ಇತ್ತೀಚೆಗೆ ಲೋಕಸಭೆಯಲ್ಲಿ ಮಂಡನೆಯಾದ ನಾರಿ ಶಕ್ತಿ ವಂದನ್ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಸುದ್ದಿಯಾಗಿದ್ದ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (AIMIIM) ಎಮುಖ್ಯಸ್ಥ ಅಸಮುದ್ದೀನ್ ಓವೈಸಿ ತಮ್ಮ ಸಂಸದೀಯ ಕ್ಷೇತ್ರವಾದ ಹೈದರಾಬಾದ್ನಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ.
ಮಹಿಳೆಯರ ಮೀಸಲಾತಿಗೆ ವಿರೋಧಿಸುವುದು ತಮ್ಮ ಉದ್ದೇಶವಾಗಿರಲಿಲ್ಲ ಆದರೆ ಕಾಂಗ್ರೆಸ್ ಮತ್ತು BJP ಮಾಡಿರುವ ಜಂಟಿ ಪಿತೂರಿ ವಿರುದ್ಧ ನಿಂತಿದ್ದೇನೆ ಅಷ್ಟೇ, ಯಾಕೆ ಮುಸ್ಲಿಂ ಮಹಿಳೆಯರು ಮತ್ತು OBC ಮಹಿಳೆಯರಿಗೆ ಮೀಸಲಾತಿ ಸಿಗಬಾರದೇ ಎಂದು ಪ್ರಶ್ನೆ ಕೇಳಿ ತಮ್ಮ ವಿರುದ್ಧ ಮತ ಚಲಾವಣೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದರೊಂದಿಗೆ BJP ಸರ್ಕಾರದ ವಿರುದ್ಧ ಮಾತನಾಡುತ್ತ ಮುಂದಿನ ದಿನಗಳಲ್ಲಿ ಮುಸ್ಲಿಂ ಸದಸ್ಯರನ್ನು ಸಂಸತ್ತಿನಲ್ಲಿ ತಳಿಸಿದರು ಅನುಮಾನವಿಲ್ಲ ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ನಾನು ಇಲ್ಲಿಗೆ ಆಟ ಆಡಲು ಬಂದವನು, ಯಾವುದೇ ಕಾರಣಕ್ಕೂ ಕರ್ನಾಟಕ ವಿರೋಧಿ ಆಗಲಾರೆ ಎಂದ ಎಂ.ಎಸ್ ಧೋನಿ.!
ಲೋಕಸಭೆಯಲ್ಲಿ ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ವಿರುದ್ಧ BJP ಸಂಸದ ರಮೇಶ್ ಬಿಧುರಿ ಅವರು ನೀಡಿದ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಓವೈಸಿ, ಮುಂದಿನ ದಿನಗಳಲ್ಲಿ ಸಂಸತ್ತಿನಲ್ಲಿ ಮುಸ್ಲಿಮರ ಗುಂಪು ಹತ್ಯೆ ದಿನ ದೂರವಿಲ್ಲ ಎಂದು ಹೇಳುವ ಮೂಲಕ ತಮ್ಮ ಆತಂಕ ವ್ಯಕ್ತ ಪಡಿಸಿದ್ದಾರೆ.
ಲೋಕಸಭೆಯಲ್ಲಿ ಕಳೆದ ವಾರ ಚಂದ್ರಯಾನ-3 ಯಶಸ್ಸಿನ ಕುರಿತ ಚರ್ಚೆಯ ವೇಳೆ ಕೋಮುವಾದದ ಹಾಗೂ ಕೆಟ್ಟ ಹೇಳಿಕೆಯಿಂದಾಗಿ ಬಿಧುರಿ ಅವರಿಗೆ ಅಮಾನತು ಸೇರಿದಂತೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ವಿಪಕ್ಷಗಳು ಒತ್ತಾಯಿಸಿದ್ದವು. ಆದರೆ BJP ತನ್ನ ಸಂಸದಿನಿಗೆ ಶಿಕ್ಷೆ ಕೊಡುವ ಬದಲು ಆತನನ್ನು ಸಮರ್ಥಿಸಿಕೊಳ್ಳಲು ಯತ್ನಿಸಿತು ಎಂದು ಆರೋಪಿಸಿದ್ದಾರೆ.
ಇಂತಹ ವರ್ತನೆ ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಲೋಕಸಭೆ ಸ್ಪೀಕರ್ ಅಶರು ಓಂ ಬಿರ್ಲಾ ಬಿಧುರಿಗೆ ಎಚ್ಚರಿಕೆ ನೀಡಿದರು.ಅವರನ್ನು ಆ ಸ್ಥಾನಕ್ಕೆ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳೇ ಸಂಸತ್ತಿನಲ್ಲಿ ಈ ರೀತಿ ಮಾತನಾಡಬಾರದು ಎಂದು ಹೇಳುತ್ತಿವೆ ಆದರೆ ಒಂದು ದಿನದ ನಂತರ, BJP ಸಂಸದ ನಿಶಿಕಾಂತ್ ದುಬೆ ಅವರು ಶನಿವಾರ ಸ್ಪೀಕರ್ಗೆ ಪತ್ರ ಬರೆದು ತಮ್ಮ ಪಕ್ಷದ ಸಹೋದ್ಯೋಗಿಯ ಹೇಳಿಕೆಯನ್ನು ಖಂಡಿಸುವ ಸಂದರ್ಭದಲ್ಲಿ.
ಅಲಿಯವರ ಅಸಹ್ಯಕರ ನಡವಳಿಕೆ ಮತ್ತು ಟೀಕೆಗಳ ಕುರಿತು ಸೂಕ್ತ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ. ಗೋವು, ಕಳ್ಳ ಸಾಕಣಿಕೆ ಇಂತಹ ಪ್ರಕರಣಗಳಲ್ಲಿ ಕೂಡ ವಿನಾಕಾರಣವಾಗಿ ಮುಸ್ಲಿಮರನ್ನು ತಳಿಸಿರುವ ಉದಾಹರಣೆಗಳು ಇವೆ, ಹರಿಯಾಣದಲ್ಲಿ ನಡೆದ ಕೋಮುಗಲಭೆ ಪ್ರಕರಣದಲ್ಲೂ ಸರಿಯಾಗಿ ವಿಚಾರಣೆ ನಡೆಸದೆ ಹಲವರ ಮನೆಗಳನ್ನು ಕೆಡವಲಾಯಿತು ಉತ್ತರಖಂಡದಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ಮುಸ್ಲಿಂ ಜನರನ್ನೇ ಉದ್ದೇಶವಾಗಿಟ್ಟುಕೊಂಡು ದ್ವೇಷ ಭಾಷಣ ಮಾಡಿದ್ದಾರೆ.
ಕಾವೇರಿ ವಿವಾದ, ಪ್ರಧಾನಿ ಮಧ್ಯಸ್ಥಿಕೆಗೆ ದೇವೇಗೌಡರ ಪತ್ರ, ಪತ್ರ ಸ್ವಾಗತಿಸಿದ ಸಿದ್ದರಾಮಯ್ಯ.!
ಮತಗಳಿಕೆ ಉದ್ದೇಶದಿಂದ ಮೋದಿ ಅವರು ದೇಶದಲ್ಲಿ ದ್ವೇಷದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಆಡಳಿತದಲ್ಲಿದ್ದ ಸಮಯದಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿಯನ್ನು ಕೆಡವಲಾಯ್ತು ಎಂದು ಟೀಕೆ ಮಾಡಿದ ಓವೈಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೇರಳದ ವೈನಾಡು ಬಿಟ್ಟು ಹೈದರಾಬಾದ್ನಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದು ತೋರಿಸಿ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.
ಹಾಗೆ ತೆಲಂಗಾಣದ ಮುಸ್ಲಿಂ ಸಮುದಾಯಕ್ಕೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ BRS ಪಕ್ಷಕ್ಕೆ ಮತ ಹಾಕಿ, BRS ಹೇಳಿದ ಅವಧಿಯಲ್ಲಿ ಒಂದೇ ಒಂದು ಕೋಮು ಗಲಭೆ ನಡೆಯದಂತೆ ನೋಡಿಕೊಂಡಿದೆ ಹಾಗಾಗಿ ಈ ಬಾರಿಯೂ BRS ಬೆಂಬಲಿಸಿ ಎಂದಿದ್ದಾರೆ.