ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಎಂದರೆ ತಮ್ಮ ಹುಟ್ಟುಹಬ್ಬಕ್ಕಿಂತ ಹೆಚ್ಚು. ಇಡೀ ರಾತ್ರಿ ಮನೆ ಮುಂದೆ ಕಾದು ಕೂತು ತಾವು ತಂದಿದ್ದ ಕೇಕ್ ಕಟ್ ಮಾಡಿಸಿ ಕೈಕುಲುಕಿ ವಿಶ್ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡರೆ ಹಿಮಾಲಯ ಹತ್ತಿದಷ್ಟೇ ಖುಷಿ.
ಹೀಗಾಗಿ ಪ್ರತಿ ವರ್ಷ ತಮ್ಮ ಸ್ಟಾರ್ ಹುಟ್ಟುಹಬ್ಬದ ದಿನಕ್ಕಾಗಿ ಕಾಯುತ್ತಿರುತ್ತಾರೆ ಆರಡಿ ಹೈಟ್ ಬ್ಯಾನರ್ ಗಳು, ದೊಡ್ಡ ದೊಡ್ಡ ಹೂವಿನ ಹಾರಗಳು, ನಟನ ಹೆಸರಿನಲ್ಲಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಅನ್ನದಾನ ಇತ್ಯಾದಿಗಳು ಅಭಿಮಾನದಿಂದ ನಡೆಯುತ್ತವೆ.
ಇದೇ ಸಂದರ್ಭದಲ್ಲಿ ನಡೆಯುವ ಒಂದೆರಡು ಅಹಿತಕರ ಘಟನೆಗಳು ಇಡೀ ವಾತಾವರಣವನ್ನೇ ಹಾಳು ಮಾಡುತ್ತವಗ. ಇಂತಹದ್ದೇ ಒಂದು ಅನಿರೀಕ್ಷಿತ ಘಟನೆ ಇಂದು ಗದಗದಲ್ಲಿ ನಡೆದಿದ್ದು ರಾಕಿ ಭಾಯ್ ಕಟೌಟ್ ಹಾಕಲು ಹೋದವರು ದು’ರಂ’ತ ಅಂತ್ಯ ಕಂಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಯಶ್ (Yash) ಅವರು ಕೋವಿಡ್ ಹಾಗೂ ಮತ್ತಿತರ ಕಾರಣಗಳಿಂದ ಫ್ಯಾನ್ಸ್ ಜೊತೆ ಹುಟ್ಟುಹಬ್ಬ (Birthday) ಆಚರಿಸಿಕೊಂಡಿಲ್ಲ ಈ ಬಾರಿ ಕೂಡ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು.
ಆದರೆ ವಾರದ ಹಿಂದೆ ಪತ್ರ ಬರೆದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಹುಟ್ಟು ಹಬ್ಬಕ್ಕೆ ನಾನಿರುವುದಿಲ್ಲ ಅಭಿಮಾನಿಗಳು ಇರುವಲ್ಲೇ ಹರಿಸಿ ನನಗಾಗಿ ಕಾಯುವುದು ಬೇಡ ಎಂದು ಮುಂಚೆಯೇ ಯಶ್ ತಿಳಿಸಿದ್ದರು.
ಯಶ್ ಇರದಿದ್ದರೂ ಅವರ ಅನುಪಸ್ಥಿತಿಯಲ್ಲಿ ರಾಜ್ಯದೆಲ್ಲೆಡೆ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಬಹಳ ಅದ್ಧೂರಿಯಾಗಿ ಆಚರಿಸುತ್ತಿದ್ದರು. ಆದರೆ ಗದಗ ಜಿಲ್ಲೆಯಲ್ಲಿ (Gadag incident) ದು’ರ್ಘ’ಟ’ನೆಯೊಂದು ಸಂಭವಿಸಿ ಎಲ್ಲರ ಸಂತೋಷವನ್ನು ಕಿತ್ತುಕೊಂಡಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನೆಚ್ಚಿನ ಹೀರೋ ಬರ್ತ್ಡೇ ವಿಶೇಷವಾಗಿ ಯಶ್ ಬ್ಯಾನರ್ ಕಟ್ಟುವ ವೇಳೆ ಮೂವರಿಗೆ ವಿದ್ಯುತ್ ಶಾಕ್ ತಗುಲಿದೆ. ಮುರಳಿ ನಡವಿನಮನಿ (20), ಹನಮಂತ ಹರಿಜನ್ (21), ಹಾಗೂ ನವೀನ್ ಗಾಜಿ(19) ಎಂಬ ಮೂವರು ಯುವಕರು ಸ್ಥಳದಲ್ಲೇ ಕೊನೆಯುರಿರೆಳೆದಿದ್ದಾರೆ (Yash Fans Died).
ಇವರ ಜೊತೆಗಿದ್ದ ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದು ಲಕ್ಷ್ಮೇಶ್ವರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಭಿಮಾನಿಗಳು ಮಧ್ಯರಾತ್ರಿಯೇ ಬರ್ತ್ ಡೇ ಸೆಲೆಬ್ರೇಷನ್ಗೆ ಮುಂದಾಗಿದ್ದು, ಆಗ ಯಶ್ ದೊಡ್ಡ ಫೋಟೊ ಇರುವ ಬ್ಯಾನರ್ ನಿಲ್ಲಿಸುವಾಗ ವಿದ್ಯುತ್ ತಂತಿಗೆ ತಗುಲಿರುವ ಪ್ರಕರಣ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಷಯ ಮುಟ್ಟುತ್ತಿದ್ದಂತೆ ಅಭಿಮಾನಿಗಳ ಮನೆಗೆ ದೌಡಾಯಿಸಿದ ಯಶ್ ಮೃ’ತ’ರ ಪೋಷಕರ ಕೈಹಿಡಿದು ನಾನಿದ್ದೇನೆ ಎನ್ನುವ ಧೈರ್ಯ ಹೇಳಿದ್ದಾರೆ. ಜೊತೆಗೆ ಇದೇ ಕಾರಣಕ್ಕೆ ನನಗೆ ಹುಟ್ಟು ಹಬ್ಬ ಬಂದರೆ ಭ’ಯ ಎನಿಸುತ್ತದೆ, ಈಗ ನನ್ನ ಮೇಲೆ ನನಗೆ ಅಸಹ್ಯ ಎನಿಸುತ್ತಿದೆ, ನಾನು ಎಲ್ಲರಿಗೂ ಬೇಡಿಕೊಳ್ಳುವುದು ಇಷ್ಟೇ.
ಯಾರು ಈ ರೀತಿ ಹುಚ್ಚಾಟಗಳಿಗೆ ಹೋಗಬೇಡಿ ಬ್ಯಾನರ್ ಹಾಕಲೇಬೇಕು ಎನ್ನುವ ಆಸೆ ನನಗಂತೂ ಇಲ್ಲ ನೀವು ಇರುವಲ್ಲೇ ಆರೋಗ್ಯವಾಗಿದ್ದು ಸುರಕ್ಷಿತವಾಗಿದೊದು ಮನಸ್ಸಿನಿಂದ ಹಾರೈಸಿದರೆ ಅದೇ ಸಾಕು ಇನ್ನು ಮುಂದೆಯಾದರೂ ಈ ರೀತಿ ಮಾಡಬೇಡಿ ಎಂದು ಕಳಕಳಿಯಿಂದ ವಿನಂತಿಸಿಕೊಂಡಿದ್ದಾರೆ.
ಇದೇ ಕಾರಣಕ್ಕಾಗಿ ಈ ರೀತಿಯೆಲ್ಲಾ ಆಗುವುದು ಬೇಡ ಕೋವಿಡ್ ಬೇರೆ ಹೆಚ್ಚಾಗುತ್ತಿದೆ ಎಂದು ನಾನು ವಿದೇಶದಲ್ಲಿದ್ದೇನೆ ಎಂದು ಪತ್ರ ಹಂಚಿಕೊಂಡಿದ್ದು ಎಲ್ಲಾ ಅಭಿಮಾನಿಗಳನ್ನು ಪ್ರೀತಿಸುತ್ತೇನೆ ಗೌರವಿಸುತ್ತೇನೆ ಆದರೆ ಅಹಿತಕರ ಘಟನೆಗಳ ನಡೆದು ಅವರ ಕುಟುಂಬಕ್ಕೆ ತೊಂದರೆ ಆಗಬಾರದು ಎನ್ನುವುದೇ ನನ್ನ ಕಾಳಜಿ ಎಂದು ನೊಂದುಕೊಂಡು ನುಡಿದಿದ್ದಾರೆ ರಾಮಚಾರಿ.