Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Rajath: ದರ್ಶನ್ & ಸುದೀಪ್ ಒಂದಾದ್ರೆ ತಿರುಪತಿಗೆ ಗುಂಡು ಹೊಡೆಸ್ಕೋತೀನಿ ಎಂದ ರಜತ್ ಕಿಶನ್.!

Posted on January 31, 2025 By Admin No Comments on Rajath: ದರ್ಶನ್ & ಸುದೀಪ್ ಒಂದಾದ್ರೆ ತಿರುಪತಿಗೆ ಗುಂಡು ಹೊಡೆಸ್ಕೋತೀನಿ ಎಂದ ರಜತ್ ಕಿಶನ್.!
Rajath

ಎಲ್ಲರಿಗೂ ಗೊತ್ತಿರುವಂತೆ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿ ಏಳು ವರ್ಷಗಳು ಮುಗಿದಿವೆ. ಈ ನಡುವೆ ಇವರಿಬ್ಬರನ್ನು ಒಟ್ಟು ಮಾಡುವ ಹತ್ತಾರು ಪ್ರಯತ್ನಗಳು ಕೂಡ ನಡೆಯುತ್ತಿದೆ. ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಗಳ ಕೆಸರೆರಚಾಟದಿಂದ ಅಪಾರ್ಥಗಳು ಕೂಡ ಆಗಿವೆ.

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಕರುನಾಡು ಈ ಇಬ್ಬರು ಕುಚುಕುಗಳು ಮತ್ತೆ ಒಂದಾಗಬೇಕು ತೆರೆ ಮೇಲೆ ಇವರಿಬ್ಬರನ್ನು ಒಂದೇ ಸಿನಿಮಾದಲ್ಲಿ ಕಾಣಬೇಕು ಎಂದು ಕಾಯುತ್ತಿದ್ದಾರೆ. ಇದೀಗ ಇದೇ ಪ್ರಯತ್ನದಲ್ಲಿ ಇವರಿಬ್ಬರ ಆಪ್ತ ಬಳಗದಲ್ಲಿ ಕಾಣಿಸಿಕೊಂಡಿರುವ ಮತ್ತೊಬ್ಬ ಸೆಲೆಬ್ರಿಟಿ ಆಸೆ ಪಟ್ಟಿದ್ದಾರೆ ಮುಂದುವರೆದು ಇವರು ಈ ಬಗ್ಗೆ ಹರಕೆ ಹೊತ್ತಿರುವುದಾಗಿ ಕೂಡ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಸೀಸನ್ 11ರ ಖ್ಯಾತಿಯ ರಜತ್ ಯಾರಿಗೆ ಗೊತ್ತಿಲ್ಲ ಹೇಳಿ ರಾಜ ರಾಣಿ ಸೇರಿದಂತೆ ಕೆಲವರು ರಿಯಲ್ ಶೆೋ ಗಳಲ್ಲಿ ಹಾಗೂ ಕನ್ನಡ ಕಿರುತೆರೆ ಧಾರಾವಾಹಿ ಪಾತ್ರಧಾರಿಯಾಗಿ ಮತ್ತು ಸೋಶಿಯಲ್ ಮೀಡಿಯಾ ಮೂಲಕ ಜನಪ್ರಿಯವಾಗಿರುವ ರಜತ್ ರವರು ಈ ಬಾರಿ ಸೀಸನ್ 11 ಮೇನ್ ಅಟ್ರಾಕ್ಷನ್ ಆಗಿದ್ದರು.

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಬಂದಿದ್ದ ಇವರು ತಮ್ಮ ಲವಲವಿಕೆ, ಮಾತಿನ ಕೌಂಟರ್, ಹಾಡು ಡ್ಯಾನ್ಸ್ ಗಲಾಟೆಗಳ ಮೂಲಕ ಮೂರನೇ ರನ್ನರ್ ಅಪ್ ಆಗಿ ಹೊರಬಿದ್ದರು. ಹೀಗಾಗಿ ಇವರ ನೇರನುಡಿ ಮಾತುಕತೆ, ಕನ್ನಡಿಗರಿಗೆ ಅಚ್ಚು ಮೆಚ್ಚು ಆಗಿದೆ. ಅಲ್ಲದೆ ಸ್ವತಃ ಬಿಗ್ ಬಾಸ್ ಕಂಟೆಸ್ಟೆಂಟ್ ಗಳನ್ನು ತಮ್ಮ ಕುಟುಂಬದಂತೆ ಕಾಣುವ ಸುದೀಪ್ ರಿಗೂ ಕೂಡ ರಜತ್ ರವರು ಬಹಳ ಇಷ್ಟ ಆಗಿದ್ದಾರೆ.

ಇನ್ನು ರಚತ್ ರವರು ಪಕ್ಕ ಡಿ ಬಾಸ್ ಫ್ಯಾನ್ ಏನೇ ಆದರೂ ದರ್ಶನ್ ರವರು ತಲೆ ಕೆಡಿಸಿಕೊಳ್ಳುವುದಿಲ್ಲ ಮತ್ತೆ ಬೌನ್ಸ್ಬ್ಯಾಕ್ ಆಗಿ ವಾಪಸ್ ಬರುತ್ತಾರೆ ಅವರ ಈ ಗುಣವೇ ನನಗೆ ಅಚ್ಚು ಮೆಚ್ಚು ನಾನು ಯಾವಾಗಲೂ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡೇ ಬಂದಿದ್ದಾರೆ. ದರ್ಶನ್ ಅವರ ಆಪ್ತ ವಲಯದ ಕಲಾವಿದರಲ್ಲಿ ರಜತ್ ಕೂಡ ಒಬ್ಬರು ಹೀಗಾಗಿ ಇವರ ರೆಸಾರ್ಟ್ ಓಪನಿಂಗ್ ಕೂಡ ದರ್ಶನ್ ಅವರಿಂದ ನೆರವೇರಿತ್ತು.

ಹೀಗಾಗಿ ಅಭಿಮಾನಿಯಾಗಿ ಆಪ್ತರಾಗಿ ರಜತ್ ಅವರಿಗೆ ದರ್ಶನ್ ಅವರ ಬಗ್ಗೆ ಅಪಾರ ಕಾಳಜಿ ಹಾಗೂ ಪ್ರೀತಿ ಇದೆ ಮತ್ತು ಈಗ ಬಿಗ್ ಬಾಸ್ ಕಾರ್ಯಕ್ರಮದಿಂದ ಸುದೀಪ್ ಅವರ ಬಗ್ಗೆ ಮೆಚ್ಚುಗೆ ಕೂಡ ಹೆಚ್ಚಾಗಿದೆ ಹೀಗಾಗಿ ತಮ್ಮ ಮನದಾಳದ ಮಾತನ್ನು ಮತ್ತೊಮ್ಮೆ ಹೊರ ಹಾಕಿದ್ದಾರೆ.

ಬಿಗ್ ಬಾಸ್ ಕಾರ್ಯಕ್ರಮದಿಂದ ಆಚೆ ಬಂದ ಮೇಲೆ ಪಾಲ್ಗೊಂಡಿದ್ದ ಸಂದರ್ಶನ ಒಂದರಲ್ಲಿ ಇವರಿಬ್ಬರ ಬಗ್ಗೆ ಪ್ರಶ್ನೆ ಎದುರಾದಾಗ ರಜತ್ ಹೀಗೆ ಹೇಳಿದ್ದಾರೆ. ನಾನು ಅವರಿಬ್ಬರ ಬಗ್ಗೆ ಮಾತನಾಡುವಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿಲ್ಲ ಆ ರೀತಿ ಬೆಳೆದರು ಕೂಡ ನಾನು ಮಾತನಾಡುವುದಿಲ್ಲ.

ನನಗೆ ಈ ಇಬ್ಬರು ಸ್ಟಾರ್ ಹೀರೋಗಳು ಕೂಡ ಬಹಳ ಇಷ್ಟ ಇವರ ನಡುವಿನ ಭಿನ್ನಾಭಿಪ್ರಾಯ ಬಗೆಹರಿದು ಇಬ್ಬರು ಒಂದಾಗಬೇಕು ಎಂದು ಆಸೆಪಡುವವರಲ್ಲಿ ನಾನು ಕೂಡ ಒಬ್ಬ ಆ ರೀತಿ ಏನಾದರೂ ಆದರೆ ಅಂದೇ ನಾನು ತಿರುಪತಿಗೆ ಹೋಗಿ ಗುಂಡು ಹೊಡೆಸಿಕೊಂಡು ಬರುತ್ತೇನೆ. ಆ ದೇವರ ದಯೆಯಿಂದ ಆದಷ್ಟು ಬೇಗ ಈ ಕಾರ್ಯ ಆಗಲಿ ಎಂದು ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

 

Viral News

Post navigation

Previous Post: Royal Movie: ದರ್ಶನ್ ಮೇಲಿನ ಕೋಪ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಬೇಸರ ವ್ಯಕ್ತ ಪಡಿಸಿದ ದಿನಕರ್ ತೂಗುದೀಪ.!
Next Post: Gouthami: ಗೌತಮಿ ವಿರುದ್ಧ ತಿರುಗಿ ಬಿದ್ದ ಮಾವ.! ಸೊಸೆ ಮೇಲೆ ಮಾವನಿಗೆ ಯಾಕಿಷ್ಟು ಬೇಸರ..?

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme