Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಬೀದಿ ಬಳಿ ನಿಂತು ತರಕಾರಿ ಸೊಪ್ಪು ಮಾರುತ್ತಿರುವ ನಟಿ ಹರ್ಷಿಕಾ ಪೂಣಚ್ಚ, ಕಾರಣವೇನು ಗೊತ್ತ.?

Posted on March 3, 2023 By Admin No Comments on ಬೀದಿ ಬಳಿ ನಿಂತು ತರಕಾರಿ ಸೊಪ್ಪು ಮಾರುತ್ತಿರುವ ನಟಿ ಹರ್ಷಿಕಾ ಪೂಣಚ್ಚ, ಕಾರಣವೇನು ಗೊತ್ತ.?

 

ನಟಿ ಹರ್ಷಿಕ ಪೂಣಚ್ಚ ಅವರು ಮುದ್ದು ಮೊಗ್ಗದ ಸುಂದರಿ. ವಯಸ್ಸು ಮೀರುತಿದ್ದರು ಸದಾ ಲವಲವಿಕೆಯಿಂದ ಇರುವ ಇವರ ಮನಸ್ಸು ಮತ್ತು ಚಟುವಟಿಕೆಯಿಂದ ಕೂಡಿರುವ ಇವರ ಕೆಲಸದಿಂದಾಗಿ ಈಗಿನ ನಾಯಕಿಯರು ಕೂಡ ನಾಚುವಂತೆ ತಮ್ಮ ಗ್ಲಾಮರ್ ಕಾಪಾಡಿಕೊಂಡಿದ್ದಾರೆ. ಕಾಲೇಜು ಹುಡುಗಿಯಂತೆ ಕಾಣುವ ಹರ್ಷಿಕ ಪೂಣಚ್ಚಾ ಇಂಡಸ್ಟ್ರಿಗೆ ಕಾಲಿಟ್ಟು ಒಂದು ದಶಕವೇ ಕಳೆದಿದೆ. ಪ್ರಜ್ವಲ್ ದೇವರಾಜ್ ಅವರ ಅಭಿನಯದ ಮುರಳಿ ಮೀಟ್ಸ್ ಮೀರಾ ಎನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಪಾದಾರ್ಪಣೆ ಮಾಡಿದ ಇವರು ಸದ್ದಿಲ್ಲದೆ ಅನೇಕ ಸಿನಿಮಾಗಳನ್ನು ಮುಗಿಸಿದ್ದಾರೆ.

ಆದರೆ ಅದ್ಯಾಕೋ ಈಕೆಯ ಅದೃಷ್ಟ ಅಷ್ಟೊಂದು ಕೈ ಹಿಡಿಯಲಿಲ್ಲ ಹಾಗಾಗಿ ನಡೆಸಿದ ಒಂದೆರಡು ಸಿನಿಮಾ ಬಿಟ್ಟು ಮತ್ಯಾವು ಅಷ್ಟೊಂದು ಸುದ್ದಿ ಆಗಲಿಲ್ಲಾ. ನಂತರ ಕಿರುತೆರೆ ಕಡೆಗೆ ಮುಖ ಮಾಡಿದ್ದ ಇವರು ಬಿಗ್ ಬಾಸ್, ಡ್ಯಾನ್ಸಿಂಗ್ ಸ್ಟಾರ್ ಇಂತಹ ರಿಯಾಲಿಟಿ ಶೋಗಳಲ್ಲಿ ಕಂಟೆಸ್ಟೆಂಟ್ ಆಗಿ ಕಾಣಿಸಿಕೊಂಡಿದ್ದರು. ಬಳಿ ಸಿನಿಮಾರಂಗದತ್ತ ಮತ್ತೆ ಮುಖ ಮಾಡಿದ ಇವರು ಈ ಬಾರಿ ಕೆಲ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.

ಇದರ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿರುವ ಇವರು ಬದುಕಿನ ಕುರಿತಾದ ಕೆಲಸದ ಸ್ವಾರಸ್ಯಕರ ವಿಷಯಗಳ ಬಗ್ಗೆ ತಮ್ಮ ಫಾಲೋವರ್ಸ್ ಮತ್ತು ಅಭಿಮಾನಿಗಳ ಜೊತೆ ವಿಷಯ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಇದ್ದಕಿದ್ದಂತೆ ಲಕ್ಷಣವಾಗಿ ಲಂಗ ದಾವಣಿ ತೊಟ್ಟುಕೊಂಡು ರೋಡಿಗಿಳಿದು ಬಿಟ್ಟಿದ್ದಾರೆ. ಇಷ್ಟಾಗಿದ್ದರೆ ಯಾರಿಗೂ ಆಶ್ಚರ್ಯ ಆಗುತ್ತಿರಲಿಲ್ಲ, ಆದರೆ ಈಕೆ ಈ ರಸ್ತೆ ಒಂದರಲ್ಲಿ ಟೊಮೊಟೊ ಮತ್ತು ಕೊತ್ತಂಬರಿ ಸೊಪ್ಪು ಮಾರಲು ನಿಂತು ಬಿಟ್ಟಿದ್ದಾರೆ.

ಈ ಕುರಿತ ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ instagram ಖಾತೆಯಲ್ಲೂ ಕೂಡ ಹಂಚಿಕೊಂಡಿದ್ದಾರೆ. ನಟಿಗೆ ಏನಾಯ್ತು ಎಂದು ಎಲ್ಲರಿಗೂ ಒಂದು ಕ್ಷಣ ಶಾ’ಕ್ ಆಗಿದೆ. ಆದರೆ ಇದು ಇವರ ಸಿನಿಮಾ ಒಂದಕ್ಕೆ ಪ್ರಚಾರ ಕೊಡುತ್ತಿರುವ ವಿಶೇಷ ರೀತಿ. ಅದೇನೆಂದರೆ ವಿಜಯ ರಾಘವೇಂದ್ರ ಮತ್ತು ಹರ್ಷಿಕ ಪೂಣಚ್ಚ ಅವರು ಮುಖ್ಯ ಭೂಮಿಯಲ್ಲಿ ಅಭಿನಯಿಸಿರುವ ಕಾಸಿನ ಸರ ಎನ್ನುವ ಸಿನಿಮಾವು ಮಾರ್ಚ್ 3ರಂದು ಬಿಡುಗಡೆ ಆಗುತ್ತಿದೆ.

ಈ ಸಿನಿಮಾವು ರೈತರ ಮತ್ತು ಅವರು ಬೆಳೆಯುವ ಬೆಳೆ ಕುರಿತು ಕಟ್ಟಿರುವ ಕಥೆ ಆಗಿದ್ದು, ವಿಜಯ ರಾಘವೇಂದ್ರ ಅವರು ಇದರಲ್ಲಿ ರೈತ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರೈತರ ಬಗ್ಗೆ ಮತ್ತು ರೈತರನ್ನು ಉಳಿಸುವ ಬಗ್ಗೆ ಹಾಗೂ ಸಾವಯವ ಆಹಾರ ಪದಾರ್ಥಗಳ ಬಳಕೆಯನ್ನು ಉತ್ತೇಜಿಸುವುದರ ಬಗ್ಗೆ ಸಂದೇಶ ನೀಡಲಾಗಿದೆಯಂತೆ. ಈ ಕುರಿತು ಹರ್ಷಿಕ ಪೂಣಚ್ಚ ಅವರು ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರುತ್ತಿರುವ ಫೋಟೋ ವಿಡಿಯೋಗಳ ಜೊತೆ ಬರಹವನ್ನು ಕೂಡ ಬರೆದು ಮಾಹಿತಿ ಹಂಚಿಕೊಂಡಿದ್ದಾರೆ.

ಕಾಸಿನಸರ ಸಿನಿಮಾವನ್ನು ಒಂದೊಳ್ಳೆ ಸದುದ್ದೇಶದಿಂದ ಮಾಡಿದ್ದೇವೆ. ಇದು ರೈತರ ಕಷ್ಟದ ಕುರಿತು ಮತ್ತು ನಮ್ಮ ಆರೋಗ್ಯದ ಕುರಿತು ಕೂಡ ಬೆಳಕು ಹರಿಸುವ ಚಿತ್ರ ಆಗಿದೆ. ಸಿನಿಮಾದ ಪ್ರೀಮಿಯರ್ ಶೋ ನೋಡಿದ ಎಲ್ಲರೂ ಕೂಡ ಚಿತ್ರದ ಬಗ್ಗೆ ಮೆಚ್ಚಿ ಮಾತನಾಡುತ್ತಿದ್ದಾರೆ. ಈಗ ಇದನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲೆ ಇದೆ. ಮಾರ್ಚ್ 3ರಂದು ಚಿತ್ರ ಬಿಡುಗಡೆ ಆಗುತ್ತಿದ್ದು, ದಯವಿಟ್ಟು ಎಲ್ಲರೂ ನಿಮ್ಮ ಹತ್ತಿರದಲ್ಲಿರುವ ಚಿತ್ರಮಂದಿರಗಳಿಗೆ ಭೇಟಿಕೊಟ್ಟು ಸಿನಿಮಾ ನೋಡಿ ಒಂದು ಉತ್ತಮ ಸಂದೇಶದ ಸಿನಿಮಾಗೆ ಪ್ರೋತ್ಸಾಹಿಸಿ.

ಬೆಂಗಳೂರಿನ ತ್ರಿವೇಣಿ ಥಿಯೇಟರ್ ಅಲ್ಲಿ ನಮ್ಮ ಇಡೀ ಚಿತ್ರತಂಡ ಮಾರ್ಚ್ 3ರ ಬೆಳಿಗ್ಗೆ 9:30ಕ್ಕೆ ನಿಮಗಾಗಿ ಕಾಯಲಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಎನ್ ಆರ್ ನಂಜೇಗೌಡ ಎನ್ನುವವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಕನ್ನಡದಲ್ಲಿ ಪ್ರಯೋಗಾತ್ಮಕ ಹಾಗೂ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳು ಹೆಚ್ಚಾಗಿ ಬರುತ್ತಿವೆ. ಈ ಹಿಂದೆ ವಂಶೋದ್ಧಾರಕ ಎನ್ನುವ ಕೃಷಿ ಮತ್ತು ಹಳ್ಳಿ ಜೀವನಕ್ಕೆ ಸಂಬಂಧಪಟ್ಟ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಅವರು ಅಭಿನಯಿಸಿ ಹೊಸ ಅಲೆ ಆರಂಭಿಸಿದರು ಹಾಗಾಗಿ ಕಾಸಿನ ಸರ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ, ಫಲಿತಾಂಶ ಏನಾಗಲಿದೆ ಕಾದು ನೋಡೋಣ.

View this post on Instagram

A post shared by Harshika Poonacha (@harshikapoonachaofficial)

Entertainment Tags:Actor Harshika, Harshika Poonaccha

Post navigation

Previous Post: ಸುರಿಯುವ ಮಳೆಯಲ್ಲಿ ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದ ನಟಿ ಅಧಿತಿ ಪ್ರಭುದೇವ, ಈಕೆ ಡ್ಯಾನ್ಸ್ ನೋಡಿ ಶೇಕ್ ಆದ ಸೋಶಿಯಲ್ ಮೀಡಿಯಾ.
Next Post: ಯಾವುದಾದ್ರೂ ಸಿನಿಮಾ ಸೋತರೆ ವಿಷ್ಣು ಏನ್ ಮಾಡತ್ತಿದ್ರು ಗೊತ್ತಾ.? ಈ ವಿಚಾರ ಗೊತ್ತದ್ರೆ ನಿಜಕ್ಕೂ ಅಚ್ಚರಿ ಪಡ್ತಿರಾ.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme