ಕನ್ನಡ ಚಿತ್ರರಂಗವೂ ಕೂಡ ನೆನ್ನೆ ನಡೆದ ಕರ್ನಾಟಕ ಬಂದ್ ಗೆ ಬೆಂಬಲ ನೀಡಿದೆ. ಕಾವೇರಿ ನಮ್ಮದು ಎಂದು ಕೂಗಿ ಹೇಳುತ್ತಾ ಕನ್ನಡ ಫಿಲಂ ಚೇಂಬರ್ ಬಳಿ ಹೋರಾಟಕ್ಕೆ ಕಲಾವಿದರೆಲ್ಲರೂ ಬಾಗಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆಯಿಂದಲೇ ಚಿತ್ರರಂಗದ ತಾರೆಗಳಾದ ಶ್ರೀನಾಥ್, ಶ್ರೀನಿವಾಸ್ ಮೂರ್ತಿ, ಪದ್ಮ ವಾಸಂತಿ, ಸುಂದರ್ ರಾಜ್, ಪ್ರಮೀಳಾ ಜೋಶಾಯ್, ಉಮಾಶ್ರೀ, ರೂಪಿಕ, ಅನಿರುದ್ಧ, ಚಿಕ್ಕಣ್ಣ, ಅನುಪ್ರಭಾಕರ್, ರಘು ಮುಖರ್ಜಿ, ಭಾವನ, ದುನಿಯಾ ವಿಜಿ, ಲೂಸ್ ಮಾದ, ಶಿವಣ್ಣ, ಧ್ರುವ ಮುಂತಾದವರು ಭಾಗಿಯಾಗಿದ್ದರು ಸುಮಾರು ಹನ್ನೊಂದು ಗಂಟೆಗೆ ದರ್ಶನ್ ರವರು ಕೂಡ ಇದಕ್ಕೆ ಜೊತೆಯಾದರು.
ದರ್ಶನ್ ಅವರು ಬರುತ್ತಿದ್ದಂತೆ ಕ್ಯಾಮೆರಾ ಕಣ್ಣೆಲ್ಲಾ ದರ್ಶನ್ ಅವರ ಮೇಲೆಯೇ ಇತ್ತು ಎನ್ನಬಹುದು ದರ್ಶನ್ ಅವರು ವೇದಿಕೆ ಹತ್ತಿದೊಡನೆ ಶಿವಣ್ಣನ ಆಶೀರ್ವಾದ ಪಡೆದರು. ವೇದಿಕೆ ಮೇಲೆ ಶಿವಣ್ಣ, ಅನುಪ್ರಭಾಕರ್, ಧ್ರುವ, ಉಮಾಶ್ರೀ ಮುಂತಾದವರಿದ್ದರು. ಪಕ್ಕದಲ್ಲಿದ್ದ ಅನುಪ್ರಭಾಕರ್ ಅವರಿಗೂ ಶೇಕ್ ಹ್ಯಾಂಡ್ ನೀಡಿ ಮಾತನಾಡಿಸಿದರು ಆದರೆ ಶಿವಣ್ಣನ ಪಕ್ಕದಲ್ಲಿ ಇದ್ದ ಧ್ರುವ ಅವರ ಕಡೆ ನೋಡಿಲ್ಲ.
ನಾನು ನಿಜವಾದ ಪ್ರೇಮಿ, ಜಾತಿ-ಧರ್ಮ ಮೀರಿ ಹುಡುಗಿ ಇಷ್ಟ ಪಟ್ಟಿರುವೆ – ನಟ ಧನಂಜಯ್.!
ದರ್ಶನ್ ಅವರು ಬರುತ್ತಿದ್ದಂತೆ ವೇದಿಕೆ ಮೇಲೆ ಇದ್ದ ಎಲ್ಲರೂ ಕೂಡ ಎದ್ದು ನಿಂತರು ಆದರೆ ಧ್ರುವ ಎಲ್ಲರನ್ನು ನೋಡಿ ನಂತರ ಎದ್ದು ನಿಂತದ್ದು ಕಾಟಾಚಾರದಿಂದ ಮಿಡಿದ ರೀತಿ ಇತ್ತು. ಇದು ಇಷ್ಟಕ್ಕೆ ನಿಲ್ಲದೆ ದರ್ಶನ್ ಅವರು ಮೈಕ್ ಹಿಡಿದು ಮಾತನಾಡಿ ಮುಗಿಸುತ್ತಿದ್ದಂತೆ ಸೀಟ್ ಬಿಟ್ಟುಕೊಟ್ಟು ವೇದಿಕೆಯಿಂದ ಕೆಳಗಿಳಿದರು ಇದೆಲ್ಲವೂ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯಲ್ಪಟ್ಟಿದೆ.
ಈಗ ಹರಿದಾಡುತ್ತಿರುವ ಈ ಫೋಟೋಗಳು ಹಾಗೂ ವಿಡಿಯೋಗಳನ್ನು ಅನುಸರಿಸಿ ದರ್ಶನ್ ಮತ್ತು ಧ್ರುವ ನಡುವೆ ಎಲ್ಲವೂ ಸರಿ ಇಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕೆ ಧ್ರುವ ಅವರನ್ನು ಇದೇ ವಿಷಯಕ್ಕೆ ಟ್ರೋಲ್ ಕೂಡ ಮಾಡಲಾಗುತ್ತಿದೆ. ಹಿಂದೆ ಧ್ರುವ ನಾನು ದರ್ಶನ್ ಅಭಿಮಾನಿ ಎಂದು ಹೇಳಿದ್ದು ಅವರನ್ನು ಡಿ ಬಾಸ್ ಎಂದು ಕರೆದಿದ್ದು ಅವುಗಳನ್ನು ಈ ವಿಡಿಯೋ ಜೊತೆ ಸೇರಿಸಿ ಟ್ರೋಲ್ ಮಾಡಿ ಹರಿ ಬಿಡಲಾಗುತ್ತಿದೆ.
ದರ್ಶನ್ ಮತ್ತು ಧ್ರುವ ನಡುವೆ ಏನೋ ಸರಿ ಇಲ್ಲ ಎನ್ನುವುದು ಇವತ್ತಿನ ತನಕ ಯಾರಿಗೂ ಕೂಡ ಅನುಮಾನವೂ ಬಂದಿರಲಿಲ್ಲ, ಹಾಗಾಗಿ ಇದು ಉದ್ದೇಶಪೂರ್ವಕವಾಗಿ ಹಾಗಿರುವುದಲ್ಲ, ಹಿರಿಯರಿಗೆ ಗೌರವ ಕೊಡುವ ಸಲುವಾಗಿ ಅವರು ವೇದಿಕೆ ಬಿಟ್ಟು ಕೆಳಗಿರುವುದು ಇದಕ್ಕೆಲ್ಲ ಇಲ್ಲಸಲ್ಲದ ಬಣ್ಣ ಕಟ್ಟುವ ಅವಶ್ಯಕತೆ ಇಲ್ಲ ಎಂದು ಒಂದು ವರ್ಗ ಹೇಳುತ್ತಿದೆ.
ದರ್ಶನ್ ಅವರು ಅರ್ಜುನ್ ಸರ್ಜಾ ಅವರಿಗೆ ಬಹಳ ಆತ್ಮೀಯರು, ಕುರುಕ್ಷೇತ್ರದಲ್ಲಿ ಒಟ್ಟಿಗೆ ನಟಿಸಿದ್ದಾರ ಸಾಲದಕ್ಕೆ ಮೊದಲಿಂದಲೂ ಇವರಿಬ್ಬರ ನಡುವೆ ಬಾಂಡಿಂಗ್ ಚೆನ್ನಾಗಿದೆ. ದರ್ಶನ್ ಅವರು ಸಹ ಅರ್ಜುನ್ ಸರ್ಜಾ ಅವರ ನಿರ್ದೇಶನದ ಅವರ ಪುತ್ರಿ ಕನ್ನಡದಲ್ಲಿ ಲಾಂಚ್ ಆಗಿದ್ದ ಪ್ರೇಮ ಬರಹ ಸಿನಿಮಾದಲ್ಲಿ ಆಂಜನೇಯನ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು.
ರಾತ್ರೋ ರಾತ್ರಿ ನೀರು ಬಿಟ್ಟು ಈಗ ಮೋದಿನಾ ಕರೆದ್ರೆ ಹೇಗೇ.? – ಚಕ್ರವರ್ತಿ ಸೂಲಿಬೆಲೆ.!
ಹಾಡಿನಲ್ಲಿ ಅರ್ಜುನ್ ಸರ್ಜಾ, ಐಶ್ವರ್ಯ ಸರ್ಜಾ, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಜೊತೆ ದರ್ಶನ್ ಕುಣಿದಿದ್ದರು. ಹೀಗಾಗಿ ಈ ಮಾತುಗಳೆಲ್ಲ ಊಹಾಪೋಹ ಹಾಗೇನಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿಂದೆ ದುನಿಯಾ ವಿಜಯ್ ಮತ್ತು ದರ್ಶನ್ ನಡುವೆ ಮನಸ್ತಾಪವಿದೆ ಎಂದು ಹೇಳಲಾಗುತ್ತಿತ್ತು. ವೇದಿಕೆ ಮೇಲಿದ್ದ ದುನಿಯಾ ವಿಜಯ ಅವರ ಜೊತೆ ಕೂಡ ದರ್ಶನ್ ಅವರು ಆತ್ಮೀಯವಾಗಿ ಮಾತನಾಡಿದರು.
ಆದರೆ ಪಕ್ಕದಲ್ಲಿ ಇದ್ದ ಧ್ರುವ ಸರ್ಜಾ ಕಡೆ ಗಮನ ಕೊಡಲಿಲ್ಲ ಹೀಗಾಗಿ ಇವೆಲ್ಲವೂ ಸೂಕ್ಷ್ಮವಾಗಿ ನೋಡುವವರಿಗೆ ಅನುಮಾನ ಹುಟ್ಟಿಸುತ್ತದೆ ಆದರೆ ಇಬ್ಬರಲ್ಲಿ ಒಬ್ಬರು ಮುಕ್ತವಾಗಿ ಮಾತನಾಡುವವರೆಗೆ ಯಾವುದನ್ನು ನಂಬುವಂತಿಲ್ಲ ಹಾಗಾಗಿ ಚಿತ್ರರಂಗ ಒಗ್ಗಟ್ಟಾಗಿದೆ ಎಂದು ನಂಬೋಣ.