Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಟೆನ್ನಿಸ್ ಕೃಷ್ಣ ಕಟ್ಟಿಸಿದ ಮನೆಯನ್ನ ಅವರಿಗೆ ಗೊತ್ತಿಲ್ಲದಂತೆ ಮಾರಿದ್ದ ತಮ್ಮ, ಜನಪ್ರಿಯ ಕಲಾವಿದನಾಗಿದ್ದರೂ ಸ್ವಂತ ಸೂರಿಲ್ಲದೆ ಪರದಾಟ.!

Posted on November 2, 2023 By Admin No Comments on ಟೆನ್ನಿಸ್ ಕೃಷ್ಣ ಕಟ್ಟಿಸಿದ ಮನೆಯನ್ನ ಅವರಿಗೆ ಗೊತ್ತಿಲ್ಲದಂತೆ ಮಾರಿದ್ದ ತಮ್ಮ, ಜನಪ್ರಿಯ ಕಲಾವಿದನಾಗಿದ್ದರೂ ಸ್ವಂತ ಸೂರಿಲ್ಲದೆ ಪರದಾಟ.!

ತೆರೆ ಮೇಲೆ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ಕಾಣಿಸಿಕೊಳ್ಳುವವರಿಗೆಲ್ಲ ಒಳ್ಳೆ ಜೀವನ ಇರುತ್ತದೆ ಎಂದೇ ನಾವು ಭಾವಿಸಿರುತ್ತೇವೆ. ಆದರೆ ಅದರಲ್ಲಿ ಹಲವರು ದಿನದ ಕೂಲಿಗೆ ದುಡಿಯುವ ಕೆಲಸ ಕೆಲಸಗಾರರಂತಿರುತ್ತಾರೆ ನೂರಲ್ಲ ಇನ್ನೂರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರೂ ಕೂಡ ಸ್ವಂತದೊಂದು ಮನೆ ಇರುವುದಿಲ್ಲ,

ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕಲಾವಿದರ ಉದಾಹರಣೆಯನ್ನು ನಾವು ಕರ್ನಾಟಕದಲ್ಲಿಯೇ ಕಾಣಬಹುದು ಇದೇ ಸಾಲಿಗೆ ಸೇರುತ್ತಿದ್ದಾರೆ ನಮ್ಮ ನಿಮ್ಮ ನೆಚ್ಚಿನ ಹಾಸ್ಯನಟ ಟೆನ್ನಿಸ್ ಕೃಷ್ಣ. ಸೈಟ್ ನಿಂದ ಕರ್ನಾಟಕದಲ್ಲಿ ಖ್ಯಾತಿ ಪಡೆದವರಲ್ಲಿ ಇವರು ಒಬ್ಬರು. ಅಂತೆಯೇ ಅವರ ಪಿಚಾಚಿ, ಇನ್ನೂ ಬೆಲ್ಲು ಹೊಡೆಲಿಲ್ವೆ ಮಾರಮ್ಮನ ರಸ್ಕ್ ಡೈಲಾಗ್ ಕೂಡ ಫೇಮಸ್.

ನಂಜಪ್ಪನ ಮಗ ಗುಂಜಪ್ಪನಾಗಿ, ಚಿತ್ರಗುಪ್ತನಾಗಿ ಹೀಗೆ ನಾನು ಪೋಷಾಕು ತೊಟ್ಟು ಕನ್ನಡಿಗರನ್ನು ನಕ್ಕು ನಲಿಸಿದ ಹಾಸ್ಯನಟನ ವೈಯಕ್ತಿಕ ಬದುಕಿನ ವಿಚಾರಕ್ಕೆ ಬಂದಾಗ ಇವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕಾಶಿನಾಥ್, ಶಿವರಾಜ್ ಕುಮಾರ್, ವಿಷ್ಣುವರ್ಧನ್, ರವಿಚಂದ್ರನ್ ರಿಂದ ಹಿಡಿದು ದರ್ಶನ್ ಸುದೀಪ್ ರವರಿಗೆ ಬಹುತೇಕ ಸ್ಟಾರ್ ಗಳನ್ನು ಜೊತೆ ನಟಿಸಿರುವ ಇವರು ಟೆನಿಸ್ ಕೋಚ್ ಕೂಡ ಹಾಕಿದ್ದರು.

ಇವರ ತಂದೆ ಕೂಡ ಇದೇ ಕೆಲಸ ಮಾಡುತ್ತಿದ್ದರು. ತಂದೆಯಿಂದ ಮೂರು ಮಕ್ಕಳಿಗೂ ಕೂಡ ಇದು ಬಳುವಳಿಯಾಗಿ ಬಂತು ಅದ್ಯಾವ ಕಾರಣ ಇವರನ್ನು ಸಿನಿಮಾ ಇಂಡಸ್ಟ್ರಿ ಕಡೆಗೆ ಆಕರ್ಷಿಸಿತೋ ಗೊತ್ತಿಲ್ಲ ಬಣ್ಣದ ಬದುಕು ಅರಸಿ ಬಂದವರಿಗೆ ಟ್ಯಾಲೆಂಟ್ ಇದ್ದ ಕಾರಣ ಅವಕಾಶಗಳೇನೋ ಸಾಕಷ್ಟು ಸಿಕ್ಕಿತು, ಆದರೆ ನಿಲ್ಲಲು ನೆಲೆ ಸಿಗಲಿಲ್ಲ.

ಊರಲ್ಲೆಲ್ಲಾ ಸಿನಿಮಾದಲ್ಲಿ ಇವರನ್ನು ನೋಡಿದ ಕಾರಣ ಮನೆ ಹತ್ತಿರ ಹೋಗಿ ಜನರು ನಿನ್ನ ಮಗನು ಬೆಳೆದುಬಿಟ್ಟ ಯಾವ ಸಿನಿಮಾದಲ್ಲಿ ನೋಡಿದರು ಅವನೇ ಕಾಣುತ್ತನೆ, ಹೆಚ್ಚು ಕಡಿಮೆ ಕೋಟಿ ಸಂಪಾದನೆ ಮಾಡಿದ್ದಾನೆ ಎಂದು ಮಾತನಾಡಿಕೊಳ್ಳುತ್ತಿದ್ದರಂತೆ, ಆದರೆ ಆಗ ಸಾವಿರ ಸಿಕ್ಕಿದಿದ್ದರೆ ಅದೇ ಹೆಚ್ಚು.

ಕೊನೆಗೆ ತಾವೇ ತಮ್ಮ ಖರ್ಚಿನಲ್ಲಿ ಕಟ್ಟಿದ ಮನೆ ಕೂಡ ಉಳಿಯಲಿಲ್ಲ, ಸ್ವಂತ ತಮ್ಮ ಯಾವುದೋ ಕಷ್ಟದ ಪರಿಸ್ಥಿತಿಯಲ್ಲಿ ಇವರಿಗೂ ಸಹ ಹೇಳದೆ ಆ ಮನೆ ಮಾರಿಬಿಟ್ಟಿರಂತೆ. ಬೆಂಗಳೂರಿನಲ್ಲಿ ಇದ್ದಾಗ ಐದಾರು BDA ಸೈಟ್ ಮಾಡಿದ್ದರೂ, ಒಂದು ಕೂಡ ಇವರಿಗೆ ಉಳಿಯಲಿಲ್ಲವಂತೆ, ಸೂಪರ್ ಸ್ಟಾರ್ ಒಬ್ಬರು ಬೆಂಗಳೂರಿನಲ್ಲಿ ನನಗೆ ಒಂದು ಸೈಟ್ ಇದೆ ಅದು ಎಲ್ಲಿದೆ ನೀನೆ ಹುಡುಕಿ ನಿನ್ನ ಹೆಸರಿಗೆ ಮಾಡಿಸಿಕೊ ಎಂದು ಹೇಳಿದರಂತೆ.

ಅವರ ಒಳ್ಳೆತನಕ್ಕೆ ಮುಗ್ಧ ಮನಸ್ಸಿಗೆ ಬೇಸರ ಮಾಡಬಾರದು ಎಂದು ಒಪ್ಪಿಕೊಂಡರೂ ಇವರಿಗೆ ಅದು ದಕ್ಕುವುದಿಲ್ಲ ಎಂದು ಚೆನ್ನಾಗಿ ಗೊತ್ತಿತ್ತಂತೆ, ಯಾಕೆಂದರೆ ಈಗಾಗಲೇ ಇವರೇ ಖರೀದಿಸಿದ್ದ ಆರು ಸೈಟ್ ಮೋಸ ಆಗಿತ್ತಂತೆ. ಮಧ್ಯವರ್ತಿಗಳು ಅವರ ಹೆಸರಿಗೆ ಮಾಡಿಕೊಂಡು ಮಾರಿ ಬಿಟ್ಟಿದ್ದರಂತೆ, ಇದನ್ನು ಸರಿಪಡಿಸಲು ಕಚೇರಿಗಳಿಗೆ ಹೋದರೆ ಪ್ರತಿ ಟೇಬಲ್ ಇಂದ ಟೇಬಲ್ ಗೆ ಹಣ ಕಟ್ಟಬೇಕಾಗಿತ್ತು ಕಲಾವಿದರಾಗಿದ್ದರೆ ಕೂಡ ಅಲ್ಲಿ ಇದು ಚಲಾವಣೆಗೆ ಬರಲಿಲ್ಲ ಎನ್ನುತ್ತಾರೆ.

ಬೇರೆ ಇಂಡಸ್ಟ್ರಿಗಳಲ್ಲಿ ಸಿನಿಮಾ ಕಲಾವಿದರಿಗೆ ಪ್ರತ್ಯೇಕವಾದ ಕಾಲೋನಿ ಇರುತ್ತದೆ. ನಮ್ಮಲ್ಲಿ ಶಂಕರ್ ನಾಗ್ ಅವರು ಇಂದು ಬದುಕಿದ್ದರೆ ಅಂತಹ ಸಾಹಸ ಮಾಡುತ್ತಿದ್ದರು, ಅವರಿಗೆ ಆ ದೂರದೃಷ್ಟಿ ಇತ್ತು. ಅಣ್ಣಾವ್ರು ಕೂಡ ಜೆ.ಪಿ ನಗರದಲ್ಲಿ ಈ ರೀತಿ ಮಾಡಬೇಕೆಂದು ಪ್ರಯತ್ನ ಪಟ್ಟರು, ಆದರೆ ಅಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದನ್ನು ಕಂಡು ಅವರು ರಾಜಕೀಯದಿಂದ ಹಾಗೂ ಈ ವಿಚಾರದಿಂದ ದೂರ ಉಳಿದರು.

ನಮ್ಮ ಕಲಾವಿದರಲ್ಲಿ ಒಗ್ಗಟ್ಟು ಇಲ್ಲದಿರುವುದು ಇದಕ್ಕೆಲ್ಲ ಕಾರಣ ಆಯ್ತು ಈ ವಿಚಾರದಲ್ಲಿ ಪರಭಾಷಾ ಇಂಡಸ್ಟ್ರಿಯಿಂದ ನೋಡಿ ಕಲಿಯುವುದು ಸಾಕಷ್ಟಿದೆ ಎಂದು ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

cinema news

Post navigation

Previous Post: ಸ್ಲಂ ನಲ್ಲಿದ್ದ ಶ್ರೀರಾಮುಲುನ ದೊಡ್ಡ ನಾಯಕನಾಗಿ ಮಾಡಿದ್ದು ನಾನು ಬಹಿರಂಗ ಹೇಳಿಕೆ ಕೊಟ್ಟ – ಜನಾರ್ದನ ರೆಡ್ಡಿ.!
Next Post: ಬಿಗ್ ಬಾಸ್ ವಿರುದ್ಧ ಅಕ್ಷತಾ ನೇರ ಆರೋಪ, ನನ್ನ ಗಂಡನ ಒಳ್ಳೆತನ ಹೈಲೈಟ್ ಆಗ್ತಾ ಇಲ್ಲ, ಕಲರ್ಸ್ ಕನ್ನಡ ಟೀಮ್ ನಾವು ಕಾಲ್ ಮಾಡಿದ್ರೆ ರಿಸೀವ್ ಮಾಡುತ್ತಿಲ್ಲ ಎಂದು ಕಣ್ಣೀರಿಟ್ಟ ವಿನಯ್ ಪತ್ನಿ….

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme