ಇತ್ತೀಚೆಗೆ ಕನ್ನಡ ಕಿರುತೆರೆಯು ವಿಶೇಷ ಕಾರ್ಯಕ್ರಮಗಳ ಮೂಲಕ ವಿಶೇಷ ಕಾನ್ಸೆಪ್ಟ್ ಗಳ ಮೂಲಕ ಸಾಕಷ್ಟು ಪ್ರೇಕ್ಷಕರನ್ನು ಸೆಳೆದಿದೆ. ಅದರಲ್ಲೂ ಜೀ ಕನ್ನಡ (Zee kannada) ವಾಹಿನಿಯು ಪ್ರೇಕ್ಷಕರನ್ನು ಉತ್ತಮವಾಗಿ ಮನರಂಜಿಸುತ್ತಿದ್ದು ಟಿಆರ್ಪಿ (TRP) ಯಲ್ಲೂ ಬಹಳ ಮುಂದಿದೆ. ಜೀ ಕನ್ನಡ ವಾಹಿನಿಯಲ್ಲಿ ಸದ್ಯಕ್ಕೆ ಪ್ರಸಾರವಾಗುತ್ತಿರುವ ಸಂಗೀತ ಕಾರ್ಯಕ್ರಮವಾದ ಸರಿಗಮಪ, ಡ್ಯಾನ್ಸಿಂಗ್ ಕಾರ್ಯಕ್ರಮವಾದ ಡಿಕೆಡಿ, ಜೋಡಿಗಳ ಕಾರ್ಯಕ್ರಮವಾದ ಜೋಡಿ ನಂಬರ್ ಒನ್ ಮತ್ತು ಇತ್ತೀಚೆಗೆ ಮಹಿಳೆಯರಿಗಾಗಿ ಕ್ವೀನ್ ಹಾಸ್ಯಕ್ಕಾಗಿ ಕಾಮಿಡಿ ಕಿಲಾಡಿಗಳು ಮಕ್ಕಳ ಪ್ರತಿಭೆ ಹೊರತರಲು ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮಗಳು ಪ್ರಸಾರ ಆಗುತ್ತಿವೆ.
ಇವೆಲ್ಲದರ ಜೊತೆಗೆ ಝೀ ಕನ್ನಡ ವಾಹಿನಿಯಲ್ಲಿ ಸಾಧಕರ ವೇದಿಕೆ ಆಗಿರುವ ವೀಕೆಂಡ್ ವಿತ್ ರಮೇಶ್ (Weekend with Ramesh) ಇದೆಲ್ಲಕ್ಕಿಂತಲೂ ಹೆಚ್ಚಿಗೆ ಜನರ ಮನಸ್ಸಿಗೆ ಹತ್ತಿರವಾಗಿದೆ. ಈಗ ಇದರ ಮುಂದಿನ ಸೀಸನ್ ಪ್ರಾರಂಭ ಆಗುವುದನ್ನೇ ಎಲ್ಲರೂ ಎದುರು ನೋಡುತ್ತಿದ್ದಾರೆ. ಇದುವರೆಗೂ ಕೂಡ ರಮೇಶ್ ಅರವಿಂದ್ (Ramesh Aravind) ಅವರು ನಿರೂಪಣೆ ಮಾಡುತ್ತಿದ್ದ ಈ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಾಲ್ಕು ಆವೃತ್ತಿಗಳು ಬಹಳ ಚೆನ್ನಾಗಿ ಮೂಡಿ ಬಂದಿತ್ತು.
ಪುನೀತ್ ರಾಜಕುಮಾರ್, ದರ್ಶನ್, ಸುದೀಪ್, ಮಾಸ್ಟರ್ ಹಿರಣ್ಣಯ್ಯ, ವಿಜಯ ಪ್ರಕಾಶ್, ಯೋಗರಾಜ್ ಭಟ್ ರವಿ ಚನ್ನಣ್ಣನವರ್, ಸುಧಾ ಮೂರ್ತಿ, ಸಿದ್ದರಾಮಯ್ಯ ಇನ್ನು ಮುಂತಾದ ಸಾಧಕರ ಸಂದರ್ಶನ ನಡೆದಿದೆ. ಜೊತೆಗೆ ಪ್ರತಿ ವರ್ಷ ಕೂಡ ಪ್ರೇಕ್ಷಕರ ಕಡೆಯಿಂದಲೂ ಒಂದಷ್ಟು ಸಾಧಕರ ಹೆಸರು ಕೇಳಿ ಬರುತ್ತದೆ. ಇದುವರೆಗೆ ರಮ್ಯಾ ಹಾಗೂ ರಾಹುಲ್ ದ್ರಾವಿಡ್ ಅವರು ಈ ಕಾರ್ಯಕ್ರಮದಲ್ಲಿ ಆ ಸಾಧಕನ ಸೀಟ್ ಅಲ್ಲಿ ಕುಳಿತುಕೊಳ್ಳುವುದನ್ನು ನೋಡಬೇಕು ಎಂದು ಹೆಚ್ಚಿನವರಿಂದ ಮನವಿ ಕೇಳಿ ಬಂದಿದೆ.
ಇತ್ತೀಚೆಗೆ ಸದ್ಯದಲ್ಲೇ ಆ ಆಸೆ ನೆರವೇರುವ ಲಕ್ಷಣಗಳು ಕಾಣುತ್ತಿದೆ. ಯಾಕೆಂದರೆ ಸದ್ಯದಲ್ಲೇ ಐದನೇ ಆವೃತ್ತಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶುರು ಆಗುತ್ತಿದೆ. ಈ ಬಾರಿ ಓಟಿಪಿಯಲ್ಲಿ ಮಾತ್ರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನಡೆಯಲಿದೆ ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿದೆ. ಆದರೆ ಚಾನೆಲ್ ಮಾತ್ರ ಇನ್ನು ಆ ಬಗ್ಗೆ ಏನನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಈ ಬಾರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಜೀ ಕನ್ನಡ ಚಾನೆಲ್ ಅಲ್ಲೂ ಕೂಡ ಪ್ರಸಾರ ಆಗಲಿದೆಯಾ ಎನ್ನುವ ಗೊಂದಲ ಇನ್ನು ಹಾಗೆ ಉಳಿದಿದೆ.
ಆದರೆ ಈ ವರ್ಷದ ಮೊದಲ ಅತಿಥಿ ಯಾರು ಎನ್ನುವ ಸುಳಿವನ್ನು ಬಿಟ್ಟು ಕೊಟ್ಟಿದೆ. ಕರ್ನಾಟಕ ಖ್ಯಾತಿಯನ್ನು ದೇಶದಾದ್ಯಂತ ಮೊಳಗಿಸಿದ ನಟ ಹಾಗೂ ನಿರ್ದೇಶಕರ ಈ ಬಾರಿಯ ಮೊದಲ ಸಾಧಕ ಎನ್ನುವ ಸುಳಿವು ಸಿಕ್ಕಿದೆ. ಹೀಗಾಗಿ ಎಲ್ಲರೂ ರಿಷಬ್ ಶೆಟ್ಟಿ ಅವರ ಕಡೆ ನೋಡುತ್ತಿದ್ದಾರೆ. ಯಾಕೆಂದರೆ ತುಳುನಾಡಿನ ಭಾಗದ ದೈವ ಹಾಗೂ ದೇವರ ವಿಚಾರವನ್ನು ಕರ್ನಾಟಕದ ಈ ಭಾಗದ ಸಂಸ್ಕೃತಿಯನ್ನು ದೇಶದ ಗಡಿ ದಾಟಿ ಬೆಳಗಿಸಿದ ಮತ್ತು ಸಣ್ಣ ಬಜೆಟ್ ನಲ್ಲಿ ತಯಾರಿಸಿದ ಸಿನಿಮಾವನ್ನು 450 ಕೋಟಿ ಬಾಚುವಂತೆ ಮಾಡಿದ ನಟ ಹಾಗೂ ನಿರ್ದೇಶಕರ ಇವರೇ ಆಗಿರುವುದರಿಂದ ಇವರೇ ಈ ವರ್ಷದ ಮೊದಲ ಅತಿಥಿ ಎಂದು ನೆಟ್ಟಿಗರು ಗೆಸ್ ಮಾಡಿದ್ದಾರೆ.
ಜೊತೆಗೆ ನೆಟ್ಟಿಗರ ಕಡೆಯಿಂದ ಡಾ. ಬ್ರೋ, ಪ್ರಶಾಂತ್ ಚಕ್ರವ,ರ್ತಿ ಅನು ಕನ್ನಡತಿ ಮುಂತಾದವರನ್ನು ಕರೆಸಿ ಎನ್ನುವ ಅಹವಾಲು ಕೂಡ ಕೇಳಿ ಬರುತ್ತಿದೆ. ಈಗ ಇರುವ ಕಾಮಿಡಿ ಕಿಲಾಡಿಗಳು ಸೀಸನ್ 4 ಮುಗಿದ ಮೇಲೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶುರು ಆಗುವ ಸಾಧ್ಯತೆಗಳು ಕೂಡ. 2014ರಲ್ಲಿ ಮೊದಲ ಸೀಸನ್ ಶುರು ಮಾಡಿದ ಇದು 2019ರಲ್ಲಿ ನಾಲ್ಕನೇ ಸೀಸನ್ ಅನ್ನು ಮುಗಿಸಿತ್ತು. ಎರಡು ವರ್ಷದ ಗ್ಯಾಪ್ ನಂತರ ಸದ್ಯದಲ್ಲೇ ಕಾರ್ಯಕ್ರಮ ಶುರು ಆಗುವುದಂತೂ ಗ್ಯಾರಂಟಿ.