Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ರಾತ್ರೋ ರಾತ್ರಿ ನೀರು ಬಿಟ್ಟು ಈಗ ಮೋದಿನಾ ಕರೆದ್ರೆ ಹೇಗೇ.? – ಚಕ್ರವರ್ತಿ ಸೂಲಿಬೆಲೆ.!

Posted on September 30, 2023 By Admin No Comments on ರಾತ್ರೋ ರಾತ್ರಿ ನೀರು ಬಿಟ್ಟು ಈಗ ಮೋದಿನಾ ಕರೆದ್ರೆ ಹೇಗೇ.? – ಚಕ್ರವರ್ತಿ ಸೂಲಿಬೆಲೆ.!

ಮಂಡ್ಯದ ಸರ್.ಎಂ ವಿಶ್ವೇಶ್ವರಯ್ಯ (SMV Circle ) ಪ್ರತಿಮೆ ಬಳಿ ಜಿಲ್ಲೆಯ ರೈತ ಹಿತ ರಕ್ಷಣಾ ಸಮಿತಿಯು ಕಳೆದ ವಾರದಿಂದ ಕಾವೇರಿ ನದಿ ನೀರಿಗಾಗಿ (Cauvery protest) ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಶುಕ್ರವಾರ ಕರ್ನಾಟಕ ಬಂದ್ (Karnataka bandh) ಪ್ರಯುಕ್ತ ಭಾಗಿಯಾದ ಚಿಂತಕ ಮತ್ತು ನಮೋಬ್ರಿಗೇಡ್ (Namo brigade) ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆಯವರು (Chakravarthi Sulibele) ರಾಜ್ಯ ಸರ್ಕಾರ ವಿನಾಕಾರಣ ಪ್ರಧಾನಿ ಮೋದಿ ಅವರ ಹೆಸರು ಹೇಳುತ್ತಿದೆ.

ಇದೆಲ್ಲ ರಾಜಕೀಯ ನಾಟಕ, ಕಾಂಗ್ರೆಸ್ ಸರ್ಕಾರವು ತನ್ನ ರಾಜಕೀಯ ಹಿತಕ್ಕಾಗಿ ತಮಿಳುನಾಡಿಗೆ (Thamilunadu) ನೀರು ಹರಿಸಿ ಈಗ ರಾಜ್ಯದಾದ್ಯಂತ ರಾಜ್ಯ ಸರ್ಕಾರದ ನಡೆ ವಿರೋಧಿಸಿ ಹೋರಾಟ ಶುರುವಾದ ಮೇಲೆ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸುತ್ತಿದೆ ಎಂದು ದೂರಿದ್ದಾರೆ. ನೀವು ನೀವು ಒಪ್ಪಂದ ಮಾಡಿಕೊಂಡು ಸೆಟಲ್ ಆದ ಮೇಲೆ ಪ್ರಧಾನಿ (PM Modi) ಅವರನ್ನು ಮಧ್ಯಸ್ಥಿತಿಗೆ ಕರೆಯುವುದಾದರೂ ಏಕೆ? ಅವರು ಬಂದು ಮಾಡುವುದಾದರೂ ಏನು ಎಂದಿದ್ದಾರೆ.

WhatsApp Group Join Now
Telegram Group Join Now

ಹೌದು, ಕಾವೇರಿ ನಮ್ದೇ ಆದ್ರೆ ಪ್ರಶ್ನೆ ಮಾಡ್ಬೇಕಾಗಿರೋದು ನಟರನ್ನಲ್ಲಾ ನಾಲಾಯಕ್ ರಾಜಕಾರಣಿಗಳನ್ನ.! ಎಂದು ಕಿಡಿ ಕಾರಿದ ಬಹುಭಾಷಾನಟ ಪ್ರಕಾಶ್ ರಾಜ್

ಕಾವೇರಿ ನದಿಯನ್ನು ನಿರಂತರವಾಗಿ ಸ್ವಚ್ಛ ಮಾಡುವವರು ನಾವು ಹೋರಾಟದ ದಿನದಂದು ಮಾತ್ರ ಬರುವವರು ಅಲ್ಲ, ಕಾವೇರಿ ಬಗ್ಗೆ ನಮಗೆ ಬಹಳಷ್ಟು ಕಾಳಜಿ ಇದೆ. ಇದು ಎರಡು ರಾಜ್ಯಕ್ಕೆ ಸೇರಿದ್ದು ಆದರೆ ಇಂತಹ ಬರಗಾಲದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ (State government) ನಮ್ಮ ರೈತರಿಗೆ (farmers) ಅನುಕೂಲವಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ DMK ಸರ್ಕಾರದ ಜೊತೆಗೆ ಸ್ನೇಹ ಬೆಳೆಸಿಕೊಂಡಿರುವ ರಾಜ್ಯ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ನಾಡಿನ ರೈತರನ್ನು ಬಲಿ ಕೊಡುತ್ತಿದೆ.

ಇನ್ನಾದರೂ ನಾಡಿನ ನೆಲಜಲದ ಬಗ್ಗೆ ಕಾಳಜಿ ಮಾಡಿ, ರಾಜ್ಯದ ಜನರ ಹಿತವನ್ನು ಕಾಯುವ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಆಗ್ರಹಿಸಿದ್ದಾರೆ. ಕಾವೇರಿ ಪ್ರಾಧಿಕಾರ ನೀರು ಬಿಡುವಂತೆ ಆದೇಶಿಸಿತ್ತು. ಆದರೆ, ಕಡಿಮೆ ನೀರು ಬಿಡುವಂತೆ ಆದೇಶ ನೀಡಿದೆ ಎಂಬ ಕಾರಣಕ್ಕೆ ತಮಿಳುನಾಡು ಸರಕಾರ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾಯಾಲಯ ಆದೇಶ ನೀಡುವ ಮುನ್ನವೇ ರಾಜ್ಯ ಸರಕಾರ ನೀರು ಬಿಟ್ಟಿತು.

ಸನಾತನ ಧರ್ಮದಿಂದಲೇ ಸಂವಿಧಾನದ ಉಳಿವು – ಬಸನಗೌಡ ಪಟೀಲ್ ಯತ್ನಲ್

ನೀರು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರೆ ತಮಿಳುನಾಡು-ಕರ್ನಾಟಕದ ನಡುವೆ ಘರ್ಷಣೆ ತಲೆದೋರುತ್ತಿತ್ತು. ಆಗ ಪ್ರಧಾನಿ ಅಥವಾ ಕೇಂದ್ರ ಸರಕಾರ ವಿವಾದ ಬಗೆಹರಿಸಲು ಮಧ್ಯ ಪ್ರವೇಶ ಮಾಡಬೇಕಿತ್ತು. ಆದರೆ ಇಲ್ಲಿ ಅವರು ನೀರು ಕೇಳಿದರು, ನೀವು ಕೊಟ್ಟಿರಿ, ಈಗ ಇದರಲ್ಲಿ ಪ್ರಧಾನಿ ಪಾತ್ರವೇನು? ರಾಜಕೀಯ ಹಿತಕ್ಕಾಗಿ ರಾಜ್ಯದ ಪರಿಸ್ಥಿತಿ ಹೀಗಿದ್ದರೂ ಕಾವೇರಿ ಬಿಡುಗಡೆ ಮಾಡಿದವರು ಈಗ ಪ್ರಧಾನಿಯನ್ನು ಮಧ್ಯಸ್ಥಿಕೆಗಾಗಿ ಆಹ್ವಾನಿಸುವುದು ಎಷ್ಟು ಸರಿ ? ನೀರು ಬಿಡುವ ಮುನ್ನವೇ ಇಂತಹ ಚಿಂತನೆ ಮಾಡಬೇಕಿತ್ತು.

ನೀರು ಬಿಟ್ಟು ಈಗ ಕೇಂದ್ರದ ಕಡೆಗೆ ಬೊಟ್ಟು ಮಾಡುವುದು ಸರಿಯಲ್ಲ. ರಾಜ್ಯದ ಸಂಸದರೂ ಸಹ ಈ ಬಗ್ಗೆ ಮುತುವರ್ಜಿ ವಹಿಸಬೇಕು. ಆದರೆ, ಪ್ರಧಾನಿ ಬಳಿ ಹೋಗಿ ಏನೆಂದು ಕೇಳಲು ಸಾಧ್ಯ? ಕರ್ನಾಟಕದ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು ತಮಿಳುನಾಡಿಗೆ ಕೇಳದೆಯೇ ನೀರು ಹರಿಸಿದ್ದಾರೆ. ಹೀಗಿರುವಾಗ ನಾನು ಹೇಗೆ ಮಧ್ಯ ಪ್ರವೇಶಿಸಲಿ ಎಂದು ಪ್ರಧಾನಿ ಪ್ರಶ್ನಿಸುತ್ತಾರೆ.

ಕರ್ನಾಟಕದಲ್ಲಿಯೂ JCB ಬರುತ್ತದೆ, ಒಂದಲ್ಲ ಒಂದು ದಿನ ಆ ಸ್ಥಾನಕ್ಕೆ ನಾನು ಬರುತ್ತೇನೆ ಎಂದ ಶಾಸಕ.!

ಇಂತಹ ಸಂದಿಗ್ಧ ಸಂದರ್ಭದಲ್ಲಿ ಸಂಸದರಾದರೂ ಏನು ಮಾಡಲು ಸಾಧ್ಯ ಎಂದು ಮರು ಪ್ರಶ್ನೆ ಮಾಡಿದರು. ರಾಜ್ಯ ಸರಕಾರ ನಡೆಯನ್ನು ಖಂಡಿಸಿ ಇಂದು ರಾಜ್ಯಾದ್ಯಂತ ಬಂದ್ ಯಶಸ್ವಿಯಾಗಿ ನಡೆಯುತ್ತಿದೆ. ಹಳೇಮೈಸೂರು ಅಥವಾ ಬೆಂಗಳೂರು ಭಾಗಕ್ಕೆ ಕಾವೇರಿ ಮಾತ್ರ ಸೀಮಿತವಲ್ಲ. ಇಡೀ ರಾಜ್ಯಕ್ಕೇ ಸೇರಿದ್ದು ಎಂಬ ಸಂದೇಶವನ್ನು ಸಾರಿದರು. ರಾಜ್ಯಾದ್ಯಂತ ಬಂದ್ ಮಾಡುವ ಮೂಲಕ ಈಗ ಸರಕಾರಗಳಿಗೆ ಚಾಟಿ ಬೀಸಲಾಗುತ್ತಿದೆ. ಇನ್ನಾದರೂ ಸರಕಾರಗಳು ಎಚ್ಚೆತ್ತುಕೊಳ್ಳಬೇಕು ಎಂದರು.

WhatsApp Group Join Now
Telegram Group Join Now
Useful Information

Post navigation

Previous Post: ಹೌದು, ಕಾವೇರಿ ನಮ್ದೇ ಆದ್ರೆ ಪ್ರಶ್ನೆ ಮಾಡ್ಬೇಕಾಗಿರೋದು ನಟರನ್ನಲ್ಲಾ ನಾಲಾಯಕ್ ರಾಜಕಾರಣಿಗಳನ್ನ.! ಎಂದು ಕಿಡಿ ಕಾರಿದ ಬಹುಭಾಷಾನಟ ಪ್ರಕಾಶ್ ರಾಜ್
Next Post: ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಸರ್ಕಾರದ ವಿಭಿನ್ನ ಪ್ಲಾನ್, ಸರ್ಕಾರಿ ಕಚೇರಿಗಳಿಗೆ ಶಾ-ಕ್, 15 ದಿನಗಳಲ್ಲಿ 760 ಕೋಟಿ ಬಾಕಿ ವಸೂಲಿ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Recent Posts

  • ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • ಅಪ್ಪು ಮನೆಗೆ ಹೋಗುವ ಕನಸು ಹೊಂದಿದ್ದ ಪುಟ್ಟ ಅಭಿಮಾನಿ, ಕ್ಯಾನ್ಸರ್ ಪೀಡಿತ ಬಾಲಕನ ಆಸೆ ನೆರವೇರಿಸಿದ ಅಶ್ವಿನಿ ಪುನೀತ್…
  • ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!
  • ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.? ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!

Copyright © 2023 Namma Sandalwood.

Powered by PressBook WordPress theme