Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ನನ್ನಿಂದಾಗಿ ನನ್ ಹೆಂಡ್ತಿ ಮಗನ ಮೇಲೆ ಕಲ್ಲು ತೂರಾಟ ಆಯ್ತು.! ಬೇಸರ ವ್ಯಕ್ತ ಪಡಿಸಿದ ನಟ ವಿನಯ್ ಗೌಡ.!

Posted on February 3, 2024 By Admin No Comments on ನನ್ನಿಂದಾಗಿ ನನ್ ಹೆಂಡ್ತಿ ಮಗನ ಮೇಲೆ ಕಲ್ಲು ತೂರಾಟ ಆಯ್ತು.! ಬೇಸರ ವ್ಯಕ್ತ ಪಡಿಸಿದ ನಟ ವಿನಯ್ ಗೌಡ.!

 

ಪ್ರಪಂಚದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎಂದು ಕರೆಸಿಕೊಂಡಿರುವ ಬಿಗ್ ಬಾಸ್ (Bigboss) ಕನ್ನಡ ಭಾಷೆಯಲ್ಲಿ ಕೂಡ ಕಳೆದ ಹತ್ತು ವರ್ಷಗಳಿಂದ ಪ್ರಸಾರವಾಗುತ್ತಿದೆ. ಈ ಬಾರಿ ಬಿಗ್ ಬಾಸ್ ಸೀಸನ್ 10 ಹ್ಯಾಪಿ ಬಿಗ್ ಬಾಸ್ ಎನ್ನುವ ಟ್ಯಾಗ್ ಲೈನ್ ನೊಂದಿಗೆ ಆರಂಭವಾದರೂ ಅಗ್ರೆಶನ್ ಸೀಸನ್ ಆಗಿ ಕಾಣಿಸಿಕೊಂಡಿತು.

ಬಿಗ್ ಬಾಸ್ ಮನೆ ಎಂದ ಮೇಲೆ ಟಾಸ್ಕ್ ಗಳ ನಡುವೆ ಮನಸ್ತಾಪಗಳಾಗುವುದು, ಜಗಳಗಳಾಗುವುದು, ಮಾತುಗಳಾಗುವುದು ಸರ್ವೆ ಸಾಮಾನ್ಯ. ಆದರೆ ಈ ಸೀಸನ್ ಬಹುಪಾಲು ಬರೀ ಕೋ’ಪ, ಮ’ನ’ಸ್ತಾ’ಪ, ಜ’ಗ’ಳ, ಅವಾಂತರಗಳು ಹಾಗೂ ಕ’ಣ್ಣೀ’ರೆ ತುಂಬಿತ್ತು. ಇದರ ಪರಿಣಾಮ ಮನೆ ಒಳಗಿದ್ದವರಿಗೆ ಮಾತ್ರವಲ್ಲದೆ ಮನೆ ಹೊರಗಿದ್ದ ಕಂಟೆಸ್ಟೆಂಟ್‌ ಗಳ ಮನೆಯವರೆಗೂ ಈ ಕಾವು ತಟ್ಟಿದೆ.

ನೇರವಾಗಿ ಹೇಳಬೇಕು ಎಂದರೆ ಬಿಗ್ ಬಾಸ್ ಮನೆಯಲ್ಲಿ ಆನೆ ಎಂದು ಕಳುಹಿಸಿಕೊಂಡಿದ್ದ ವಿನಯ್ (Vinay) ಅವರು ಮತ್ತು ಬಿಗ್ ಬಾಸ್ ಮನೆಯ ಸಿಂಹಿಣಿ ಎಂದು ಕರೆಸಿಕೊಂಡಿದ್ದ ಸಂಗೀತ ಅವರು ಈ ಸೀಸನ್ ನ ಎಲ್ಲಾ ವಾರಗಳಲ್ಲೂ ಕಿತ್ತಾಡಿಕೊಳ್ಳುತ್ತಲೇ ಬಂದರು.

ಈ ಸುದ್ದಿ ಓದಿ:- ಕಾರ್ತಿಕ್ ಗೆದ್ರೆ ನಾನ್ಯಾಕೆ ಖುಷಿ ಪಡಬೇಕು.? ಸಂದರ್ಶನದಲ್ಲಿ ಖಡಕ್ ಉತ್ತರ ಕೊಟ್ಟ ನಟಿ ಸಂಗೀತಾ.!

ಕೆಲವು ಹಂತಗಳಲ್ಲಿ ಮಿತಿಮೀರಿ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳುವುದರ ಜೊತೆಗೆ ಇಮೇಜಿಗೆ ಡ್ಯಾಮೇಜ್ ಆಗುವ ಘಟನೆಗಳು ಕೂಡ ನಡೆದು ಹೋದವು. ಅದರಲ್ಲೂ ಹಳ್ಳಿ ಮನೆ ಟಾಸ್ಕ್ ನಲ್ಲಿ ನಡೆದ ಬಳೆ ಗಲಾಟೆ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಗಿ ವಿನಯ್ ಅವರು ಬಹಳ ನೆಗೆಟಿವ್ ಆಗಿ ಟ್ರೋಲ್ ಕೂಡ ಆದರು.

ಸ್ವಭಾವತಃ ಆಗಿರದ ವಿನಯ್ ವ್ಯಕ್ತಿತ್ವ ನೆ’ಗೆ’ಟಿ’ವ್ ಆಗಿ ಕಾಣಲು ಅದೇ ಘಟನೆ ಕಾರಣವಾಯಿತು. ಇದು ವಿನಯ್ ಪತ್ನಿ ಅಕ್ಷತಾ ಹಾಗೂ ಮಗ ರಿಷಿ ಮೇಲೆ ಕೂಡ ಪರಿಣಾಮ ಬೀರಿತ್ತಂತೆ. ವಿನಯ್ ಪತ್ನಿ ಅಕ್ಷತಾ ಅವರೇ ಈ ಹಿಂದೆ ಸಂದರ್ಶನ ಒಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ವಿನಯ್ ಅವರು ಮಗುವಿನಂತಹ ಸ್ವಭಾವ ಹೊಂದಿದ್ದಾರೆ ಅವರು ತುಂಬಾ ಪಾಸಿಟಿವ್ ಮೈಂಡೆಡ್, ಆದರೆ ಪ್ರೋಮೋಗಳಲ್ಲಿ ಮಾತ್ರ ನೆಗೆಟಿವ್ ಆಗಿ ತೋರಿಸುತ್ತಿದ್ದಾರೆ.

ಇದನ್ನು ನೋಡಿಕೊಂಡು ಆನೇಕರು ನನಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ, ನನ್ನ ಮಗ ಶಾಲೆಗೆ ಹೋಗಲು ಆಗುವುದಿಲ್ಲ, ನಮ್ಮ ಮೇಲೆ ಕಲ್ಲು ತೂರಾಟ ಕೂಟ ಆಗಿತ್ತು, ನಾವು ಹೊರಗಡೆ ಕಾಲಿಡಲು ಭ’ಯ ಮತ್ತು ಹಿಂ’ಸೆ ಆಗಿದೆ ಎಂದು ಹೇಳಿಕೊಂಡಿದ್ದರು.

ಈ ಸುದ್ದಿ ಓದಿ:- ರಶ್ಮಿಕಾ ವಿಜಯ್ ಮದುವೆ ಆದ್ರೆ ಅವರ ಜೀವನದಲ್ಲಿ ದೊಡ್ಡ ದು’ರಂ’ತ ನಡೆಯಲಿದೆ.! ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ.!

ಈಗ ವಿನಯ್ ಅವರು ಮನೆಯಿಂದ ಹೊರ ಬಂದ ಮೇಲೆ ಕುಟುಂಬವನ್ನೇ ಸರ್ವಸ್ವ ಎಂದು ಪ್ರೀತಿಸುವ ಅವರಿಗೂ ಈ ವಿಷಯಗಳನ್ನು ಕೇಳಿ ಬಹಳ ದುಃ’ಖ ಆಗಿದೆಯಂತೆ. ಆದರೆ ವಿನಯ್ ಅವರು ಇದಕ್ಕೆ ಕೊಡುವ ಉತ್ತರ ಏನೆಂದರೆ, ನಾನು ಅದನ್ನು ಉದ್ದೇಶ ಪೂರ್ವಕವಾಗಿ ಹೇಳಲಿಲ್ಲ ಮಾತಿನ ಫ್ಲೋ ನಲ್ಲಿ ಆ ಮಾತುಗಳೆಲ್ಲ ಬಂದವು.

ಆದರೆ ಕೆಲ ವಿಷಯಗಳನ್ನು ಇಟ್ಟುಕೊಂಡು ಎಳೆದಾಡಿ ದೊಡ್ಡದು ಎನ್ನುವ ರೀತಿ ಮಾಡಿಬಿಟ್ಟರು. ಅದಕ್ಕಿಂತ ದೊಡ್ಡ ದೊಡ್ಡ ಮಾತುಗಳನ್ನು ಕೂಡ ಅಲ್ಲಿ ಆಡಿದ್ದಾರೆ ಆದರೆ ನನ್ನ ಮಾತು ದೊಡ್ಡದಾಯಿತು. ತಪ್ಪಾಗಿದೆ ಎಂದು ಗೊತ್ತಾದ ತಕ್ಷಣವೇ ನಾನು ಕ್ಷಮೆ ಕೂಡ ಕೇಳಿದೆ ಎಂದು ಹೇಳಿಕೊಂಡಿದ್ದಾರೆ. ಕೊನೆ ದಿನಗಳಲ್ಲಿ ವಿನಯ್ ರವರು ಬಹಳ ಪಾಸಿಟಿವ್ ಆಗಿ ಕಾಣಿಸಿಕೊಂಡರು ಆದರೆ ನಾಲ್ಕನೇ ಸ್ಥಾನಕ್ಕೆ ಸಮಧಾನ ಪಟ್ಟುಕೊಳ್ಳಬೇಕಾಯಿತು.

 

Entertainment Tags:Kannada Bigboss season 10, Vinay Gowda

Post navigation

Previous Post: ಕಾರ್ತಿಕ್ ಗೆದ್ರೆ ನಾನ್ಯಾಕೆ ಖುಷಿ ಪಡಬೇಕು.? ಸಂದರ್ಶನದಲ್ಲಿ ಖಡಕ್ ಉತ್ತರ ಕೊಟ್ಟ ನಟಿ ಸಂಗೀತಾ.!
Next Post: ರಿಯಾಲಿಟಿ ಶೋಗೆ ಬಂದು ನೀನು ಇಷ್ಟ ಅಂದ್ರೆ ಅದ್ನೆಲ್ಲಾ ನಂಬುವಷ್ಟು ದಡ್ಡಿ ನಾನಲ್ಲ.! ಸ್ನೇಹಿತ್ ಮೇಲೆ ಗಂಭೀರ ಆರೋಪ ಮಾಡಿದ ನಮ್ರಾತ ಗೌಡ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme