Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಗಟ್ಟಿಮೇಳ ಧಾರಾವಾಹಿ ನಿಲ್ಲಿಸಲು ಅಸಲಿ‌ಕಾರಣ ಬಿಚ್ಚಿಟ್ಟ ನಟ ರಕ್ಷ್.!

Posted on January 11, 2024 By Admin No Comments on ಗಟ್ಟಿಮೇಳ ಧಾರಾವಾಹಿ ನಿಲ್ಲಿಸಲು ಅಸಲಿ‌ಕಾರಣ ಬಿಚ್ಚಿಟ್ಟ ನಟ ರಕ್ಷ್.!

 

ನಟ ರಕ್ಷ್ (Raksh) ತಮ್ಮ ರಕ್ಷ್ ಎನ್ನುವ ಹೆಸರಿಗಿಂತ ಪುಟ್ಟಗೌರಿ ಮದುವೆಯ (Putta Gowri Maduve) ಮಹೇಶನಾಗಿ, ಗಟ್ಟಿಮೇಳ ಧಾರಾವಾಹಿಯ (Gattimela) ವೇದಾಂತ್ ಆಗಿ ಕನ್ನಡದ ಜನತೆಗೆ ಚಿರಪರಿಚಿತರು. ಈಗ ಸೀರಿಯಲ್ ನಿಂದ ಗ್ಲೋಬಲ್ ಮಟ್ಟಕ್ಕೆ ಬೆಳೆಯುತ್ತಿರುವ ಇವರು ತಮ್ಮ ಚೊಚ್ಚಲ ಚಿತ್ರದ ನಿರ್ಮಾಪಕನಾಗಿ, ನಾಯಕನಟನಾಗಿ ಬರ್ಮಾ ಸಿನಿಮಾದ (Barma) ಮೂಲಕ ಹೊರ ಹೊಮ್ಮತ್ತಿದ್ದರೆ.

ಪಾನ್ ಇಂಡಿಯಾ ಸಿನಿಮಾವಾಗಿ (Pan India Movie) ತಯಾರಾಗುತ್ತಿರುವ ಈ ಚಿತ್ರಕ್ಕೆ ಕನ್ನಡದ ಸ್ಟಾರ್ ಡೈರೆಕ್ಟರ್ ಚೇತನ್ (Dorector Chethan) ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಫಸ್ಟ್ ಲುಕ್ ನಿಂದಲೇ ಬಹಳ ಕುತೂಹಲ ಹುಟ್ಟಿಸುತ್ತಿದ್ದು ತಮ್ಮ ಲವರ್ ಬಾಯ್ ಇಮೇಜ್ ಬಿಟ್ಟು ಹೊಸದೊಂದು ಗೆಟಪ್ ನಲ್ಲಿ ರಕ್ಷ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೇ ಸಮಯದಲ್ಲಿ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಂಬರ್ ಒನ್ ಸೀರಿಯಲ್ ರಕ್ಷಾ ಅವರು ವೇದಂತ್ ಆಗಿ ಕಾಣಿಸಿಕೊಂಡಿದ್ದ ಗಟ್ಟಿಮೇಳ ಧಾರಾವಾಹಿ ಕೂಡ ಅಂತ್ಯವಾಗುತ್ತಿದೆ (top serial end). ಸಿನಿಮಾ ಗಾಗಿ ಹೀರೋ ಸೀರಿಯಲ್ ನಿಂತು ಹೋಯ್ತಾ ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ.

ಯಶ್ ಕಿರಾತಕ-2 ಸಿನಿಮಾ ನಿಂತಿದ್ದಕ್ಕೆ, ಅಸಲೀ ಕಾರಣ ತಿಳಿಸಿದ ನಿರ್ದೇಶಕರು.!

ನಾನು ಕಿರುತೆರೆ ಲೋಕದಿಂದಲೇ ಬಂದವನು. ಸಿನಿಮಾ ಮಾಡಬೇಕು ಬೆಳೆಯಬೇಕು ಎನ್ನುವುದು ಪ್ರತಿಯೊಬ್ಬರಿಗೂ ಇರುವ ಆಸೆ. ನನ್ನ ಎರಡು ಸೀರಿಯಲ್ ಗಳನ್ನು ಕೂಡ ಜನರು ಬಹಳ ಮೆಚ್ಚಿಕೊಂಡರು, ನನಗೆ ಬಹಳ ಪ್ರೀತಿ ಕೊಟ್ಟರು. ಇಂದು ನನ್ನನ್ನು ಜನ ಗುರುತಿಸುತ್ತಿರುವುದೇ ಆ ಸೀರಿಯಲ್ ಗಳಿಂದ.

ಈಗ ಗಟ್ಟಿಮೇಳ ಸೀರಿಯಲ್ ಬಹಳ ಚೆನ್ನಾಗಿ ನಡೆಯುತ್ತಿತ್ತು ಆದರೆ ಬರ್ಮಾ ಸಿನಿಮಾದ ಲುಕ್ ಬೇರೆ ರೀತಿ ಇದೆ ಅದಕ್ಕೆ ನನ್ನ ಗೆಟಪ್ ಚೇಂಜ್ ಮಾಡುವ ಅವಶ್ಯಕತೆ ಇತ್ತು. ಆದರೆ ನಾನು ಚಾನಲ್ ಗೆ ಹೇಳಿದಾದೆ, ಹಿಂದೊಮ್ಮೆ ನನ್ನ ಪ್ಲಾನ್ ಗಳ ಬಗ್ಗೆ ಮಾತನಾಡಿದ್ದೆ. ನಾನು ಮತ್ತೆ ಹೋಗಿ ಅವರ ಬಳಿ ಕೇಳಿಕೊಂಡಾಗ ಚಾನಲ್ ಹೆಟ್ ಅನುಮತಿ ಕೊಟ್ಟರು.

ನೀನು ಏನೋ ಮಾಡಬೇಕು ಎಂದು ಹೊರಟಿದ್ದೀಯ ಹೋಗು ಒಳ್ಳೆದಾಗಲಿ ಎಂದರು, ನಾನು ಇಲ್ಲದೆ ಕೂಡ ನಾಲ್ಕು ತಿಂಗಳು ಸೀರಿಯಲ್ ಮುಂದುವರಿಸುವ ಪ್ರಯತ್ನ ಕೂಡ ಆಯ್ತು. ಆದರೆ ಈಗ ಸೀರಿಯಲ್ ಮುಗಿಯಲೇ ಬೇಕು. ಇಷ್ಟು ದಿನ ನಮ್ಮನ್ನು ಪ್ರೀತಿಯಿಂದಾಗಿ ಬೆಳೆಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ, ಆದಷ್ಟು ಬೇಗ ಸಿನಿಮಾ ಮೂಲಕ ನಿಮ್ಮ ಮುಂದೆ ಬರುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಅಪ್ಪು ನಟಿಸಿಬೇಕಿದ್ದ ಸಿನಿಮಾದಲ್ಲಿ ಬಣ್ಣ ಹಚ್ಚಿದ ರಾಘವೇಂದ್ರ ರಾಜ್‌ಕುಮಾರ್.!

ಬರ್ಮ ಸಿನಿಮಾ ರಕ್ಷ್ ಅವರ ಬಹಳ ವರ್ಷಗಳ ಹಿಂದಿನ ಕನಸು ಎಂದೇ ಹೇಳಬಹುದು, ತುಂಬಾ ಆಸಕ್ತಿ ವಹಿಸಿ ಕಳೆದ ಆರು ತಿಂಗಳಿಂದ ಹಗಲಿರಲು ಸಿನಿಮಾದ ಕಾಸ್ಚ್ಯೂಮ್ ನಿಂದ ಹಿಡಿದು ಪ್ರತಿಯೊಂದರ ಬಗ್ಗೆ ಕೂಡ ಬಹಳ ಸೂಕ್ಷ್ಮತೆಯಿಂದ ಚೂಸ್ ಮಾಡಿ ಕೆಲಸ ಮಾಡುತ್ತಿದ್ದೆ ನಿರ್ದೇಶಕ ಚೇತನ್ ಹಾಗೂ ರಕ್ಷಾ, ಇದರ ರಿಸಲ್ಟ್ ತೆರೆ ಮೇಲೆ ಕಾಣಲಿದ್ದೀರಿ ಎನ್ನುವ ಭರವಸೆ ಕೂಡ ನೀಡುತ್ತಿದ್ದಾರೆ ಅವರು.

ಆರಂಭದಲ್ಲಿ ಸ್ಟಾರ್ ಡೈರೆಕ್ಟರ್ ಆಗಿರುವ ನೀವು ಚಿಕ್ಕ ಹುಡುಗನಿಗೆ ಯಾಕೆ ಬೆಳೆಸುತ್ತಿದ್ದೀರಾ ಎಂದು ಹಲವಾರು ಮಾತು ಕೇಳಿ ಬಂದಿತ್ತಂತೆ. ಆದರೆ ಚೇತನ್ ಅವರಿಗೆ ನನ್ನ ಮೇಲಿರುವ ನಂಬಿಕೆ, ಇಬ್ಬರಿಗೂ ಸಿನಿಮಾ ಮೇಲೆ ಇರುವ ಪ್ರೀತಿ ಕನೆಕ್ಟ್ ಆಗಿದೆ ಹಾಗಾಗಿ ಸಿನಿಮಾ ಬರುತ್ತಿದೆ ಎನ್ನುತ್ತಾರೆ ರಕ್ಷ್.

ಆದರೂ ಜನರು ರಕ್ಷ್ ಅವರನ್ನು ವೇದಾಂತ ಆಗಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಮತ್ತು ವೇದಾಂತ್ ಹಾಗೂ ಅಮೂಲ್ಯ ಅವರ ಕೋಳಿ ಜಗಳದ ಈ ಗಟ್ಟಿಮೇಳ ಸೀರಿಯಲ್ ನ್ನು ಕೂಡ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನೀವು ಅವರ ಅಭಿಮಾನಿಯಾಗಿದ್ದರೆ ಅವರ ಯಾವ ಸೀರಿಯಲ್ ಇಷ್ಟ ಕಾಮೆಂಟ್ ಮಾಡಿ ತಿಳಿಸಿ.

 

cinema news

Post navigation

Previous Post: ಯಶ್ ಕಿರಾತಕ-2 ಸಿನಿಮಾ ನಿಂತಿದ್ದಕ್ಕೆ, ಅಸಲೀ ಕಾರಣ ತಿಳಿಸಿದ ನಿರ್ದೇಶಕರು.!
Next Post: ಅಪ್ಪು ಸಾ-ಯುವ 4 ದಿನದ ಹಿಂದೆ ನನ್ನ ಜೋತೆ ಈ ವಿಷ್ಯ ಚರ್ಚೆ ಮಾಡಿದ್ರು.! ಸಿಕ್ರೇಟ್ ಬಿಚ್ಚಿಟ್ಟ ರಂಗಾಯಣ ರಘು.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme