Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ತೆರಿಗೆ ಸಂಗ್ರಹ ಹೆಚ್ಚಿಸಲು ಆಸ್ತಿಗಳ ಮರು ಸಮೀಕ್ಷೆ, ನಾಗರಿಕರ ಅನುಕೂಲಕ್ಕಾಗಿ “ನನ್ನ ಸ್ವತ್ತು ಕಾರ್ಯಕ್ರಮ” ಜಾರಿ – ಡಿ.ಕೆ ಶಿವಕುಮಾರ್

Posted on October 11, 2023 By Admin No Comments on ತೆರಿಗೆ ಸಂಗ್ರಹ ಹೆಚ್ಚಿಸಲು ಆಸ್ತಿಗಳ ಮರು ಸಮೀಕ್ಷೆ, ನಾಗರಿಕರ ಅನುಕೂಲಕ್ಕಾಗಿ “ನನ್ನ ಸ್ವತ್ತು ಕಾರ್ಯಕ್ರಮ” ಜಾರಿ – ಡಿ.ಕೆ ಶಿವಕುಮಾರ್

 

ಕಾಂಗ್ರೆಸ್ ಸರ್ಕಾರವು ಬೆಂಗಳೂರನ್ನು (Bangalore) ಬಹಳಷ್ಟು ಕೇಂದ್ರೀಕರಿಸಿದೆ. ಕರ್ನಾಟಕದ ಆದಾಯದ ಬಹುದೊಡ್ಡ ಮೂಲ ಬೆಂಗಳೂರೇ ಆಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹಾಗಾಗಿ ಬ್ರಾಂಡ್ ಬೆಂಗಳೂರು ಮತ್ತು ಬೆಟರ್ ಬೆಂಗಳೂರನ್ನಾಗಿಸಲು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಇದರ ಸಂಬಂಧಿತ ಸಮ್ಮೇಳನ ಕೂಡ ನಡೆದಿದ್ದು ಸೋಮವಾರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಾದ ಬಳಿಕ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ (DCM D.K Shivakumar) ಅವರು ಸುದ್ದಿಗೋಷ್ಠಿ ನಡೆಸಿ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

BJP ಗೆ ಬರುವವರೆಗೂ ನಾನು ಸೋತಿರಲಿಲ್ಲ, ಪಕ್ಷಕ್ಕೆ ಬಂದ ಮೇಲೆ ನಾಲ್ಕೈದು ಬಾರಿ ಸೋಲು ಕಂಡೆ ಬೇಸರ ವ್ಯಕ್ತ ಪಡಿಸಿದ – ವಿ.ಸೋಮಣ್ಣ

ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ರಚಿಸಲಾದ ಸಮಿತಿಗಳು, ನನ್ನ ಸ್ವತ್ತು ಯೋಜನೆ ಮತ್ತು ತೆರಿಗೆ ಸಂಗ್ರಹ ಹೆಚ್ಚಳದ ಕುರಿತು ಕೂಡ ಮಾತನಾಡಿದ್ದಾರೆ. ನಮ್ಮ ಸರಕಾರಕ್ಕೆ ಆಸ್ತಿ ತೆರಿಗೆ ದರ (Property tax) ಹೆಚ್ಚಿಸುವ ಯಾವುದೇ ಉದ್ದೇಶವಿಲ್ಲ ಆದರೆ, ಬೆಂಗಳೂರಿನಲ್ಲಿ 50% ಜನ ಮಾತ್ರ ತೆರಿಗೆ ಪಾವತಿಸುತ್ತಿದ್ದಾರೆ. ಕೆಲವೆಡೆ ಆಸ್ತಿ ಮಾಲೀಕರು ತಪ್ಪು ಮಾಹಿತಿ ನೀಡಿದ್ದರೆ, ಇನ್ನು ಕೆಲವರು ತೆರಿಗೆಯನ್ನು ಕಟ್ಟುವುದಿಲ್ಲ. ಹೀಗಾಗಿ ಆಸ್ತಿ ಮರು ಸಮೀಕ್ಷೆ ಅನಿವಾರ್ಯವಾಗಿದೆ.

ಸಮೀಕ್ಷೆ ವರದಿ ಬಳಿಕ ಸಮರ್ಪಕ ತೆರಿಗೆ ವಸೂಲಾತಿರಿದಲ್ಲಿ ಪ್ರಸ್ತುತದ ತೆರಿಗೆ ಪ್ರಮಾಣದಲ್ಲಿ ಎರಡು-ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಶಿವಕುಮಾರ್‌ ತಿಳಿಸಿದರು. ಬೆಂಗಳೂರಿನ ವಿಚಾರದಲ್ಲಿ ತೆರಿಗೆ ಸಂಗ್ರಹ ಕಸ ನಿರ್ವಹಣೆ ಹಾಗೂ ಟ್ರಾಫಿಕ್ ನಿಯಂತ್ರಣ ನನ್ನ ಆದ್ಯತೆ ಆಗಿದೆ ಎಂದರು.

ಯಾಕಿನ್ನು ನೀವು ಮದುವೆಯಾಗಿಲ್ಲ ಎಂದು ವಿದ್ಯಾರ್ಥಿನಿ ಪ್ರಶ್ನೆ ಕೇಳಿದಕ್ಕೆ ರಾಹುಲ್ ಗಾಂಧಿ ಕೊಟ್ಟ ಉತ್ತರವಿದು.!

ಬ್ರ್ಯಾಂಡ್‌ ಬೆಂಗಳೂರು (Brand Bangalore) ಯೋಜನೆಯಡಿ ಬೆಂಗಳೂರಿಗರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನನ್ನ ಸ್ವತ್ತು ಎಂಬ ಕಾರ್ಯಕ್ರಮ ಅನುಷ್ಠಾನಗೊಳಿಸುವ ಕುರಿತು ಸ್ವಯಂಚಾಲಿತ ನಕ್ಷೆ ಅನುಮೋದನೆಗೆ ಚಾಲನೆ ನೀಡಲು ಚರ್ಚೆಯಾಗಿದೆ. ಇದರಿಂದ ನಾಗರಿಕರು ಆಸ್ತಿ ವಿಚಾರವಾಗಿ ಪ್ರತಿಯೊಂದಕ್ಕೂ ಸರಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ ಎಂದು ತಿಳಿಸಿದರು.

ಇದು ಸಾಧ್ಯವಾದರೆ ನಾಗರಿಕರು ಮನೆ ನಿರ್ಮಾಣಕ್ಕೆ ಕಟ್ಟಡ ನಕ್ಷೆ ಪಡೆಯಲು BBMP ಕಚೇರಿಗೆ ಅಲೆಯಬೇಕಾಗಿಲ್ಲ. ಯೋಜನೆಯಲ್ಲಿ ಪಾಲಿಕೆಯಿಂದ ಪರವಾನಗಿ ಪಡೆದ ಆರ್ಕಿಟೆಕ್ಟ್‌ನಿಂದ ನಕ್ಷೆ ಅಪ್‌ಲೋಡ್‌ ಮಾಡಿಸಿದರೆ ಎಲ್ಲವೂ ಆನ್‌ಲೈನ್‌ನಲ್ಲೇ ಪರಿಶೀಲನೆಗೊಂಡು ಅನುಮೋದನೆಯಾಗುತ್ತದೆ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.

ಶಕ್ತಿ ಯೋಜನೆ ಎಫೆಕ್ಟ್ 300ಕ್ಕೂ ಹೆಚ್ಚು ಕಂಡಕ್ಟರ್ ಗಳು ಕೆಲಸ ಕಳೆದುಕೊಂಡಿದ್ದಾರೆ – ನಾರಿಮಣಿಯರೆ ದಯೆ ತೋರಿ ಇವರ ಮೇಲೆ.!

ನಗರದಲ್ಲಿರುವ 50×80 ಅಡಿಗಳವರೆಗಿನ ನಿವೇಶನಗಳಿಗೆ ಮಾತ್ರ ಈ ಯೋಜನೆಯಲ್ಲಿ ಅನುಮೋದನೆ ನೀಡಲಾಗುತ್ತದೆ ಎಂದರು. ಜನರ ಸಮಸ್ಯೆಗಳನ್ನು ಆಲಿಸಲು ಮತ್ತು ಅದಕ್ಕೆ ಪರಿಹರಿಸಲು ಸಹಾಯಹಸ್ತ ಎಂಬ ಹೆಸರಿನಲ್ಲಿ ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನಾಗರಿಕರು ಸಮಸ್ಯೆಗಳಿಗೆ ವೆಬ್‌ಸೈಟ್ ಮೂಲಕ ನೇರವಾಗಿ ಪರಿಹಾರ ಪಡೆಯಬಹುದು.

ಉದ್ಯಾನವನಗಳು, ಆಟದ ಮೈದಾನಗಳ ನಿರ್ವಹಣೆಗೆ ಸ್ಥಳೀಯ ನಾಗರಿಕರ ರಾಜಕೀಯೇತರ ಸಾರ್ವಜನಿಕ ಸಮಿತಿ ರಚಿಸಿ ಒಬ್ಬ ನೋಡಲ್‌ ಅಧಿಕಾರಿಯನ್ನು ವಿಧಿಸಲಾಗುತ್ತದೆ. CSR ನಿಧಿಯಿಂದ ಅಭಿವೃದ್ಧಿ ಕೆಲಸಗಳನ್ನೂ ಈ ಸಮಿತಿ ಕೈಗೊಳ್ಳಬಹುದು ಎಂದು ತಿಳಿಸಿದರು ಒಟ್ಟಾರೆಯಾಗಿ ಎಲ್ಲದರ ಕುರಿತು ಶೀಘ್ರವೇ ಸಮಗ್ರ ವರದಿ ಸಲ್ಲಿಸಲಾಗುವುದು.

ಕಷ್ಟದಲ್ಲಿದ್ದ ಕುಟುಂಬದ ಸಹಾಯಕ್ಕೆ ಬಂದ ಅಂಚೆ ಅ.ಪಘಾ.ತ ವಿಮೆ, ಕೇವಲ 399 ರೂಪಾಯಿ ಕಟ್ಟಿದ್ದಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಿದೆ…!

ಬ್ರಾಂಡ್ ಬೆಂಗಳೂರು ಮತ್ತು ಬೆಟರ್ ಬೆಂಗಳೂರಿಗೆ ನೀಲನಕ್ಷೆಯನ್ನು ಸಹ ಸಿದ್ಧಪಡಿಸಲಾಗುವುದು ಎಂದರು. ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿ ರಚಿಸಲಾದ ಸಾರಿಗೆ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಛ ಬೆಂಗಳೂರು, ಜನಸ್ನೇಹಿ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್ ಬೆಂಗಳೂರು, ವಾಟರ್ ಸೇಫ್ ಬೆಂಗಳೂರು ಮತ್ತು ಶೈಕ್ಷಣಿಕ ಬೆಂಗಳೂರು ಎಂಟು ಸಮಿತಿಗಳು ರಚಿತವಾಗಿವೆ, ಇವೆಲ್ಲವೂ ತಮ್ಮ ಸಂಶೋಧನೆಗಳನ್ನು ಉಪಮುಖ್ಯಮಂತ್ರಿಗಳಿಗೆ ಸಲ್ಲಿಸಿವೆ.

Viral News

Post navigation

Previous Post: BJP ಗೆ ಬರುವವರೆಗೂ ನಾನು ಸೋತಿರಲಿಲ್ಲ, ಪಕ್ಷಕ್ಕೆ ಬಂದ ಮೇಲೆ ನಾಲ್ಕೈದು ಬಾರಿ ಸೋಲು ಕಂಡೆ ಬೇಸರ ವ್ಯಕ್ತ ಪಡಿಸಿದ – ವಿ.ಸೋಮಣ್ಣ
Next Post: ಮೂರು ತಿಂಗಳಿಗೆ ಗೃಹಲಕ್ಷ್ಮಿ ಮುಕ್ತಾಯ ಮಾಜಿ CM – ಬಸವರಾಜ ಬೊಮ್ಮಾಯಿ

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme