Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

BJP 25 ಸಂಸದರು ಕೂಡ ದಂಡಪಿಂಡಗಳು ಎಂದು ಆ.ಕ್ರೋ.ಶ ಹೊರ ಹಾಕಿದ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ವಿ ಶ್ರೀನಿವಾಸ್.!

Posted on September 25, 2023 By Admin No Comments on BJP 25 ಸಂಸದರು ಕೂಡ ದಂಡಪಿಂಡಗಳು ಎಂದು ಆ.ಕ್ರೋ.ಶ ಹೊರ ಹಾಕಿದ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ವಿ ಶ್ರೀನಿವಾಸ್.!

 

ಕಾವೇರಿ ವಿವಾದದ (Cauvery) ವಿಚಾರದಲ್ಲಿ BJP ನಾಯಕರ ನಡೆಯನ್ನು ಖಂಡಿಸಿದ ಕಾಂಗ್ರೆಸ್ ಘಟಕದ ಅಧ್ಯಕ್ಷ ಪಿ.ವಿ ಶ್ರೀನಿವಾಸ್ (President of Indian youth congress P.V Shreenivas) ಅವರು ನವದೆಹಲಿಯಲ್ಲಿ ಸುದ್ದಿಗಾರರೊಡನೆ ಮಾತನಾಡುವಾಗ BJP ಯ 25 ಸಂಸದರು ಕೂಡ ದಂಡಪಿಂಡಗಳು ಎಂದು ಹೇಳಿ ಆ’ಕ್ರೋ’ಶ ಹೊರ ಹಾಕಿದ್ದಾರೆ.

ಕನ್ನಡ ನೆಲ-ಜಲ, ಭಾಷೆ-ಸಂಸ್ಕೃತಿ ವಿಚಾರದಲ್ಲಿ ರಾಜ್ಯದ ಜನರಿಗೆ BJP ನಿರಂತರವಾಗಿ ದ್ರೋಹವೆಸಗಿದೆ. ಆದರೆ ಕಾವೇರಿ ವಿಚಾರದಲ್ಲಿ ಮಾತ್ರ ಮೊಸಳೆ ಕಣ್ಣೀರು ಹಾಕುತ್ತಾ ಜನತೆ ಎದುರು ನಾಟಕ ಮಾಡುತ್ತಿದೆ ಎಂದು ಚುಚ್ಚಿದ್ದಾರೆ. ರಾಜ್ಯದಲ್ಲಿ ಸ್ಪರ್ಧಿಸಿ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವ ಸ್ಥಾನದಲ್ಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ರಾಜ್ಯದ ಜನತೆಗೆ ಕಾವೇರಿ ವಿಚಾರದಲ್ಲಿ ಅನ್ಯಾಯ ಆಗದಂತೆ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ ನಡೆದ ಸರ್ವಪಕ್ಷದ ಸಂಸದರು ಮತ್ತು ಸದಸ್ಯರ ಸಭೆಗೆ ನೆಪಕ್ಕಾದರೂ ಭಾಗವಹಿಸಿಲ್ಲ ಎಂದು ಕಿಡಿ ಕಾರಿದ್ದಾರೆ.

ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್.!

ಇದೇ ರೀತಿ ಕೇಂದ್ರವು ರಾಜ್ಯದ ವಿಷಯದಲ್ಲಿ ಸಾಕಷ್ಟು ಅನ್ಯಾಯ ಮಾಡಿಕೊಂಡೇ ಬರುತ್ತಿದೆ. ಮಂಡ್ಯದಲ್ಲಿ ನಡೆದ ಕಾವೇರಿ ಕುರಿತ ಹೋರಾಟದಲ್ಲಿ BJP ಕಾರ್ಯಕರ್ತರೊಬ್ಬರು ಬಾಯಿಗೆ ಮಣ್ಣು ಹಾಕಿಕೊಂಡು ಪ್ರತಿಭಟನೆಗೆ ಇಳಿದಿದ್ದರು ಇದು ನೇರವಾಗಿ ಕೇಂದ್ರ ಸರ್ಕಾರ ರಾಜ್ಯದ ವಿಷಯದಲ್ಲಿ ಕಳೆದ 9 ವರ್ಷಗಳಿಂದಲೂ ಕರ್ನಾಟಕದ ಜನರ ಕಣ್ಣಿಗೆ ಮಣ್ಣು ಎರಚುತ್ತಾ, ಬಾಯಿಗೆ ಮಣ್ಣು ಹಾಕಿಕೊಂಡು ಬಂದಿರುವುದನ್ನು ಸಾಂಕೇತಿಕವಾಗಿ ತೋರಿಸಿದ ರೀತಿ ಇದೆ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯಕ್ಕೆ ಬರಬೇಕಾದ GST ಪಾಲಿನ ಹಣ ಸರಿಯಾಗಿ ಬರದೆ ಪದೇಪದೇ ಕನ್ನಡ ನಾಡಿನ ಜನರಿಗೆ ಅನ್ಯಾಯ ಆಗುತ್ತಿದೆ, 15ನೇ ಆರ್ಥಿಕ ಹಣಕಾಸಿನ ಆಯೋಗದಲ್ಲೂ ಕೂಡ ಇದು ಮುಂದುವರೆದಿದೆ. ಆದರೆ ಈ ರೀತಿಯ ಅನ್ಯಾಯಗಳು ನಡೆದಾಗ ರಾಜ್ಯವನ್ನು ಪ್ರತಿನಿಧಿಸುವ 25 ಮಂದಿ BJP ಸಂಸದರು ಬಾಯಿ ಬಿಡುವುದಿಲ್ಲ. ಹಿಂದಿ ಭಾಷೆ ಹೇರಿಕೆ ಪ್ರಯತ್ನ ಪಟ್ಟಾಗಲು, ಕನ್ನಡಿಗರ ಪಾಲಿನ ಉದ್ಯೋಗಗಳನ್ನು ಕಿತ್ತುಕೊಂಡಾಗಲೂ ಇವರ್ಯಾರು ಧ್ವನಿ ಎತ್ತಲಿಲ್ಲ.

ಮಾಕಳಿ ಬೇರು ಇದ್ರೆ ಸಾಕು ನಿಮ್ಮ ಎಲ್ಲ ಕೆಲಸಗಳು 100% ಸಕ್ಸಸ್ ಆಗುತ್ತೆ.!

ಹೀಗೆ ಕನ್ನಡ ಭಾಷೆಯ ನೆಲದ ನೀರಿನ ವಿಚಾರ ಬಂದಾಗ ಸುಮ್ಮನಿದ್ದವರು ಈಗ ಪ್ರತಿಭಟನೆಗೆ ಇಳಿದು ಮಾತನಾಡುತ್ತಿರುವುದು ಅವರ ಆತ್ಮ ವಂಚನೆಯ ವಿಷಯವಾಗಿದೆ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ನಮ್ಮ ಸರ್ಕಾರವು ಎಂದಿಗೂ ಕೂಡ ನಾಡಿನ ರೈತರ ಪರವಾಗಿಯೇ ಇದೆ, ರೈತರ ಹಿತ ಕಾಯುವ ಸಲುವಾಗಿಯೇ ಸುಪ್ರೀಂ ಕೋರ್ಟ್ ಹಾಗೂ ಪ್ರಾಧಿಕಾರಕ್ಕೆ ಪರಿಸ್ಥಿತಿಯನ್ನು ಅರ್ಥ ಮಾಡಿಸುವ ಮನ ಓಲೈಸುವ ಕೆಲಸ ಮಾಡುತ್ತಿದೆ.

ರಾಜ್ಯದ ಮೇಲೆ ತಪ್ಪು ಅಭಿಪ್ರಾಯ ಬರಬಾರದು ಎಂದು ಸುಪ್ರೀಂ ಆಜ್ಞೆಯನ್ನು ಕೂಡ ಪಾಲಿಸುತ್ತಿದೆ ಇಂತಹ ಸಮಯದಲ್ಲಿ ಪ್ರತಿಪಕ್ಷಗಳು ಸರ್ಕಾರದ ಜೊತೆ ನಿಲ್ಲಬೇಕಿತ್ತು. ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕೂಡ ಕಾವೇರಿ ವಿಚಾರವನ್ನು ಇಟ್ಟುಕೊಂಡು BJP ಪಕ್ಷ ರಾಜಕೀಯಕ್ಕೆ ಇಳಿದಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ರಾಜ್ಯಕ್ಕೆ ಬರ ಬಂದಾಗ, ಅತಿವೃಷ್ಠಿ-ಪ್ರವಾಹದಿಂದ ಸಂಕಷ್ಟ ಎದುರಾದಾಗ ಈ ಸಂಸದರಾಗಲಿ, ರಾಜ್ಯದವರೇ ಆದ ಕೇಂದ್ರ ಸಚಿವರಾಗಲೀ ಕರ್ನಾಟಕ ರಾಜ್ಯದ ನೆರವಿಗೆ ಎಂದೂ ಬರಲೇ ಇಲ್ಲ.

ಗೃಹಲಕ್ಷ್ಮಿ ಯೋಜನೆ ಎರಡು ಕಂತಿನ ಹಣ ಬಿಡುಗಡೆ, ಯಾವ ದಿನ ಹಣ ಸಿಗುತ್ತದೆ ಗೊತ್ತಾ.?

ನೆಪಕ್ಕೂ ಕೂಡ ಪ್ರಧಾನಿಗಳ ಬಳಿ ನಮ್ಮ ಪಾಲಿನ ಹಕ್ಕನ್ನು ಕೇಳುವ ಧೈರ್ಯವನ್ನು ಮಾಡಲಿಲ್ಲ. ಪಾರ್ಲಿಮೆಂಟ್ ಚರ್ಚೆಗಳಲ್ಲೂ ಗಟ್ಟಿಯಾಗಿ ಕೇಳಿರುವ ಉದಾಹರಣೆಗಳಿಲ್ಲ. ಈ ರೀತಿ ನಿರಂತರವಾಗಿ ಜ’ನ’ದ್ರೋ’ಹ, ಹೊ’ಣೆ’ಗೇ’ಡಿ’ತನವನ್ನು ಆಚರಿಸುತ್ತಾ ಬರುತ್ತಿರುವ BJP ಪಕ್ಷದ ಸಂಸದರು ಮತ್ತು ನಾಯಕರು ಲೋಕಸಭೆ ಚುನಾವಣೆ ಹತ್ತಿರ ಇರುವುದರಿಂದ ಕಾವೇರಿ ವಿಚಾರದಲ್ಲಿ ಮಾತ್ರ ಪ್ರತಿಭಟನೆಯ ಸೋಗು ಹಾಕುತ್ತಿದ್ದಾರೆ ಎಂದು ಖಂಡಿಸಿದ್ದಾರೆ.

Viral News

Post navigation

Previous Post: ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್.!
Next Post: ನಿಮ್ಮ ಮನೆಯಲ್ಲೂ ಪ್ರತಿದಿನ ಪ್ಯಾಕೆಟ್ ಹಾಲು ತರುತ್ತಿದ್ದೀರಾ.? ಆಗಿದ್ರೆ ಈ ವಿಷಯ ತಿಳಿದುಕೊಂಡಿರಲೇಬೇಕು.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme