ಕೇಂದ್ರ ಸರ್ಕಾರವು ರೈತರಿಗೆ ಉಪಯೋಗವಾಗುವಂತೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಈ ಎಲ್ಲ ಯೋಜನೆಗಳ ಲಾಭವನ್ನು ರಾಜ್ಯದ ಎಲ್ಲಾ ರೈತರು ಸಹ ಪಡೆದುಕೊಳ್ಳಬಹುದು ರೈತರ ಹಿತ ದೃಷ್ಟಿಯಿಂದ ಅವರ ಬೆಳೆಗಳು ಹಾನಿಯಾಗಬಾರದು ಹಾಗೆಯೇ ಬೆಳೆ ನಷ್ಟ ಉಂಟಾಗದೆ ರೈತರಿಗೆ ನಷ್ಟವಾಗುತ್ತದೆ ಎನ್ನುವಂತಹ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ರೂಪಿಸುತ್ತದೆ. ರೈತರು ಬೆಳೆದಂತಹ ಬೆಳೆ ಯಾವಾಗಲು ಲಾಭದಲ್ಲಿಯೇ ಇರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ ಕೆಲವೊಮ್ಮೆ ನಾನ ಕಾರಣಗಳಿಂದ ಹವಾಮಾನ ವೈಪರಿತ್ಯದಿಂದ ಅಥವಾ ಸರಿಯಾಗಿ ನೀರು ಸರಬರಾಜು ಆಗದೆ ಇರುವ ಕಾರಣದಿಂದ ಬೆಳೆಯು ನಷ್ಟವಾಗಬಹುದು ಅಂತಹ ಪರಿಸ್ಥಿತಿಯಲ್ಲಿ ರೈತರು ಕಂಗಲಾಗಿ ಕುಳಿತಿರುತ್ತಾರೆ.
ಹಾಗೆಯೇ ಕೃಷಿಗೆ ಬೇಕಾದಂತಹ ಉಪಕರಣಗಳ ಸರಿಯಾದ ಬಳಕೆ ಇಲ್ಲದೆ ಅವರ ಬೆಳೆ ಹಾನಿಗೆ ಒಳಗಾಗುತ್ತದೆ ಅಥವಾ ಬೆಳೆ ನಷ್ಟವಾಗುತ್ತದೆ ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರವು ಎಲ್ಲಾ ರೈತರಿಗೆ ಭರ್ಜರಿ ಸುದ್ದುಯನ್ನು ನೀಡಿದೆ. ಎಲ್ಲಾ ರೈತರಿಗೆ ಈಗ ಉಚಿತವಾಗಿ ಟಾರ್ಪಲಿನ್ ವಿತರಣೆ ಸೇರಿದಂತೆ ಕೃಷಿ ಯಂತ್ರೋಪಕರಣಗಳು ಖರೀದಿಸಲು ಸರ್ಕಾರದಿಂದ ಸಬ್ಸಿಡಿ ಸಹಾಯಧನ ದೊರಕಲಿದೆ ಟ್ರ್ಯಾಕ್ಟರ್ ಕೂಡ ಖರೀದಿಸಲು ಸರ್ಕಾರದಿಂದ ಸಹಾಯಧನ ಸಬ್ಸಿಡಿಯನ್ನು ಪಡೆಯಬಹುದು.
ರೈತರ ಬೆಳೆಗಳಿಗೆ ರಾಶಿ ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆಗಾಳಿ ಹಾಗೂ ಇತರೆ ಹವಾಮಾನ ವೈಪರಿತ್ರೆಗಳಿಂದ ಸಂರಕ್ಷಿಸಿ ಆಹಾರ ಧಾನ್ಯಗಳ ಮತ್ತು ಕೃಷಿ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲವಾಗಬೇಕು ಎಂದು ಕೃಷಿ ಇಲಾಖೆಯಿಂದ ಟಾರ್ಪಲಿನ್ ವಿತರಿಸಲಾಗುತ್ತಿದ್ದು ಅದಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರೈತರಿಗೆ ಟಾರ್ಪಲಿನ್ ಉಚಿತವಾಗಿ ಪಡೆಯಲು ಅರ್ಜಿ ಸಲ್ಲಿಸಿದ ರೈತರಿಗೆ ನೀಡಲಾಗುತ್ತದೆ. ಎರಡನೆಯದಾಗಿ ರೈತರಿಗೆ ಕೃಷಿ ಯಂತ್ರೋಪಕರಣಗಳು ಟ್ರ್ಯಾಕ್ಟರ್ ಪವರ್ ಟಿಲ್ಲರ್, ರೋಟರಿ ಟಿಲ್ಲರ್, ಎಂ ಪಿ ನೇಗಿಲು, ನೇಗಿಲು, ಡಿಸ್ಕ್ ಹಾರೋ ನೇಗಿಲು, ಕಬ್ಬಿಣ ಶವರ್ ಮತ್ತು ಲೆವೆಂಡರ್ ಬ್ಲೇಡ್ ಸೇರಿದಂತೆ ಕೆಜಿಬಿಲ್ ಹಾಗೂ ನಿರ್ಮಾಣ ಯಂತ್ರ ಸೇರಿದಂತೆ ಬತ್ತ ನಾಟಿ ಯಂತ್ರ ಹಲವು ಬಗೆಯ ಯಂತ್ರ ಖರೀದಿಸಲು ಸರ್ಕಾರದಿಂದ ಇದೀಗ ಸಬ್ಸಿಡಿ ಸಹಾಯಧನ ನೀಡಲಾಗುತ್ತಿದೆ.
ಮೂರನೆಯದಾಗಿ ಕರ್ನಾಟಕ ರಾಜ್ಯ ಸರ್ಕಾರದ ರೈತರ ಜಮೀನಿಗೆ ಬೇಕಾದ ಸ್ಪ್ರಿಂಕ್ಲರ್ ಹಾಗೂ ಪೈಪ್ಲೈನ್ ಗಳಿಗೆ ಶೇಕಡ 80ರಷ್ಟು ಸಬ್ಸಿಡಿ ಹಣ ಸಹಾಯಧನ ಒದಗಿಸಿಕೊಡಲಾಗುತ್ತಿದೆ ಎಲ್ಲಾ ಯೋಜನೆಗಳ ಲಾಭವನ್ನು ನಿಮ್ಮ ವಲಯದ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆಗೆ ಭೇಟಿ ನೀಡಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ರಾಜ್ಯದ ರೈತರ ಹಿತ ದೃಷ್ಟಿಯಿಂದ ಈ ಮೇಲ್ಕಂಡಂತಹ ಎಲ್ಲಾ ಯೋಜನೆಗಳನ್ನು ರಾಜ್ಯ ಸರ್ಕಾರವು ಜಾರಿಗೆ ತರುವಲ್ಲಿ ಮುಂದಾಗಿದೆ ಈ ಎಲ್ಲಾ ಯೋಜನೆಗಳ ಲಾಭವನ್ನು ಪ್ರತಿಯೊಬ್ಬ ರೈತರು ಸಹ ಪಡೆದುಕೊಂಡು ಬೆಳೆಗೆ ಸಂಬಂಧಿಸಿದಂತಹ ತೊಂದರೆಗಳನ್ನು ನಿವಾರಣೆ ಮಾಡಿಕೊಂಡರೆ ಉತ್ತಮವಾದ ಪಸಲು ರೈತರಿಗೆ ದೊರೆಯುತ್ತದೆ ರೈತರು ಉತ್ತಮವಾದಂತಹ ಫಲನ್ನು ಬೆಳೆದರೆ ರಾಜ್ಯದ ಏಳಿಗೆ ಅಲ್ಲದೆ ನಮ್ಮ ರಾಷ್ಟ್ರದ ಏಳಿಗೆಗು ಇದು ನೆರವಾಗುತ್ತದೆ.
ರೈತರು ನಮ್ಮ ದೇಶದ ಬೆನ್ನೆಲುಬು ರೈತರು ಇಲ್ಲದೆ ಇದ್ದರೆ ನಮ್ಮ ಪರಿಸ್ಥಿತಿಯನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ ಹೀಗಿರುವಾಗ ನಮ್ಮ ರೈತರಿಗೆ ಪ್ರತಿಯೊಬ್ಬರೂ ಬೆಂಬಲವನ್ನು ಸೂಚಿಸಬೇಕು ಎಲ್ಲ ರೈತರು ಬೆಳೆದಂತಹ ಬೆಳೆಗಳಿಗೆ ಉತ್ತಮ ಬೆಲೆಯನ್ನು ಕೊಟ್ಟು ಮಧ್ಯವರ್ತಿಗಳಿಂದ ಅವರನ್ನು ರಕ್ಷಿಸಬೇಕು ಹಲವು ಬಾರಿ ಹೇಗಾಗುತ್ತದೆ ಎಂದರೆ ರೈತರು ಬೆಳೆದಂತಹ ಬೆಳೆಗಳಿಗೆ ಉತ್ತಮವಾದಂತಹ ಬೆಲೆ ಸಿಗುವುದಿಲ್ಲ ಕಾರಣ ಮಧ್ಯವರ್ತಿಗಳು ಮಧ್ಯವರ್ತಿಗಳ ಕಾರಣದಿಂದಾಗಿ ರೈತರಿಗೆ ಒಳ್ಳೆಯ ಲಾಭ ಸಿಗುವುದಿಲ್ಲ ಇದರಿಂದ ಸಾಕಷ್ಟು ಜನ ರೈತರು ಕಂಗಲಾಗಿ ಹೋಗಿರುತ್ತಾರೆ.
ಆದ್ದರಿಂದ ಸರ್ಕಾರವು ಈ ಎಲ್ಲ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ರೈತರಿಗೆ ಅದನ್ನುಕೂಲವಾಗುವಂತಹ ಯೋಜನೆಗಳನ್ನು ರೂಪಿಸುತ್ತಿದೆ ಹಾಗೆಯೇ ಮೇಲೆ ತಿಳಿಸಿದಂತಹ ಎಲ್ಲ ಉಪಕರಣಗಳ ಮೇಲೆ ಸಬ್ಸಿಡಿ ದರದಲ್ಲಿ ರೈತರಿಗೆ ನೆರವು ನೀಡಲು ಮುಂದಾಗಿದೆ ಆದ್ದರಿಂದ ಪ್ರತಿಯೊಬ್ಬ ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಂಡರೆ ಮುಂದಿನ ದಿನಗಳಲ್ಲಿ ರೈತರಿಗೆ ಉತ್ತಮವಾದಂತಹ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.