Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಬಿಗ್ ಬಾಸ್ ಮನೆಗೆ ವರ್ತೂರ್ ಸಂತೋಷ್ ರೀ ಎಂಟ್ರಿ, ಗೆಟೌಟ್ ಎಂದ ಮನೆ ಮಂದಿ.!

Posted on October 31, 2023 By Admin No Comments on ಬಿಗ್ ಬಾಸ್ ಮನೆಗೆ ವರ್ತೂರ್ ಸಂತೋಷ್ ರೀ ಎಂಟ್ರಿ, ಗೆಟೌಟ್ ಎಂದ ಮನೆ ಮಂದಿ.!

 

ಕನ್ನಡದ ಬಿಗ್ ಬಾಸ್ (Bigboss) ಇತಿಹಾಸದಲ್ಲಿ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಿಂದಲೇ ಕಂಟೆಸ್ಟೆಂಟ್ ಒಬ್ಬರನ್ನು ರಾತ್ರೋ ರಾತ್ರಿ ಪೊಲೀಸರು ಬಂಧಿಸಿದ್ದರು. ಅದರಲ್ಲೂ ಜನರ ನೆಚ್ಚಿನ ಕಂಟೆಸ್ಟೆಂಟ್ ವರ್ತೂರ್ ಸಂತೋಷ (Varthur Santhosh re entry) ಅವರನ್ನು ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಕಾರಣ ಕೊಟ್ಟು ನೋಟಿಸ್ ನೀಡದೆ ಬಂಧಿಸಿದ್ದು ಕರ್ನಾಟಕ ಜನತೆಯ ಆಕ್ರೋಶಕ್ಕೆ ಕಾರಣವಾಗಿತ್ತು.

ನಂತರ ಸೋಶಿಯಲ್ ಮೀಡಿಯಾದಲ್ಲಿ ವರ್ತ ಸಂತೋಷ್ ಪರವಾಗಿ ಒಂದು ಅಭಿಯಾನವೇ ನಡೆಯಿತು ಎಂದೇ ಹೇಳಬಹುದು. ಪ್ರಗತಿಪರ ರೈತ ಹಾಗೂ ಹಳ್ಳಿಕಾರ್ ತಳಿಯ ರಕ್ಷಕನಾಗಿರುವ ವರ್ತೂರ್ ಸಂತೋಷ್ ಪರ ವಕಾಲತ್ತು ವಹಿಸಿದ ಕರ್ನಾಟಕದ ಜನತೆ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತ ಸೆಲೆಬೆಟ್ರಿಗಳು ಹಾಗೂ ರಾಜಕಾರಣಿಗಳು ಇದೇ ರೀತಿ ಪೆಂಡೆಂಟ್ ಹಾಗೂ ವನ್ಯಜೀವಿ ಪಳೆಯುಳಿಕೆಗಳ ಬಳಕೆ ಮಾಡಿರುವುದಕ್ಕೆ ಸಾಕ್ಷಿಯಾಗಿ ಫೋಟೋ ಹಾಗೂ ವಿಡಿಯೋಗಳನ್ನು ವೈರಲ್ ಮಾಡಲು ಶುರು ಮಾಡಿದರು.

ನಿಧಾನವಾಗಿ ರಾಜ್ಯದಲ್ಲೆಡೆ ಸುದ್ದಿ ಹೆಚ್ಚು ಸದ್ದಾಗುತ್ತಿದ್ದಂತೆ ನ್ಯಾಯಾಂಗ ಬಂಧನದಲ್ಲಿದ್ದ ಸಂತೋಷ್ ಅವರಿಗೆ ಬೇಲ್ ನೀಡಲಾಗಿದೆ. ಸಂತೋಷ್ ಈ ವಿಚಾರಣೆ ಮುಗಿಸಿದ ಬಳಿಕ ಮತ್ತೆ ಬಿಗ್ ಬಾಸ್ ಗೆ ಬರಬೇಕು ಎನ್ನುವುದು ಬಿಗ್ ಬಾಸ್ ಅಭಿಮಾನಿಗಳ ಹಾಗೂ ವರ್ತೂರ್ ಸಂತೋಷ್ ಪ್ಯಾನ್ಸ್ ಅಭಿಪ್ರಾಯ. ಇದಕ್ಕೆ ಪ್ರತಿಕ್ರಿಯಿಸಿರುವ ಕುಟುಂಬದವರು ಕೂಡ ನಾವು ಬಿಗ್ ಬಾಸ್ ಇಂದನೇ ಸಂತೋಷ್ ರನ್ನು ರಿಸೀವ್ ಮಾಡಿಕೊಳ್ಳುತ್ತೇವೆ.

ಆತ ಅಲ್ಲಿ ಹೋದ ಒಂದೇ ವಾರಕ್ಕೆ ಎಲಿಮಿನೇಟ್ ಆದರೂ ಪರವಾಗಿಲ್ಲ, ಹೇಗೆ ಗೌರವಾನ್ವಿತವಾಗಿ ಕಳುಹಿಸಿಕೊಟ್ಟಿದ್ದೇವೋ ಅದೇ ರೀತಿಯಾಗಿ ಮನೆಗೆ ಕರೆದುಕೊಂಡು ಹೋಗಬೇಕು ಅವನು ಯಾರನ್ನು ಕೊಲೆ ಮಾಡಿಲ್ಲ, ದರೋಡೆ ಮಾಡಿಲ್ಲ ಎಂದಿದ್ದರು. ಹಾಗಾಗಿ ಸಂತೋಷ್ ಅವರು ರಿಲೀಸ್ ಆದ ತಕ್ಷಣವೇ ಬಿಗ್ ಬಾಸ್ ಗೆ ಹೋಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು.

ಆದರೆ ತಡವಾಗಿ ಆದರೂ ಮತ್ತೆ ಬಿಗ್ ಬಾಸ್ ಮನೆಗೆ ವರ್ತೂರು ಸಂತೋಷ್ ರವರು ರೀ ಎಂಟ್ರಿ ಕೊಟ್ಟಿದ್ದಾರೆ. ನೆನ್ನೆ ತಡೆ ರಾತ್ರಿ ಬಿಗ್ ಬಾಸ್ ಮನೆಗೆ ಹೋದ ವರ್ತೂರು ಸಂತೋಷ್ ಅವರನ್ನು ಕಂಡು ಇತರೆ ಕಂಟೆಸ್ಟೆಂಟ್ಗಳು ಮೊದಲಿಗೆ ಅಪ್ಪಿಕೊಂಡು ಸ್ವಾಗತಿಸಿದರಾದರು ಸಮಯ ಕಳೆದಂತೆ ಅವರ ವಿಚಾರಣೆ ಕೂಡ ಜೋರಾಗಿತ್ತು.

ಮನೆಯಿಂದ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಕ್ಕಾಗಿ ಸಹಜವಾಗಿ ಕಂಟೆಸ್ಟಂಟ್ ಗಳಿಗೆ ಆ ಕ್ಯೂರಿಯೋಸಿಟಿ ಇರುತ್ತದೆ ಅದೇ ರೀತಿ ಅವರು ಸಹ ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಆದರೆ ಬಿಗ್ ಬಾಸ್ ನಿಯಮದ ಪ್ರಕಾರ ಹೊರಗಿನ ವಿಷಯಗಳನ್ನು ಒಳಗೆ ತಿಳಿಸಬಾರದ ಕಾರಣ ಸಂತೋಷ್ ರವರು ಸಂಭಾಳಿಸಿದ್ದಾರೆ.

ಇದಾದ ಬಳಿಕ ಆ ವಾರದ ನಾಮಿನೇಷನ್ ಪ್ರಕ್ರಿಯೆ ಮುಂದುವರೆದಿದೆ. ಒಂದು ವಾರ ಮನೆಯಿಂದ ಹೊರಗಿದ್ದು ಮತ್ತೆ ಮನೆಗೆ ರೀ ಎಂಟ್ರಿ ಆಗಿರುವ ವರ್ತೂರ್ ಸಂತೋಷ್ ನಾಮಿನೇಟ್ ಆಗಬೇಕೇ ಎಂದು ಬಿಗ್ ಬಾಸ್ ಡೈರೆಕ್ಟ್ ಆಗಿ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ವಿನಯ್, ಸಂಗೀತ ಶೃಂಗೇರಿ, ಮೈಕಲ್ ಹಾಗೂ ಸ್ನೇಹಿತ್ ಮುಂತಾದವರು ತಮ್ಮದೇ ಆದ ಕಾರಣಗಳನ್ನು ಕೊಟ್ಟು ನಾಮಿನೇಟ್ ಆಗಬೇಕು ಎಂದು ನಾಮಿನೇಟ್ ಮಾಡಿದ್ದಾರೆ.

ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಒಂದು ವಾರದ ಬಳಿಕ ಮನೆಗೆ ಹೋಗಿರುವ ಸಂತೋಷ್ ಅವರನ್ನೇ ಮತ್ತೆ ಟಾರ್ಗೆಟ್ ಮಾಡಿರುವುದು ಹೊರಗಿನವರಿಗೂ ಕೂಡ ಬಹಳ ನೋ’ವನ್ನು ತಂದಿದೆ. ಅಲ್ಲಿರುವವರು ಎಷ್ಟು ನಾಮಿನೇಟ್ ಮಾಡಿದರು ನಾವು ನಿಮ್ಮನ್ನು ವೋಟ್ ಮಾಡಿ ಗೆಲ್ಲಿಸುತ್ತೇವೆ ಎನ್ನುತ್ತಿದ್ದಾರೆ ಕನ್ನಡಿಗರು ಮುಂದೇನಾಗಲಿದೆಯೋ ಕಾದು ನೋಡೋಣ.

Viral News

Post navigation

Previous Post: ಅಮ್ಮನ ಮುಡಿಗೆ ಪ್ರೀತಿಯಿಂದ ಮಲ್ಲಿಗೆ ಹೂ ಮುಡಿಸಿದ ಯಶ್ ಪುತ್ರ.! ವಿಡಿಯೋ ವೈರಲ್
Next Post: ಶಿವಣ್ಣ ಹಾಕೋ ಬಟ್ಟೆ ಬೆಲೆ ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme