ದೊಡ್ಡವರ ಶೋಗೆ ಮಗಳನ್ನು ಯಾಕೆ ಕಳಿಸುತ್ತಿದ್ದೀರಾ.! ನಿಮಗೆ ದುಡ್ಡೇ ಮುಖ್ಯನಾ ಎಂದು ಕೇಳಿದವರಿಗೆ ಲೈವ್ ಆಗಿ ಬಂದು ಮಾಸ್ಟರ್ ಆನಂದ್ ಕೊಟ್ಟ ಖಡಕ್ ಉತ್ತರ ಏನು ಗೊತ್ತಾ.?
ಕಿರುತೆರೆ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ವಂಶಿಕ ಅಂಜನಿ ಕಶ್ಯಪ ಅವರು ಕನ್ನಡದ ಹೆಸರಾಂತ ಕಲಾವಿದ ಮತ್ತು ಬಾಲ ಕಲಾವಿದನಾಗಿ ಕನ್ನಡದಲ್ಲಿ ಹೆಸರು ಮಾಡಿದ್ದ ಮಾಸ್ಟರ್ ಆನಂದ್ ಅವರ ಪುತ್ರಿ. ಮಾಸ್ಟರ್ ಆನಂದ್ ಅವರು ಸಹ ಕಿರುತೆರೆ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಮಟ್ಟದಲ್ಲಿ ಅವರ ಮಗಳು ವಂಶಿಕ ಅಪ್ಪನನ್ನು ಮೀರಿಸುವಷ್ಟು ಕಿರುತೆರೆಯಲ್ಲಿ ಹೆಚ್ಚು ಜನರನ್ನು ಮುಟ್ಟಿದ್ದಾಳೆ ಎಂದೇ ಹೇಳಬಹುದು. ಅಷ್ಟರಮಟ್ಟಿಗೆ ಈಕೆಯ ನಟನೆ, ಆಕೆ ಹಾಸ್ಯ ಚಟಾಕಿ ಭಾರಿಸುವ ರೀತಿ ಎಲ್ಲವೂ ಪ್ರೇಕ್ಷಕರಿಗೆ ಇಷ್ಟ…