ಮಾಳ್ವಿಕ ಅವಿನಾಶ್ ಮತ್ತು ಅವಿನಾಶ್ ಜೋಡಿ (Avinash) ಬಹಳ ವಿಶೇಷ ಮತ್ತು ವಯಸ್ಸಿನಲ್ಲಿ ಇಬ್ಬರಿಗೆ ಬಹಳಷ್ಟು ಅಂತರವಿದೆ. ತಮ್ಮ ಯಶಸ್ವಿ ದಾಂಪತ್ಯ ಹಾಗೂ ಇಷ್ಟೆಲ್ಲಾ ಚಟುವಟಿಕೆಗಳ ಮೇಲಿನ ಹಿಡಿತದ ಬಗ್ಗೆ ಅವರನ್ನು ಪ್ರಶ್ನಿಸಿದರೆ ಇದಕ್ಕೆಲ್ಲ ಕ್ರೆಡಿಟ್ ಅವರ ಪತಿಗೆ ಕೊಡುತ್ತಾರೆ.
ಯಾಕೆಂದರೆ ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಕಲಾವಿದಯೆರಾಗಿದ್ದರು ಅಥವಾ ಇನ್ಯಾವುದೇ ಕ್ಷೇತ್ರದಲ್ಲಿದ್ದರೂ ಮದುವೆ ಆಗಿ ಸೆಟಲ್ ಆಗಿ ಬಿಡಬೇಕು ಎಂದುಕೊಳ್ಳುತ್ತಾರೆ. ಇನ್ನು ಕೆಲವರು ಮದುವೆಯೇ ಬೇಡ ಎಂದುಕೊಳ್ಳುತ್ತಾರೆ, ಅದು ಅವರವರ ಇಚ್ಛೆ. ಆದರೆ ಸೈಟಲ್ ಆಗುವುದು ಯಾಕೆ? ಆ ರೀತಿ ಎಂದು ಕೂಡ ಸೆಟಲ್ ಆಗಬಾರದು ಎಂದುಕೊಳ್ಳುತ್ತೇನೆ, ನಾನು ಕೂಡ ಆಗಿಲ್ಲ.
ಮದುವೆ ಆದ ಮೇಲೆ ಜೀವನದಲ್ಲಿ ಅಷ್ಟೇನೂ ಬದಲಾಗುವುದಿಲ್ಲ ಆ ವಿಚಾರದಲ್ಲಿ ನನ್ನ ಪತಿಗೆ ನಾನು ಬಹಳಷ್ಟು ಮೆಚ್ಚಿಗೆ ಕೊಡುತ್ತೇನೆ. ಯಾಕೆಂದರೆ ಈಗಿನ ಜನರೇಶನ್ ಅವರು ಬೇರೆ ಆದರೆ ಆ ಕಾಲಘಟ್ಟದಲ್ಲಿ ಅವರು ತೆಗೆದುಕೊಂಡ ನಿರ್ಧಾರ ದೊಡ್ಡದು.
ಯಾಕೆಂದರೆ ಅವರ ಸರಿ ಸಮಾನ ಸಮಯದ ಕಲಾವಿದರ ಪತ್ನಿಯರು ಮದುವೆ ಆದ ನಂತರ ಸಿನಿಮಾರಂಗ ಬಿಟ್ಟು ಮನೆಯಲ್ಲಿ ಇದ್ದರು. ಅವರು ನನಗೆ ಎಂದು ಕೂಡ ಈ ರೀತಿ ಒತ್ತಾಯ ಮಾಡಲಿಲ್ಲ ಆ ಧೋರಣೆಯನ್ನು ನನ್ನ ಮೇಲೆ ಹೇರಲಿಲ್ಲ. ನಮ್ಮ ಮದುವೆಯಾದ ಮರುದಿನಕ್ಕೆ ನಾನು ಕೂಡ ಶೂಟಿಂಗ್ ಗೆ ಹೋಗಿದ್ದೆ ಅವರು ಹೋಗಿದ್ದರು.
ಆದರೆ ಮಗು ಆದ ಮೇಲೆ ನಮ್ಮ ಮಗನ ಕಾರಣಕ್ಕಾಗಿ ಒಂದು ಒಪ್ಪಂದ ಮಾಡಿಕೊಂಡಿದ್ದೇವೆ ನನ್ನ ಮಗನಿಗೆ ರಾತ್ರಿ ಹೊತ್ತು ಅಮ್ಮ ಅಥವಾ ಅಪ್ಪ ಇಬ್ಬರಲ್ಲಿ ಒಬ್ಬರು ಇರಲೇಬೇಕು, ಇಲ್ಲದಿದ್ದರೆ ಅವನು ಭಯ ಪಡುತ್ತಾನೆ. ಹಠ ಮಾಡುತ್ತಾನೆ ಈ ಕಾರಣಕ್ಕಾಗಿ ರಾತ್ರಿ ಹೊತ್ತು ಮನೆಯಲ್ಲಿರಬೇಕು ಎಂದುಕೊಂಡಿದ್ದೇವೆ.
ಅದು ರಾಜಕೀಯ ಪ್ರವಾಸವೇ ಆಗಲಿ ಅಥವಾ ಇನ್ಯಾವುದೇ ಚಿತ್ರೀಕರಣದ ಕಾರಣಕ್ಕಾಗಿ ಹೊಲ ಜಾಗಗಳಿಗೆ ಹೋಗುವುದೇ ಆಗಲಿ ಯಾವುದನ್ನು ತ್ಯಾಗ ಮಾಡಲು ಸಿದ್ಧವಾಗಿದ್ದೇವೆ. ನಾನು ಕೂಡ ಡೇಟ್ಸ್ ಕೊಡುವುದಿಲ್ಲ. ಇಬ್ಬರಲ್ಲಿ ಒಬ್ಬರು ರಾತ್ರಿ ಹೊತ್ತು ಮನೆಯಲ್ಲಿರುವ ರೀತಿಯಲ್ಲಿ ನಾವು ಹೊಂದಾಣಿಕೆ ಮಾಡಿಕೊಂಡಿದ್ದೇವೆ ಅದು ಕೂಡ ಮಗನ ಕಾರಣಕ್ಕಾಗಿ.
ಇನ್ನು ರಾಜಕೀಯ ವಿಷಯದಲ್ಲಿ ಹೇಳುವುದಾದರೆ ನನಗೆ ಬಾಲ್ಯದಿಂದಲೂ ಆಸಕ್ತಿ ಅವಿನಾಶ್ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಆದರೆ ಅವರು RSS ನಲ್ಲಿ ಇದ್ದ ಕಾರಣದಿಂದ ದೇಶಭಕ್ತಿ ಬಹಳ ಇದೆ. ಅದೇ ರೀತಿಯ ನಿಲುವು ನನ್ನ ಪಕ್ಷದಲ್ಲಿ ಇರುವುದರಿಂದ ನಮ್ಮ ಮನೆಯ ವಾತಾವರಣವೇ ಆ ರೀತಿ ಇದೆ ಮತ್ತು ನನಗೆ ಎಲ್ಲ ಕ್ಷೇತ್ರದಲ್ಲಿಯೂ ಆಸಕ್ತಿ ಇರುವುದರಿಂದ ಸಮಯಾವಕಾಶ ಮಾಡಿಕೊಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.