ಸದ್ಯಕ್ಕೆ ಸೋಶಿಯಲ್ ಮೀಡಿಯಾ ತೆಗೆದು ನೋಡಿದರೆ ಬರಿ ಬಿಗ್ ಬಾಸ್ (Bigboss) ಬಗ್ಗೆ ಚರ್ಚೆ. ಬಿಗ್ ಬಾಸ್ ಮನೆಯ ಆಟ ಮಾತ್ರವಲ್ಲದೆ ಬಿಗ್ ಬಾಸ್ ಕಂಟೆಸ್ಟಂಟ್ ಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ಅವರ ಬಗ್ಗೆ ಕೆಲ ಕುತೂಹಲಕಾರಿ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತಾ ಅಥವಾ ಗೊಂದಲಕ್ಕೊಳಗಾಗುತ್ತಾ ಚರ್ಚೆ ನಡೆಸುತ್ತಲೇ ಇರುತ್ತಾರೆ.
ಸದ್ಯಕ್ಕೆ ಈ ವಾರ ನೇರವಾಗಿ ಫಿನಾಲೆಗೆ ಎಂಟ್ರಿ ಕೊಡುವ (1st finale contestant) ಮೊದಲ ಸ್ಪರ್ಧಿ ಆದ ಸಂಗೀತಾಗೆ (Sangeetha) ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸದ್ಯಕ್ಕಿರುವ ಲೆಕ್ಕಾಚಾರದ ಪ್ರಕಾರ ಸಂಗೀತ ಅವರೇ ಈ ಬಾರಿಯ ವಿನ್ನರ್ ಕೂಡ ಆಗುತ್ತಾರೆ ಎನ್ನುವ ಮಾತುಗಳು ಇವೆ, ಇದರ ನಡುವೆ ಸಂಗೀತಾ ಗೆ ಕನ್ನಡ ಬರುವುದಿಲ್ಲ ಎಂದು ಅನುಮಾನ ವ್ಯಕ್ತವಾಗುತ್ತಿದೆ.
ಸಂಗೀತ ಅವರು ಬಹಳ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ, ಬಿಗ್ ಬಾಸ್ ಮನೆಯಲ್ಲಿ ಬಹುತೇಕ ಹೆಚ್ಚು ಕನ್ನಡವನ್ನೇ ಬಳಸಿ ಮಾತನಾಡುತ್ತಾರೆ. ಹೆಸರಿಗೆ ಸಂಗೀತ ಶೃಂಗೇರಿ ಎಂದು ಕೂಡ ಇದೆ ಹೀಗಿದ್ದರೂ ಅವರಿಗೆ ಕನ್ನಡ ಓದಲು ಬರಲಿಲ್ಲ ಎಂದರೆ ಅದು ಖಂಡಿತವಾಗಿಯೂ ಆಶ್ಚರ್ಯವನ್ನುಂಟು ಮಾಡುತ್ತದೆ.
ಆದರೆ ವಿಚಾರ ಏನೆಂದರೆ, ಹಿಂದೊಮ್ಮೆ ಬಿಗ್ ಬಾಸ್ ಗೆ ಹೋಗುವ ಮುನ್ನವೇ ಒಂದು ಸಂದರ್ಶನದಲ್ಲಿ ಈ ಬಗ್ಗೆ ಅವರು ಹೇಳಿಕೊಂಡಿದ್ದರು. ಈಕೆ ಜನರಿಗೆ ಪರಿಚಯವಾಗಿದ್ದು ಸುವರ್ಣ ವಾಹಿನಿಯ ಹರಹರ ಮಹಾದೇವ ಧಾರಾವಾಹಿಯ (HaraHara Mahadeva) ಸತಿ ಪಾತ್ರದ ಮೂಲಕ.
ಆಡಿಷನ್ ಲುಕ್ ಟೆಸ್ಟ್ನಲ್ಲಿ ಸೆಲೆಕ್ಟ್ ಆಗಿ ಬಿಟ್ಟೆ ಆದರೆ ಉದ್ದುದ್ದ ಎರಡು ಪೇಜ್ ಕನ್ನಡ ಡೈಲಾಗ್ ಕೊಡುತ್ತಿದ್ದರು ಡೈಲಾಗ್ ನೋಡಿ ಭ’ಯ ಆಗಿತ್ತು, ಯಾಕೆ ಅಂದರೆ ನನಗೆ ಕನ್ನಡದ ಮೇಲೆ ಹಿಡಿತ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ನನ್ನ ತಂದೆ ಏರ್ ಫೋರ್ಸ್ (Air force) ನಲ್ಲಿದ್ದರೂ ಹೀಗಾಗಿ ನಾವು ಆಗಾಗ ಶಾಲೆ ಬದಲಾಯಿಸಬೇಕಿತ್ತು, ಭಾರತದಲ್ಲೆಡೆ ವಿವಿಧ ಕಡೆ ವಾಸಿಸಿದ್ದೇವೆ.
ನಾನು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಓದಿದ್ದು ಹೀಗಾಗಿ ಕನ್ನಡ ಅಷ್ಟೊಂದು ಓದಲು ಬರೆಯಲು ಬರುವುದಿಲ್ಲ ಎಂದು ಒಪ್ಪಿಕೊಂಡಿದ್ದರು. ಬಿಗ್ ಬಾಸ್ ಮನೆಗೆ ಹೋದ ಮೇಲು ಕೂಡ ಬಿಗ್ ಬಾಸ್ ನಿಂದ ಬರುವ ಯಾವುದೇ ಟಾಸ್ಕ್ ರೂಲ್ ಬುಕ್ ಆಗಲಿ ಅಥವಾ ಇನ್ಯಾವುದೇ ಮೆನು ಆಗಲಿ ಇದುವರೆಗೂ ಅವರು ಓದಿಲ್ಲ.
ಎಲ್ಲಾ ವಿಷಯದಲ್ಲಿ ಕುತೂಹಲ ತೋರಿ ಮುಂದೆ ಬರುವ ಅವರು ಬಿಗ್ ಬಾಸ್ ಪತ್ರ ಓದಲು ಹಿಂದೇಟು ಹಾಕುತ್ತಾರೆ ಅಥವಾ ಬೇರೆಯವರಿಗೆ ಕೊಡುತ್ತಾರೆ. ಇದನ್ನು ಗಮನಿಸಿ ಇಂಥದೊಂದು ಅನುಮಾನ ವ್ಯಕ್ತವಾಗಿತ್ತು, ಅದಕ್ಕೆ ಸ್ಪಷ್ಟತೆ ಅವರ ಹಿಂದಿನ ವಿಡಿಯೋ ಇಂದ ಸಿಕ್ಕಿದೆ. ಇದಕ್ಕೆ ಪೂರಕ ಎನ್ನುವಂತೆ ಅವರ ತಾಯಿ ಕೂಡ ಬಿಗ್ ಬಾಸ್ ಮನೆಗೆ ಬಂದಾಗ ನನ್ನ ಮಗಳು ಹಸಿವು ತಡೆಯುವುದಿಲ್ಲ.
ಶಾಲೆಯಿಂದ ಮನೆಗೆ ಬಂದಾಗ ಹಿಂದಿ ಕನ್ನಡ ಎರಡು ಮಿಕ್ಸ್ ಮಾಡಿ ಮುಜೆ ಊಟ ದೆದೋ ಎಂದು ಕೇಳುತ್ತಿದ್ದಳು ಎಂದು ಹೇಳಿದ್ದರು. ಸಂಗೀತ ಅವರು ಕರ್ನಾಟಕದಿಂದ ಹಲವು ವರ್ಷಗಳ ಕಾಲ ದೂರ ಇದ್ದಿದ್ದರಿಂದ ಅವರು ಕನ್ನಡ ಓದಲು ಬರೆಯಲು ಸರಿಯಾಗಿ ಕಲಿತಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಆದರೆ ಅವರ ಕನ್ನಡ ಅಭಿಮಾನ ಯಾವುದಕ್ಕೂ ಕಡಿಮೆ ಇಲ್ಲ. ಬಹಳ ಅಚ್ಚುಕಟ್ಟಾಗಿ ಕನ್ನಡ ಮಾತನಾಡುವ ಇವರು ಇದೇ ಕಾರಣಕ್ಕಾಗಿ ಹೆಚ್ಚು ಜನರನ್ನು ತಲುಪಿ ಫಿನಾಲೆ ಕಂಟೆಸ್ಟೆಂಟ್ ಆಗಲು ಸಾಧ್ಯವಾಯಿತು ಎಂದರೂ ತಪ್ಪಾಗಲಾರದು. ಹರ ಹರ ಮಹಾದೇವ ಧಾರಾವಾಹಿ ಬಳಿಕ ಇವರು ಚಾರ್ಲಿ 777, ಲಕ್ಕಿಮ್ಯಾನ್, ಪಂಪ ಸಿನಿಮಾದಲ್ಲೂ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಬಿಗ್ ಬಾಸ್ ಮೂಲಕ ಮನೆ ಮನೆ ಮಾತಾಗಿದ್ದಾರೆ ಸಂಗೀತ ಈ ಬಾರಿಯ ವಿನ್ನರ್ ಅಗಲಿದ್ದಾರೆಯೇ ಕಮೆಂಟ್ ಮಾಡಿ ತಿಳಿಸಿ.