Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ರೈತರಿಗೆ ಸಿಹಿ ಸುದ್ದಿ, ರೈತರ ಸಾಲ ಕೇಳದಂತೆ ಬ್ಯಾಂಕ್ ಗಳಿಗೆ ಸೂಚನೆ.!

Posted on October 14, 2023 By Admin No Comments on ರೈತರಿಗೆ ಸಿಹಿ ಸುದ್ದಿ, ರೈತರ ಸಾಲ ಕೇಳದಂತೆ ಬ್ಯಾಂಕ್ ಗಳಿಗೆ ಸೂಚನೆ.!

 

ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ವೈಫಲ್ಯದಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಮಾಡಲು ಪರಿಸ್ಥಿತಿ ಯೋಗ್ಯವಾಗಿಲ್ಲ, ಇನ್ನೂ ಹಲವರು ರೈತರು ಬಿತ್ತನೆ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರದ ಕೈಪಿಡಿ ಅನ್ವಯ ಸರ್ವೆ ಮಾಡಿ 190 ತಾಲ್ಲೂಕುಗಳು ಬರಪೀಡಿತವಾಗಿವೆ ಎಂದು ಘೋಷಣೆ ಮಾಡಲಾಗಿದೆ ಮತ್ತು ಸರ್ಕಾರದ ಪರಿಹಾರ ಹಣಕ್ಕಾಗಿ ಕಾಯಲಾಗುತ್ತಿದೆ.

WhatsApp Group Join Now
Telegram Group Join Now

ಮಳೆ ಕೊರತೆಯ ಸಮಸ್ಯೆ ಒಂದೆಡೆಯಾದರೆ ಮತ್ತೊಂದೆಡೆ ಲೋಡ್ ಶೆಡ್ಡಿಂಗ್ ನ ಸಮಸ್ಯೆ ಕೂಡ ರೈತರಿಗೆ ಎದುರಾಗಿದೆ. ಪರಿಸ್ಥಿತಿ ಹೀಗಿದ್ದರೂ ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಲ ವಸೂಲಾತಿಗೆ ಮುಂದಾಗಿದ್ದವು, ಆದರೆ ರೈತನಿಗೆ ಆದಾಯವಿಲ್ಲದೆ ಇರುವುದರಿಂದ ಆತನಿಗೆ ಈ ವರ್ಷ ಸಾಲ ಮರುಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಪರಿಸ್ಥಿತಿ ಅರಿತು ಸರ್ಕಾರ ಇದಕ್ಕೆ ಬ್ರೇಕ್ ಹಾಕಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಆಗ್ರಹಿಸಿದ್ದರು.

ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಮೇಲೆ ವಿದ್ಯಾನಿಧಿ ಯೋಜನೆಯನ್ನು ಕೈ ಬಿಟ್ಟಿದೆ ಈ ವಿದ್ಯಾನಿಧಿ ಯೋಜನೆಯಿಂದ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುತ್ತಿತ್ತು. ಕೇಂದ್ರ ಸರ್ಕಾರದಿಂದ ಪಿಎಂ ಕಿಸಾನ್ ಸಮ್ಮನ್ ಯೋಜನೆಯಡಿ ವರ್ಷಕ್ಕೆ 6000 ಸಹಾಯಧನವು ಸಿಗುತ್ತಿತ್ತು ಅದರಂತೆ BJP ಪಕ್ಷವು ಕಳೆದ ಬಾರಿ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದಾಗ ರಾಜ್ಯದ ರೈತರಿಗೆ ಸಿಎಂ ಕಿಸಾನ್ ನಿಧಿ ಯೋಜನೆಯಡಿ ವರ್ಷಕ್ಕೆ 4000 ರೈತರಿಗೆ ಸಹಾಯಧನ ನೀಡುತ್ತಿತ್ತು.

ಆದರೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ನೂತನ ಕಾಂಗ್ರೆಸ್ ಸರ್ಕಾರವು ಆರ್ಥಿಕ ಹೊರೆ ಕಾರಣದಿಂದ ತನ್ನ ಬಜೆಟ್ ಪಟ್ಟಿಯಿಂದ ಈ ಯೋಜನೆಗಳನ್ನು ಕೈ ಬಿಟ್ಟಿದೆ. ಹಾಗಾಗಿ ಇದು ರೈತ ವಿರೋಧಿ ಸರ್ಕಾರ ಎಂದು ವಿರೋಧ ಪಕ್ಷಗಳು ಹಾಗೂ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು ಅದರ ನಡುವೆ ಬರ ಪರಿಸ್ಥಿತಿ ಎದುರಾಗಿದ್ದರು ಸಾಲಮರುಪಾವತಿ ನಿಂತಿರುವ ಬ್ಯಾಂಕ್ಗಳಿಗೆ ಬ್ರೇಕ್ ಆಗದೆ ಇರುವುದಕ್ಕೆ ರಾಜ್ಯ ಸರ್ಕಾರವನ್ನು ಆಕ್ಷೇಪಿಸಲಾಗುತ್ತಿತ್ತು ಆದರೆ ಈಗ ರಾಜ್ಯ ಸರ್ಕಾರ ವತಿಯಿಂದ ರೈತರಿಗೆ ಸಮಾಧಾನಕರ ಸುದ್ದಿ ಸಿಕ್ಕಿದೆ.

ರೈತರ ಆರ್ಥಿಕ ಕಷ್ಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರವು ಬರಗಾಲ ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಅರ್ಹ ರೈತರ ಸಾಲಗಳನ್ನು ಪುನರ್ ರಚಿಸುವಂತೆ ಬ್ಯಾಂಕರ್‌ಗಳ ಸಮಿತಿಯೊಂದಿಗೆ ಚರ್ಚಿಸಿದೆ. ಈಗ ಎಲ್ಲಾ ಬ್ಯಾಂಕುಗಳಿಗೆ ರೈತರ ಸಾಲ ಮರುಪಾವತಿಗೆ ಒತ್ತಡ ಹೇರದಂತೆ ನಿರ್ದೇಶನ ಹೋಗಿದೆ.

ಸರ್ಕಾರದ ಈ ಕ್ರಮದಿಂದಾಗಿ ಕೃಷಿಗಾಗಿ ಈ ಹಿಂದೆ ಸಾಲ ಮಾಡಿದ್ದ ರೈತರಿಗೆ ಬರಗಾಲದ ಈ ಸಂಕಷ್ಟದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಸಾಲದ ಚಿಂತೆ ತಪ್ಪಲಿದೆ. ಮುಂದಿನ ಬಾರಿ ಮಳೆಯಾಗಿ ಉತ್ತಮ ಇಳುವರಿ ಪಡೆವವರೆಗೂ ರೈತ ನಿಶ್ಚಿಂತೆಯಿಂದ ಇರಬಹುದು.

ಸರ್ಕಾರದ ಆದೇಶದ ಮೇರೆಗೆ ಬರ ಪೀಡಿತ ತಾಲ್ಲೂಕುಗಳ ಅರ್ಹ ರೈತರ ಕೃಷಿ ಮತ್ತು ತೋಟಗಾರಿಕೆ ಬೆಳೆ ಸಾಲ ಪುನರ್ ರಚಿಸುವಂತೆ ಬ್ಯಾಂಕ್ ಗಳ ಸಮಿತಿ ಎಲ್ಲ ಬ್ಯಾಂಕ್ಗಳಿಗೆ ಸೂಚನೆ ನೀಡಿರುವುದರಿಂದ ಮುಂದಿನ ವರ್ಷಕ್ಕೂ ಕೂಡ ಅರ್ಹ ರೈತರು ಸಾಲ ಪಡೆಯಲಿದ್ದಾರೆ ಮತ್ತು ಅಲ್ಪಾವಧಿ ಬೆಳೆ ಸಾಲಗಳು ದೀರ್ಘಾವಧಿ ಸಾಲವಾಗಿ ಬದಲಾಗುವ ಸಾಧ್ಯತೆಗಳು ಇವೆ. ಆದರೆ ಮುಂದಿನ ವರ್ಷವಾದರೂ ವರುಣನ ಕೃಪೆಯಿಂದ ರೈತರ ಬದುಕು ಹಸನಾಗುವಂತೆ ಆಗಲಿ ಎಂದು ಈಗಿನಿಂದ ರಾಜ್ಯದ ರೈತರಿಗಾಗಿ ಪ್ರಾರ್ಥಿಸೋಣ.

WhatsApp Group Join Now
Telegram Group Join Now
Viral News

Post navigation

Previous Post: ಅಂಗಾಂಗ ಬೇಕಾದ್ರೂ ಮಾರಿಕೊಂಡು ಬದುಕುತ್ತೇನೆ, ಮುಸ್ಲಿಮರಿಗೆ ಮಟತ್ರ ಮನೆ ಬಾಡಿಗೆಗೆ ಕೊಡಲ್ಲ ಎಂದು ಬೋರ್ಡ್ ಹಾಕಿದ ಮಾಲೀಕ.!
Next Post: ಭತ್ತದ ಬೆಳೆಯಲ್ಲಿ ಮೂಡಿ ಬಂದ ಅಪ್ಪು ಚಿತ್ರ, ವಿಭಿನ್ನ ಕಲೆ ಮೂಲಕ ಅಭಿಮಾನ ಮೆರೆದ ರೈತ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Recent Posts

  • ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • ಅಪ್ಪು ಮನೆಗೆ ಹೋಗುವ ಕನಸು ಹೊಂದಿದ್ದ ಪುಟ್ಟ ಅಭಿಮಾನಿ, ಕ್ಯಾನ್ಸರ್ ಪೀಡಿತ ಬಾಲಕನ ಆಸೆ ನೆರವೇರಿಸಿದ ಅಶ್ವಿನಿ ಪುನೀತ್…
  • ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!
  • ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.? ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!

Copyright © 2023 Namma Sandalwood.

Powered by PressBook WordPress theme