Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ನಾನು ಮದ್ವೆ ಆಗೋದಾದ್ರೆ ರೈತನ್ನೆ ಆಗೋದು ಎನ್ನುವ ಹೇಳಿಕೆ ಕೊಟ್ಟ ನಟಿ ಹರ್ಷಿಕಾ ಪುಣಚ್ಚ.!

Posted on March 14, 2023 By Admin No Comments on ನಾನು ಮದ್ವೆ ಆಗೋದಾದ್ರೆ ರೈತನ್ನೆ ಆಗೋದು ಎನ್ನುವ ಹೇಳಿಕೆ ಕೊಟ್ಟ ನಟಿ ಹರ್ಷಿಕಾ ಪುಣಚ್ಚ.!

 

ನಟಿ ಹರ್ಷಿತ ಪೂಣಚ್ಚ ಹಾಗೂ ವಿಜಯ ರಾಘವೇಂದ್ರ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಕಾಸಿನ ಸರ ಸಿನಿಮಾ ಒಳ್ಳೆ ಪ್ರದರ್ಶನ ಕಾಣುತ್ತಿದೆ. ಸಿನಿಮಾ ರಿಲೀಸ್ ಆಗಿ ಎರಡು ವಾರಗಳಾಗಿದ್ದು ಎರಡನೇ ವಾರವು ಕೂಡ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದರ ಸಕ್ಸಸ್ ಮೀಟ್ ಕೂಡ ಚಿತ್ರತಂಡ ನಡೆಸಿದೆ. ಜೊತೆಗೆ ಪ್ರೆಸ್ ಮೀಟ್ ಕೂಡ ಮಾಡಿದೆ. ಆ ಪ್ರೆಸ್ ಮೀಟ್ ಅಲ್ಲಿ ನಟಿ ಹರ್ಷಿಕ ಪುಣಚ್ಚ ಅವರು ಸಿನಿಮಾ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ. ಮತ್ತು ಮಾಧ್ಯಮದವರ ಎದುರೇ ಈ ಸಿನಿಮಾದಲ್ಲಿ ನಾನು ಅಭಿನಯಿಸಿದ ಮೇಲೆ ಬಹಳ ತಿಳುವಳಿಕೆ ಬಂದಿದೆ ಅದೇ ಕಾರಣಕ್ಕಾಗಿ ನಾನು ಮದುವೆ ಆದರೆ ರೈತನನ್ನು ಮದುವೆ ಆಗಬೇಕು ಎಂದು ನಿರ್ಧಾರ ಮಾಡಿದ್ದೇನೆ ಎಂದು ಹೇಳಿಕೆ ಕೂಡ ಕೊಟ್ಟಿದ್ದಾರೆ.

ಕಾಸಿನ ಸರ ಸಿನಿಮಾ ಕನ್ನಡದ ಅತ್ಯದ್ಭುತ ಪ್ರಯೋಗಾತ್ಮಕ ಚಿತ್ರ ಆಗಿದೆ. ಹಳ್ಳಿಗಾಡಿನ ರೈತನ ಜೀವನದ ಬಗ್ಗೆ ಹೋರಾಟಗಳ ಬಗ್ಗೆ ಸಮಸ್ಯೆಗಳ ಬಗ್ಗೆ ಬೆಳಕು ಚೆಲುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದ್ದು, ಸಾಂಪ್ರದಾಯಿಕ ಕೃಷಿ ಮಹತ್ವ ಸಾರಿರುವ ಸಿನಿಮಾ ಆಗಿದೆ. ಇದರ ಬಗ್ಗೆ ಕೂಡ ಮಾತನಾಡಿದ ನಟಿ ಹರ್ಷಿಕಾ ಪುಣಚ್ಚ ಇತ್ತೀಚಿನ ಸಿನಿಮಾಗಳಲ್ಲಿ ಮನರಂಜನೆ ಮಾತ್ರ ಮುಖ್ಯ ಆದರೆ ಈ ಸಿನಿಮಾದಲ್ಲಿ ನಾವು ಮನರಂಜನೆಯೊಂದಿಗೆ ಒಂದೊಳ್ಳೆ ಸಂದೇಶವನ್ನು ಸಮಾಜಕ್ಕೆ ತಲುಪಿಸಿದ ಸಮಾಧಾನ ಇದೆ.ನನ್ನ ವೃತ್ತಿ ಚೀನಾದಲ್ಲಿಯೇ ನಾನು ಒಪ್ಪಿಕೊಂಡ ಅತ್ಯುತ್ತಮ ಚಿತ್ರ ಇದು ಎಂದು ಹೇಳಿಕೊಂಡಿದ್ದಾರೆ.

ಸಿನಿಮಾದಲ್ಲಿ ತಾವು ಮಾಡಿರುವ ತಮ್ಮ ಪಾತ್ರದ ಬಗ್ಗೆ ಕೂಡ ಹೇಳಿಕೊಂಡ ನಟಿ ಸಿನಿಮಾದಲ್ಲಿ ಸಂಪಿಗೆ ಎನ್ನುವ ಪಾತ್ರ ಮಾಡಿದ್ದೇನೆ ಆದರೆ ನಿಜ ಜೀವನದಲ್ಲಿ ನಾನು ಆ ಪಾತ್ರದಷ್ಟು ಒಳ್ಳೆವಳು ಅಲ್ಲ ಎಂದು ಕೂಡ ಒಪ್ಪಿಕೊಂಡಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆ ಒಂದಕ್ಕೆ ಹರ್ಷಿಕಾ ಉತ್ತರಿಸುವಾಗ ಈ ರೀತಿ ಹೇಳಿದ್ದಾರೆ. ಈಗಿನ ಕಾಲದ ಹುಡುಗಿಯರು ಸಿಟಿ ಹುಡುಗರನ್ನೇ ಮದುವೆಯಾಗಲು ಬಯಸುತ್ತಾರೆ ಅಲ್ಲವಾ ಎನ್ನುವ ಪ್ರಶ್ನೆ ಎದುರಾದಾಗ ಹರ್ಷಿಕ ಪುಣಚ್ಚ ಅವರು ಕಾಸಿನ ಸರ ಸಿನಿಮಾದಿಂದ ನಾನು ಕಲಿತ ಪಾಠ ಎಂದರೆ ನಾನು ಕೂಡ ರೈತನನ್ನೇ ಮದುವೆಯಾಗಬೇಕು ಎಂದುಕೊಂಡಿದ್ದೇನೆ.

ಖಂಡಿತ ನಾನು ರೈತನನ್ನು ಮದುವೆಯಾಗುತ್ತೇನೆ ಎಂದು ಹೇಳಿದ ತಕ್ಷಣವೇ ಪಕ್ಕದಲ್ಲಿದ್ದ ನಿರ್ದೇಶಕರಿಗೆ ಕಾಫಿ ಪ್ಲಾಂಟರ್ ಅನ್ನು ಕೂಡ ಕೃಷಿಕ ಎಂದು ಪರಿಗಣಿಸಬಹುದು ಅಲ್ಲವಾ ಎಂದು ಪ್ರಶ್ನೆ ಕೇಳಿದ್ದಾರೆ. ನಿರ್ದೇಶಕ ಎನ್ ಆರ್ ನಂಜೇಗೌಡ ಅವರು ಸಹ ಮಾತನಾಡಿ ಇದು ಪ್ರತಿಯೊಬ್ಬ ರೈತನಿಗೂ ಕೂಡ ತಲುಪಬೇಕಾದ ಸಿನಿಮಾ ಸರ್ಕಾರದ ಜೊತೆ ಮಾತನಾಡಿ ಇದನ್ನು ಇನ್ನಷ್ಟು ರೈತರಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಈ ಸಕ್ಸಸ್ ಮೀಟ್ ಗೆ ಸಿನಿಮಾಗೆ ಸಂಬಂಧಪಟ್ಟ ಪ್ರತಿಯೊಬ್ಬ ಕಲಾವಿದರು ಹಾಗೂ ತಂತ್ರಜ್ಞರು ಕೂಡ ಭಾಗಿಯಾಗಿದ್ದರು. ಸಿನಿಮಾ ಗೆ ಸಂಭಾಷಣೆ ಬರೆದ ಹೆಚ್.ಸಿದ್ದರಾಮಯ್ಯ, ಹಿರಿಯ ನಿರ್ದೇಶಕ ಬಿ ರಾಮಮೂರ್ತಿ, ಚಿತ್ರ ಸಾಹಿತಿ ಜಿಎನ್ ಪ್ರಹ್ಲಾದ್ ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಕನ್ನಡದ ಅನೇಕ ನಟಿ ಮಣಿಯರು ಈ ರೀತಿ ಈಗಾಗಲೇ ರೈತರನ್ನು ಮದುವೆ ಆಗುವುದಾಗಿ ಹೇಳಿಕೆ ಕೊಟ್ಟಿದ್ದಾರೆ ಆದರೆ ಅದನ್ನು ಪಾಲಿಸಿದವರು ಬೆರಳೆಣಿಕೆ ಅಷ್ಟು ಜನ ಮಾತ್ರ. ಈಗ ಹರ್ಷಿಕ ಕೂಡ ಅದೇ ಸಾಲಿಗೆ ಸೇರುತ್ತಾರಾ ಅಥವಾ ಆಡಿದ ಮಾತು ಉಳಿಸಿಕೊಳ್ಳುತ್ತಾರಾ ಕಾದು ನೋಡೋಣ.

Entertainment Tags:Actor Harshika, Harshika, Harshika Poonaccha

Post navigation

Previous Post: ನಾಗ ಚೈತನ್ಯ & ಸಮಂತಾ ಡಿ-ವೋ-ರ್ಸ್ ಪಡೆಯೋಕೆ ನಿಜವಾದ ಕಾರಣವೇನು ಎಂಬ ವಿಚಾರ ರಿವೀಲ್ ಮಾಡಿದ ಖ್ಯಾತ ನಿರ್ದೇಶಕ. ಈ ವಿಚಾರ ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತಿರಾ.
Next Post: ನಮ್ಮವ್ರು ಬೇರೆ ಕಡೆ ಹೋದ್ರೆ ತಮಿಳು, ತೆಲಗು, ಹಿಂದಿ, ಮಾತಾಡ್ತೀರ ಆದ್ರೆ ಬೇರೆವ್ರು ಇಲ್ಲಿಗೆ ಬಂದ್ರೆ ಕನ್ನಡ ಯಾಕೆ ಮಾತಡಲ್ಲ ಅಂತ ಪ್ರಶ್ನೆ ಕೇಳಿದ್ಕೆ ಉಪ್ಪಿ ಕೊಟ್ಟ ಖಡಕ್ ಉತ್ತರ ಏನ್ ಗೊತ್ತ.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme