Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಕಿಚ್ಚ ಸುದೀಪ್ ಗೆ ವಿಶೇಷ ಗಿಫ್ಟ್ ನೀಡಿದ ಅರ್ಜುನ್ ಜನ್ಯ. ಇದ್ದಕ್ಕಿದ್ದ ಹಾಗೇ ಅರ್ಜುನ್ ಕಿಚ್ಚನಿಗೆ ಗಿಫ್ಟ್ ಕೊಡಲು ಕಾರಣವೇನು ಗೊತ್ತ.?

Posted on January 25, 2023 By Admin No Comments on ಕಿಚ್ಚ ಸುದೀಪ್ ಗೆ ವಿಶೇಷ ಗಿಫ್ಟ್ ನೀಡಿದ ಅರ್ಜುನ್ ಜನ್ಯ. ಇದ್ದಕ್ಕಿದ್ದ ಹಾಗೇ ಅರ್ಜುನ್ ಕಿಚ್ಚನಿಗೆ ಗಿಫ್ಟ್ ಕೊಡಲು ಕಾರಣವೇನು ಗೊತ್ತ.?

 

ಅರ್ಜುನ್ ಜನ್ಯ ಅವರು ಸದ್ಯಕ್ಕೆ ಕರ್ನಾಟಕದಲ್ಲಿ ನಂಬರ್ ಒನ್ ಸಂಗೀತ ನಿರ್ದೇಶಕ. ಕನ್ನಡದ ಸ್ಟಾರ್ ಹೀರೋಗಳಾದ ದರ್ಶನ್, ಸುದೀಪ್, ಯಶ್, ಪುನೀತ್, ಶಿವಣ್ಣ, ಗಣೇಶ್ ಹೀಗೆ ಎಲ್ಲಾ ಸ್ಟಾರ್ ಗಳ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡಿರುವ ಖ್ಯಾತಿ ಹೊಂದಿರುವ ಇವರು ಕನ್ನಡದ ಬಹು ಬೇಡಿಕೆಯ ಸಂಗೀತ ನಿರ್ದೇಶಕ. ಜೊತೆಗೆ ಕಿರುತೆರೆಯಲ್ಲೂ ಸಹ ರಿಯಾಲಿಟಿ ಶೋಗಳಿಗೆ ತೀರ್ಪುಗಾರನಾಗಿ ಪಾಲ್ಗೊಳ್ಳುವ ಇವರು ಕನ್ನಡದ ಕಿರುತೆರೆ ಪ್ರೇಕ್ಷಕರ ಮನಸಿಗೆ ಬಹಳ ಹತ್ತಿರವಾಗಿರುವ ಸೆಲೆಬ್ರಿಟಿ ಕೂಡ.

ಇವರನ್ನು ನೋಡುತ್ತಿದ್ದರೆ ತಿಳಿಯುತ್ತದೆ ಇವರೆಷ್ಟು ಸಿಂಪಲ್ ವ್ಯಕ್ತಿ ಎಂದು ಇವರ ಈ ಟ್ಯಾಲೆಂಟ್ ಹಾಗೂ ವ್ಯಕ್ತಿತ್ವದಿಂದಲೇ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿ ಇವರು ಕೂಡ ಒಬ್ಬ ಸ್ಟಾರ್ ಎನಿಸಿಬಿಟ್ಟಿದ್ದಾರೆ. ಅರ್ಜುನ್ ಜನ್ಯ ಅವರು ಸಂಗೀತದ ಕಾರಣದಿಂದಾಗಿ ಕರ್ನಾಟಕದ ಆಸ್ತಿಯೇ ಸರಿ. ಆದರೆ ಇಂತಹ ಒಂದು ಅಪೂರ್ವವಾದ ಟ್ಯಾಲೆಂಟ್ ಕನ್ನಡಕ್ಕೆ ಸಿಗಲು ಕಾರಣಕರ್ತರಾಗಿದ್ದು ಒಬ್ಬ ಸ್ಟಾರ್ ನಟ.

ಅದು ಬೇರೆ ಯಾರು ಅಲ್ಲ ಕಿಚ್ಚ ಸುದೀಪ್ ಅವರು. ಯಾಕೆಂದರೆ ಅರ್ಜುನ್ ಜನ್ಯ ಅವರು ಅವಕಾಶಕ್ಕಾಗಿ ಅಲೆದಾಡುತ್ತಾ ಹಲವು ವರ್ಷಗಳನ್ನು ಕಳೆದುಬಿಟ್ಟಿದ್ದರು. ಆರ್ಕೆಸ್ಟ್ರಾದಲ್ಲಿ ಹಾಡುತ್ತ ಅವಕಾಶಗಳಿಗಾಗಿ ಹರಸುತ್ತಾ ಗಾಂಧಿನಗರದಲ್ಲಿ ಸುತ್ತುತ್ತಿದ್ದ ಇವರಿಗೆ ಮೊದಲು ಕರೆದು ಮಣೆ ಹಾಕಿದ್ದು ಕಿಚ್ಚ ಸುದೀಪ್ ಅವರು. ತಮ್ಮ ಕೆಂಪೇಗೌಡ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡುವ ಚಾನ್ಸ್ ಧಕ್ಕಿಸಿ ಕೊಟ್ಟರು. ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಗಿಸಿಕೊಂಡ ಅರ್ಜುನ್ ಜನ್ಯ ಅವರು ಇಂದು ಈ ಹಂತ ತಲುಪಿದ್ದಾರೆ.

ಅದಕ್ಕಾಗಿ ಅವರು ಪ್ರತಿ ಬಾರಿ ಸುದೀಪ್ ಅವರಿಗೆ ಮನಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತ್ತಲೇ ಇರುತ್ತಾರೆ. ಈಗಾಗಲೇ ಸಾಕಷ್ಟು ವೇದಿಕೆಗಳಲ್ಲಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಇಂಟರ್ವ್ಯೂಗಳಲ್ಲಿ ರಿಯಾಲಿಟಿ ಶೋಗಳಲ್ಲಿ ಸುದೀಪ್ ಅವರು ಕೊಟ್ಟಿರುವ ಅವಕಾಶ ಎಂತಹದ್ದು ಅದರಿಂದ ಅವರ ಬದುಕು ಎಂತ ಮಹತ್ವ ಪೂರ್ಣವಾದ ತಿರುವು ಪಡೆದುಕೊಂಡಿತು ಎನ್ನುವ ವಿಷಯಗಳನ್ನು ಭಾವನಾತ್ಮಕವಾಗಿ ಹೇಳಿಕೊಂಡಿರುವ ಅರ್ಜುನ್ ಜನ್ಯ ಅವರು ಈ ಬಾರಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅವರಿಗಾಗಿ ವಿಶೇಷ ಉಡುಗೊರೆಯನ್ನು ಸಹ ನೀಡಿದ್ದಾರೆ.

ಆ ಕುರಿತ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲಿದೆ. ಈ ಬಾರಿ ಅರ್ಜುನ್ ಜನ್ಯ ಅವರು ಸುದೀಪ್ ಅವರಿಗಾಗಿ ಒಂದು ವಿಶೇಷವಾದ ಜರ್ಸಿ ಅನ್ನು ಗಿಫ್ಟಾಗಿ ಕೊಟ್ಟಿದ್ದಾರೆ, ಅದರ ಮೇಲೆ ಬಾಸ್ ಎಂದು ಬರೆಯಲಾಗಿದೆಯಂತೆ. ಅರ್ಜುನ್ ಜನ್ಯ ಅವರ ಬಗ್ಗೆ ಗಾಂಧಿನಗರದಲ್ಲಿ ಮತ್ತೊಂದು ಗಾಳಿ ಸುದ್ದಿ ಹರಿದಾಡುತ್ತಿದೆ, ಅದೇನೆಂದರೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶಕನಾಗಿ ಗೆದ್ದಿದ್ದಾರೆ ಈ ಬಾರಿ ಸಿನಿಮಾಗೆ ನಿರ್ದೇಶಕನಾಗಲು ಹೊರಟಿದ್ದಾರೆ ಎನ್ನುವುದು.

ಯಾರ ಕಡೆಯಿಂದಲೂ ಇದರ ಬಗ್ಗೆ ಸ್ಪಷ್ಟನೆ ಇಲ್ಲದಿದ್ದರೂ ಈ ಕುರಿತು ಚರ್ಚೆಗಳು ಆಗುತ್ತಲಿದೆ. ಕನ್ನಡಕ್ಕೆ ಹಲವು ಟ್ಯಾಲೆಂಟೆಡ್ ಕಲಾವಿದರು ಕೆಂಪೇಗೌಡ ಸಿನಿಮಾ ಆಗಿತ್ತು. ರವಿಶಂಕರ್ ಅಂತಹ ನಟಭಯಂಕರ ಕನ್ನಡಿಗರ ಪಾಲಿಗೆ ಕನ್ನಡ ಚಿತ್ರರಂಗಕ್ಕೆ ದೊರೆಯಲು ಕಾರಣವಾದದ್ದು ಕೂಡ ಇದೇ ಸಿನಿಮಾ, ಆರುಮುಗ ಎನ್ನುವ ಖಳನಾಯಕನ ಪಾತ್ರದಲ್ಲಿ ಅಬ್ಬರಿಸಿದ ಇವರು ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಲು ಸುದೀಪ್ ಅವರೇ ಕಾರಣಕರ್ತರಾದರು. ಹಾಗೆ ಜೆ ಕೆ ಎಂದು ಕರ್ನಾಟಕದಲ್ಲಿ ಫೇಮಸ್ ಆಗಿರುವ ಜಯರಾಮ್ ಕಾರ್ತಿಕ್ ಎನ್ನುವ ನಟ ಸಹ ಈ ಸಿನಿಮಾದಿಂದಲೇ ಕೆರಿಯರ್ ಆರಂಭ ಮಾಡಿದ್ದು. ಹೀಗೆ ಸುದೀಪ್ ಅವರು ಬೆಳಸಿರುವ ಪ್ರತಿಭೆಗಳ ದೊಡ್ಡ ದಂಡೇ ಕನ್ನಡ ಚಲನಚಿತ್ರ ರಂಗದಲ್ಲಿ ಇದೆ.

Viral News Tags:Arjun Janya, Kiccha Sudeep

Post navigation

Previous Post: ಸ್ಟಾರ್ ನಟ ಆಗಿದ್ರು ರಾಮ್ ಕುಮಾರ್ ಗೆ ಅಣ್ಣಾವ್ರ ಅಳಿಯನಾದ ಬಳಿಕ ಯಾರು ಅವಕಾಶ ಕೊಡಲಿಲ್ಲ ಯಾಕೆ ಗೊತ್ತಾ.? ಮಾಧ್ಯಮದ ಮುಂದೆ ನೋವು ಹಂಚಿಕೊಂಡ ರಾಮ್ ಕುಮಾರ್
Next Post: ಬಳ್ಳಾರಿಯಲ್ಲಿ ಅಪ್ಪು ಪ್ರತಿಮೆ ಅನಾವರಣ ಮಾಡುವಾಗಲೂ ಅಪ್ಪು ಅವರನ್ನು ನೆನೆದು ಭಾವುಕರಾದ ಅಶ್ವಿನಿ. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕರಳು ಚೂರ್ ಅನ್ನುತ್ತೆ.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme